
ಬೆಂಗಳೂರು (ಫೆ.05): ಏರೋ ಇಂಡಿಯಾ ವೈಮಾನಿಕ ಪ್ರದರ್ಶನದಲ್ಲಿ ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ಅವರು ಗುರುವಾರ ‘ತೇಜಸ್’ ಲಘು ಯುದ್ಧ ವಿಮಾನದಲ್ಲಿ ಹಾರಾಟ ನಡೆಸಿದ್ದು, ಪೈಲಟ್ ಗುಣಶೇಖರ್ ಅವರೊಂದಿಗೆ ಸುಮಾರು 30 ನಿಮಿಷಗಳ ಕಾಲ ಯುದ್ಧ ವಿಮಾನದ ಹಾರಾಟದ ಅನುಭವ ಪಡೆದರು.
Aero India 2021 : ತೇಜಸ್ ಯುದ್ಧ ವಿಮಾನದಲ್ಲಿ 15 ಸಾವಿರ ಅಡಿ ಎತ್ತರದಲ್ಲಿ ತೇಜಸ್ವಿ ಸೂರ್ಯ ..
ಎಚ್ಎಎಲ್ನಿಂದ .48,000 ಕೋಟಿ ವೆಚ್ಚದಲ್ಲಿ 83 ತೇಜಸ್ ಲಘು ಯುದ್ಧ ವಿಮಾನಗಳ ಖರೀದಿಗೆ ರಕ್ಷಣಾ ಇಲಾಖೆ ಒಪ್ಪಂದ ಮಾಡಿಕೊಂಡ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಹಾಗೂ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಕೃತಜ್ಞತೆ ಸಲ್ಲಿಸುವ ಸಲುವಾಗಿ ಗುರುವಾರ ಮಧ್ಯಾಹ್ನ ತೇಜಸ್ನಲ್ಲಿ ಹಾರಾಟ ನಡೆಸಿದರು.
ಟಿಕೆಟ್ ಖರೀದಿಗೆ ಹರಸಾಹಸ
ಏರೋ ಇಂಡಿಯಾ ಜೊತೆಗಿನ ಬಾಲ್ಯದ ನೆನಪು ಮೆಲಕು ಹಾಕಿದ ಅವರು, ನಾನು ಚಿಕ್ಕವನಿದ್ದಾಗಿನಿಂದ ಏರ್ ಶೋ ಪಾಸ್ ತೆಗೆದುಕೊಳ್ಳಲು ಹಾಗೂ ಟಿಕೆಟ್ ಖರೀದಿಸಲು ಬಹಳ ಕಷ್ಟಪಡುತ್ತಿದ್ದೆ. ಅದು ಸಿಗದೇ ಇದ್ದಾಗನಮ್ಮ ತಂದೆ ದೇವನಹಳ್ಳಿಯ ಯಾರದ್ದೋ ತೋಟದೊಳಗೆ ಕರೆದುಕೊಂಡು ಹೋಗುತ್ತಿದ್ದರು. ಅಲ್ಲಿಂದ ಆಕಾಶ ನೋಡಿ ವಿಮಾನಗಳನ್ನು ಕಂಡು ಖುಷಿಪಡುತ್ತಿದ್ದೆ. ಆದರೆ ಈಗ ಬೆಂಗಳೂರಿನ ಜನರ ಆಶೀರ್ವಾದದಿಂದಾಗಿ ಯುದ್ಧ ವಿಮಾನದಲ್ಲಿ ಹಾರಾಡುವ ಅವಕಾಶ ಬಂತು. ಜೊತೆಗೆ ಗುಣಶೇಖರ್ ಅವರಂತಹ ಎನರ್ಜೆಟಿಕ್ ವ್ಯಕ್ತಿಯೊಂದಿ ಹಾರಾಟ ನಡೆಸಿದ್ದು ಸಂತಸ ತಂದಿದೆ ಎಂದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ