40 ಮೀ ಉದ್ದದ ಸುರಂಗ ಕೊರೆದು ಐಒಸಿಎಲ್‌ನ ತೈಲಕ್ಕೆ ಕನ್ನ: ಖದೀಮನ ಬಂಧನ

Published : Oct 07, 2023, 07:42 AM IST
40 ಮೀ ಉದ್ದದ ಸುರಂಗ ಕೊರೆದು ಐಒಸಿಎಲ್‌ನ ತೈಲಕ್ಕೆ ಕನ್ನ: ಖದೀಮನ ಬಂಧನ

ಸಾರಾಂಶ

ಸುಮಾರು 40 ಮೀ. ಉದ್ದದ ಸುರಂಗ ತೋಡಿ ಇಂಡಿಯನ್‌ ಆಯಿಲ್‌ ಕಾರ್ಪೋರೇಶನ್‌ ಲಿಮಿಟೆಡ್‌ಗೆ ಸೇರಿದ ಲಕ್ಷಾಂತರ ರು. ಮೌಲ್ಯದ ತೈಲ ಕಳ್ಳತನ ಮಾಡಿದ ಘಟನೆ ದೆಹಲಿಯ ದ್ವಾರಕಾ ಬಳಿ ನಡೆದಿದೆ.

ನವದೆಹಲಿ: ಸುಮಾರು 40 ಮೀ. ಉದ್ದದ ಸುರಂಗ ತೋಡಿ ಇಂಡಿಯನ್‌ ಆಯಿಲ್‌ ಕಾರ್ಪೋರೇಶನ್‌ ಲಿಮಿಟೆಡ್‌ಗೆ ಸೇರಿದ ಲಕ್ಷಾಂತರ ರು. ಮೌಲ್ಯದ ತೈಲ ಕಳ್ಳತನ ಮಾಡಿದ ಘಟನೆ ದೆಹಲಿಯ ದ್ವಾರಕಾ ಬಳಿ ನಡೆದಿದೆ. ಈ ಪ್ರಕರಣದ ಆರೋಪಿಯನ್ನು ಪೊಲೀಸರು ಬಂಧಿಸಿದ್ದು, ಈತ ಕಳೆದ ಜೂನ್‌ನಿಂದಲೂ ತೈಲ ಕಳ್ಳತನ ಮಾಡುತ್ತಿದ್ದ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 

ದ್ವಾರಕ ಬಳಿ ತೈಲ ಪೂರೈಕೆ ಮಾಡುವ ಪೈಪ್‌ಗಳನ್ನು ಐಒಸಿಎಲ್‌ 2 ಮೀ. ಆಳದಲ್ಲಿ ಹೂತಿದೆ. ಇದರಿಂದ ಕಳ್ಳತನ ಮಾಡುವುದಕ್ಕಾಗಿ ಆರೋಪಿ ಸುಮಾರು 40 ರಿಂದ 45 ಮೀ. ಉದ್ದದ ಸುರಂಗ ಕೊರೆದು, ತಿಂಗಳುಗಟ್ಟಲೇ ತೈಲ ಕಳ್ಳತನ ಮಾಡಿದ್ದಾನೆ. ಈಗಾಗಲೇ ಲಕ್ಷಾಂತರ ರು. ಮೌಲ್ಯದ ತೈಲ ಕಳ್ಳತನವಾಗಿರಬಹುದು ಎಂದು ಹೇಳಲಾಗಿದೆ. ದ್ವಾರಕ ಬಳಿ ತೈಲ ಕಳ್ಳತನ ನಡೆಯುತ್ತಿರಬಹುದು ಎಂಬ ಅನುಮಾನದ ಮೇಲೆ ಕಣ್ಗಾವಲು ವಹಿಸಲಾಗಿತ್ತು. ಹೀಗಾಗಿ ಕಳ್ಳ ಸಿಕ್ಕಿಬಿದ್ದಿದ್ದಾನೆ. ಬಂಧಿತ ವ್ಯಕ್ತಿಯನ್ನು 52  ವರ್ಷದ ರಾಕೇಶ್ ಎಂದು ಗುರುತಿಸಲಾಗಿದೆ. 

ನಾಪತ್ತೆಯಾದ 22 ಸೈನಿಕರ ಪೈಕಿ 7 ಮಂದಿ ಯೋಧರ ಶವ ಪತ್ತೆ: ಉಳಿದವರಿಗಾಗಿ ಮುಂದುವರಿದ ಶೋಧ

ಪ್ರೇಯಸಿ ಜಾಕ್ವೆಲಿನ್ ಫೋಟೋಗೆ ಕಾಮೆಂಟ್: ಗಾಯಕ ಮಿಕಾ ಸಿಂಗ್‌ಗೆ ನೊಟೀಸ್ ಕಳುಹಿಸಿದ ಸುಕೇಶ್ ಚಂದ್ರಶೇಖರ್

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಬಾಬ್ರಿ ಮಸೀದಿಗೆ ಅಡಿಗಲ್ಲು ವಿವಾದ ಬೆನ್ನಲ್ಲೇ ಬಂಗಾಳದಲ್ಲಿ 5 ಲಕ್ಷ ಹಿಂದೂಗಳಿಂದ ಭಗವದ್ಗೀತೆ ಪಠಣ
ಖ್ಯಾತ ಸ್ಟಾರ್ ನಟನಿಗೆ ಬಿಷ್ಟೋಯ್ ಗ್ಯಾಂಗ್ ಬೆದರಿಕೆ! ಆತಂಕದಲ್ಲಿರುವ ಫ್ಯಾನ್ಸ್, ಏನಾಗ್ತಿದೆ ಅಲ್ಲೀಗ?