
ಚಂಡೀಗಢ (ಮಾ.28): ರೈತರ ಗುಂಪೊಂದು ಬಿಜೆಪಿ ಶಾಸಕರೋರ್ವರನ್ನು ಥಳಿಸಿ ಅವರ ಬಟ್ಟೆಹರಿದು ನಗ್ನಗೊಳಿಸಿದ ಅಮಾನವೀಯ ಘಟನೆ ಪಂಜಾಬ್ನ ಮುಕ್ತಸಾರ್ ಜಿಲ್ಲೆಯಲ್ಲಿ ಶನಿವಾರ ನಡೆದಿದೆ.
ಅಬೋಹರ್ ಕ್ಷೇತ್ರದ ಶಾಸಕ ಅರುಣ್ ನಾರಂಗ್ ರೈತರಿಂದ ಥಳಿತಕ್ಕೊಳಗಾದವರು. ಮುಕ್ತಸಾರ್ ಜಿಲ್ಲೆಯ ಮಲೌತ್ನಲ್ಲಿ ಶನಿವಾರ ಸುದ್ದಿಗೋಷ್ಠಿಗಾಗಿ ನಾರಂಗ್ ಬಂದಿದ್ದರು. ಆದರೆ ಬಿಜೆಪಿ ನಾಯಕರ ಸುದ್ದಿಗೋಷ್ಠಿ ನಡೆಸಲು ಬಿಡಲ್ಲ ಎಂದು ಹಠಕ್ಕೆ ಬಿದ್ದ ರೈತರು ನಾರಂಗ್ ಮೇಲೆ ಮುಗಿಬಿದ್ದಿದ್ದಾರೆ.
'ಬಂಗಾಳದಲ್ಲಿ ಯಾರೂ ಹೊರಗಿನವರಲ್ಲ, ಬಿಜೆಪಿ ಗೆದ್ದರೆ ಮಣ್ಣಿನ ಮಗನೇ ಸಿಎಂ'
ಈ ವೇಳೆ ಪೊಲೀಸರು ನೋಡನೋಡುತ್ತಿದ್ದಂತೆ ಶಾಸಕರ ಬಟ್ಟೆಹರಿದು ಹಾಕಿದ ರೈತರು ಅವರ ಮೇಲೆ ದಾಳಿ ನಡೆಸಿದರು. ಈ ವೇಳೆ ಮಧ್ಯಪ್ರವೇಶಿಸಿದ ಪೊಲೀಸರು, ಶಾಸಕರನ್ನು ಕಟ್ಟಡವೊಂದರ ಒಳಗೆ ಕರೆದೊಯ್ದು ಮಾನರಕ್ಷಣೆ ಮಾಡಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ