ದಿಲ್ಲಿ ದಂಗೆಕೋರರಿಂದ ಕೆಂಪುಕೋಟೆ ಕ್ಯಾಮರಾ, ಸೇರಿ ಹಲವು ವಸ್ತು ಜಖಂ!

Published : Jan 28, 2021, 11:14 AM IST
ದಿಲ್ಲಿ ದಂಗೆಕೋರರಿಂದ ಕೆಂಪುಕೋಟೆ ಕ್ಯಾಮರಾ, ಸೇರಿ ಹಲವು ವಸ್ತು ಜಖಂ!

ಸಾರಾಂಶ

ದಿಲ್ಲಿ ದಂಗೆಕೋರರಿಂದ ಕೆಂಪುಕೋಟೆ ಕ್ಯಾಮರಾ, ಸೇರಿ ಹಲವು ವಸ್ತು ಜಖಂ| ಘಟನೆಯ ವರದಿ ಸಲ್ಲಿಕೆಗೆ ಪ್ರವಾಸೋದ್ಯಮ ಸಚಿವ ಸೂಚನೆ

ನವದೆಹಲಿ(ಜ.28): ಮಂಗಳವಾರ ದೆಹಲಿಯಲ್ಲಿ ನಡೆದ ಹಿಂಸಾಚಾರದ ವೇಳೆ ಕೆಂಪುಕೋಟೆಯಲ್ಲೂ ಭಾರೀ ಹಾನಿ ಸಂಭವಿಸಿದೆ. ರೈತರ ಗುಂಪಿನಲ್ಲಿದ್ದ ದುಷ್ಕರ್ಮಿಗಳ ತಂಡವು, ಕೆಂಪುಕೋಟೆಯ ಆಡಳಿತ ಕಚೇರಿಗಳು, ಭದ್ರತಾ ಕ್ಯಾಮರಾಗಳು, ಕಿಟಕಿಯ ಗಾಜುಗಳು, ಟಿಕೆಟ್‌ ಕೌಂಟರ್‌ಗಳು, ಏಬ್ಯಾಗೇಜ್‌ಗಳ ಸ್ಕಾ್ಯನರ್‌ಗಳು, ಸ್ವಯಂಚಾಲಿತ ಗೇಟುಗಳು ಪುಡಿ-ಪುಡಿ ಮಾಡಿದೆ.

ಅಲ್ಲದೆ ಸಿಐಎಸ್‌ಎಫ್‌ ಭದ್ರತಾ ಸಿಬ್ಬಂದಿಯ ವಾಹನ ಕೂಡಾ ದಾಳಿಯಲ್ಲಿಲ ನಜ್ಜುಗುಜ್ಜಾಗಿದೆ.

ಈ ನಡುವೆ ಕೇಂದ್ರ ಸಂಸ್ಕೃತಿ ಮತ್ತು ಪ್ರವಾಸೋದ್ಯಮ ಸಚಿವ ಪ್ರಹ್ಲಾದ್‌ ಪಟೇಲ್‌ ಬುಧವಾರ ಕೆಂಪುಕೋಟೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಅಲ್ಲದೆ ರೈತರ ಪ್ರತಿಭಟನೆ ಕುರಿತಾದ ವರದಿ ಸಲ್ಲಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು. ಈ ವಿಚಾರದ ಬಗ್ಗೆ ಈಗೇನು ಮಾತನಾಡಲ್ಲ. ವರದಿ ಬಂದ ಬಳಿಕ ಎಲ್ಲದಕ್ಕೂ ಉತ್ತರಿಸುತ್ತೇನೆ ಎಂದಷ್ಟೇ ಹೇಳಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

Asha Bhosle Networth: ಪ್ರಸಿದ್ಧ ಗಾಯಕಿ ಮಾತ್ರವಲ್ಲ ವಿದೇಶದಲ್ಲಿ ಯಶಸ್ವಿ ಉದ್ಯಮಿಯೂ ಹೌದು! ನಿವ್ವಳ ಆಸ್ತಿ ಎಷ್ಟು?
ಭಾರತೀಯರ ಬಳಿ ಇದೆ ವಿಶ್ವದ ಟಾಪ್ 10 ಬ್ಯಾಂಕ್‌ಗಳಲ್ಲಿ ಇರುವುದಕ್ಕಿಂತ ಹೆಚ್ಚು ಚಿನ್ನ: ಬಲಿಷ್ಠ ರಾಷ್ಟ್ರಗಳ ಜಿಡಿಪಿಯನ್ನೂ ಮೀರಿಸಿದ ಸಂಪತ್ತು