
ಲಂಡನ್ (ಡಿ.24): ‘ಯಾವುದೇ ಬ್ರಿಟಿಷ್ ನಾಗರಿಕರಿಗೆ ಬಾಹ್ಯ ದೇಶಗಳು ಕಿರುಕುಳ ಹಾಗೂ ಬೆದರಿಕೆ ನೀಡುವುದನ್ನು ನಾವು ಸಹಿಸುವುದಿಲ್ಲ. ನಾವು ನಮ್ಮ ನಾಗರಿಕರಿಗೆ ರಕ್ಷಣೆ ನೀಡುತ್ತೇವೆ’ ಎಂದು ಬ್ರಿಟನ್ ಭದ್ರತಾ ಸಚಿವ ಡಾನ್ ಜಾರ್ವಿಸ್ ಹೇಳಿದ್ದಾರೆ. ಬ್ರಿಟನ್ನಲ್ಲಿ ನೆಲೆಸಿರುವ ಹಲವು ಖಲಿಸ್ತಾನಿ ಬೆಂಬಲಿತ ಸಿಖ್ಖರು, ‘ನಮ್ಮನ್ನು ಭಾರತ ಸರ್ಕಾರ ಅಥವಾ ಪರವಾಗಿ ಟಾರ್ಗೆಟ್ ಮಾಡಲಾಗುತ್ತಿದೆ’ ಎಂದು ದೂರು ಸಲ್ಲಿಸಿದ್ದರು. ಅದರ ಬೆನ್ನಲ್ಲೇ ಈ ಹೇಳಿಕೆಗಳು ಬಂದಿವೆ.
ಖಲಿಸ್ತಾನಿ ಉಗ್ರರನ್ನು ಬೆಂಬಲಿಸುವ ಕೆನಡಾ ಮತ್ತು ಅಮೆರಿಕ ಸಿಖ್ ಸಂಘಟನೆಗಳು ಇದೇ ರೀತಿಯ ಆರೋಪ ಮಾಡಿದ್ದವು ಹಾಗೂ ಆ ದೇಶಗಳ ಸರ್ಕಾರಗಳು ಅವರ ಪರ ನಿಂತಿದ್ದವು. ಈಗ ಇಂಥ ಸಂಘಟನೆಗಳಿಗೆ ನೆರವು ನೀಡುತ್ತಿರುವ 3ನೇ ದೇಶ ಬ್ರಿಟನ್ ಎನ್ನಿಸಿಕೊಂಡಿದೆ ಎಂದು ಈಗಿನ ವಿದ್ಯಮಾನದ ಬಳಿಕ ಅನಿಸಿಕೆ ವ್ಯಕ್ತವಾಗಿದೆ.
ಆಗಿದ್ಧೇನು?:
ಸುಖ್ಬೀರ್ ಸಿಂಗ್ ಬಾದಲ್ ಕೊಲೆ ಯತ್ನ; ಉಗ್ರ ನಾರಾಯಣ ಸಿಂಗ್ಗೆ ಖಲಿಸ್ತಾನಿ ಲಿಂಕ್?
ಭಾರತ ಸರ್ಕಾರದೊಂದಿಗೆ ಸಂಬಂಧ ಹೊಂದಿರುವ ಅಧಿಕಾರಿಗಳು ಬ್ರಿಟನ್ ವಿಮಾನ ನಿಲ್ದಾಣಗಳಲ್ಲಿ ನಮ್ಮನ್ನು ಪ್ರಶ್ನಿಸುತ್ತಿದ್ದಾರೆ ಎಂದು ಸಿಖ್ಖರು ದೂರಿದ್ದರು. ಈ ಸಂಬಂಧ ಖಲಿಸ್ತಾನಿ ಅಂಗಸಂಸ್ಥೆಗಳೊಂದಿಗೆ ನಂಟು ಹೊಂದಿರುವ
‘ಸಿಖ್ ಫೆಡರೇಶನ್’ಗೆ ಪತ್ರ ಬರೆದಿರುವ ಸಚಿವ ಜಾರ್ವಿಸ್, ಅವರಿಗೆ ರಕ್ಷಣೆಯ ಭರವಸೆ ನೀಡಿದ್ದಾರೆ.
ನಾವು ಯಾವುದೇ ಬೆದರಿಕೆ ಅಥವಾ ಜೀವ ಬೆದರಿಕೆಗಳನ್ನು ಸಹಿಸುವುದಿಲ್ಲ ಮತ್ತು ನಮ್ಮ ಗುಪ್ತಚರ ಸಂಸ್ಥೆಗಳು ಮತ್ತು ಪೊಲೀಸ್ ಪಡೆಗಳ ಮೂಲಕ ಜನರನ್ನು ಸುರಕ್ಷಿತವಾಗಿ ಇರಿಸಲು ಎಲ್ಲ ಕ್ರಮ ಜರುಗಿಸುತ್ತೇವೆ. ಯಾವುದೇ ವಿದೇಶಿ ಶಕ್ತಿಗಳ ಪ್ರಯತ್ನಗಳನ್ನು ನಾವು ಸಹಿಸಲ್ಲ’ ಎಂದು ಡಿ.10ರಂದು ಪತ್ರ ಬರೆದಿದ್ದಾರೆ.
ಅಲ್ಲದೆ, ಕೆನಡಾದಲ್ಲಿ ನಡೆದಿರುವ ಖಲಿಸ್ತಾನಿ ಉಗ್ರ ನಿಜ್ಜರ್ ಹತ್ಯೆ ತನಿಖೆಗೆ ಭಾರತ ಸಹಕರಿಸಬೇಕು ಎಂದೂ ಜಾರ್ವಿಸ್ ಆಗ್ರಹಿಸಿದ್ದಾರೆ.
ಬ್ರಿಟನ್ನಲ್ಲಿ 5,35,000 (ಬ್ರಿಟಿಷ್ ಜನಸಂಖ್ಯೆಯ ಶೇ0.8ರಷ್ಟು) ಸಿಖ್ಖರಿದ್ದಾರೆ.
ಆಗಂತುಕನ ಟಾರ್ಗೆಟ್ ಆಗಿದ್ದು ಪಂಜಾಬಿನ ಮಾಜಿ ಡಿಸಿಎಂ: ಗುಂಡಿಟ್ಟವನು ಖಲಿಸ್ತಾನಿಯೋ, ಪಾಕಿಸ್ತಾನಿಯೋ?
ಸಿಬಲ್ ಕಿಡಿ:
ಭಾರತದ ಮಾಜಿ ವಿದೇಶಾಂಗ ಕಾರ್ಯದರ್ಶಿ ಕನ್ವಲ್ ಸಿಬಲ್ ಮಾತನಾಡಿ, ‘ಭಾರತದ ಸಾರ್ವಭೌಮತೆಗೆ ಬೆದರಿಕೆ ಹಾಕಲು ಬ್ರಿಟನ್ ಅಧಿಕಾರಿಗಳು, ಖಲಿಸ್ತಾನಿ ಉಗ್ರಗಾಮಿಗಳು ಮತ್ತು ಬ್ರಿಟನ್ನಲ್ಲಿನ ಕಾರ್ಯಕರ್ತರನ್ನು ಬಹಳ ಹಿಂದಿನಿಂದಲೂ ಪ್ರೋತ್ಸಾಹಿಸಿದ್ದಾರೆ’ ಎಂದಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ