ಉಮಾ ಭಾರತಿಗೆ ಕೊರೋನಾ, ವೈದ್ಯರ ಸಲಹೆ ಮೀರಿ ಬದ್ರೀನಾಥಕ್ಕೆ ಪ್ರಯಾಣ!

Published : Sep 28, 2020, 11:40 AM ISTUpdated : Sep 28, 2020, 11:51 AM IST
ಉಮಾ ಭಾರತಿಗೆ ಕೊರೋನಾ, ವೈದ್ಯರ ಸಲಹೆ ಮೀರಿ ಬದ್ರೀನಾಥಕ್ಕೆ ಪ್ರಯಾಣ!

ಸಾರಾಂಶ

ಮಾಜಿ ಕೇಂದ್ರ ಸಚಿವೆ ಹಾಗೂ ಬಿಜೆಪಿಯ ರಾಷ್ಟ್ರೀಯ ಉಪಾಧ್ಯಕ್ಷೆ ಉಮಾ ಭಾರತಿಗೆ ಕೊರೋನಾ| ವೈದ್ಯರು ಸಲಹೆ ಮೀರಿ ಬದ್ರೀನಾಥಕ್ಕೆ ಪ್ರಯಾಣಿಸಿದ್ದ ಉಮಾ ಭಾರತಿ| ಮೂರು ದಿನಗಳಿಂದ ಅಲ್ಪ ಜ್ವರ

ಭೋಪಾಲ್(ಸೆ.28): ಮಾಜಿ ಕೇಂದ್ರ ಸಚಿವೆ ಹಾಗೂ ಬಿಜೆಪಿಯ ರಾಷ್ಟ್ರೀಯ ಉಪಾಧ್ಯಕ್ಷೆ ಉಮಾ ಭಾರತಿ ಶನಿವಾರ ಕೊರೋನಾ ಸೋಂಕು ದೃಢಪಟ್ಟಿದೆ. ಅವರು ಗುರುವಾರ ಬದ್ರೀನಾಥಕ್ಕೆ ತೆರಳಿದ್ದರು. ಲಭ್ಯವಾದ ಮಾಹಿತಿ ಅನ್ವಯ ಉಮಾ ಭಾರತಿ ಕಳೆದ ವಾರ ಉತ್ತರಾಖಂಡದ ಮಂತ್ರಿ ಧನ್‌ಸಿಂಗ್ ರಾವತ್ ಜೊತೆ ಕೇದಾರನಾಥ ಯಾತ್ರೆಗೆ ತೆರಳಿದ್ದರು. ಇದಾದ ಬಳಿಕ ರಾವತ್‌ಗೆ ಕೊರೋನಾ ಸೋಂಕು ತಗುಲಿದ್ದು ದೃಢಪಟ್ಟಿತ್ತು. ಹೀಗಿರುವಾಗ ಕೆಲ ದಿನಗಳವರೆಗೆ ಪ್ರಯಾಣ ಕೈಗೊಳ್ಳದಂತೆ ಉಮಾ ಭಾರತಿಗೆ ವೈದ್ಯರು ಸಲಹೆ ನೀಡಿದ್ದರು. ಹೀಗಿದ್ದರೂ ಅವರು ಬದ್ರೀನಾಥಕ್ಕೆ ಪ್ರಯಾಣ ಕೈಗೊಂಡಿದ್ದರು. 

ಹೀಗಿರುವಾಗಲೇ ಶನಿವಾರ ತಡರಾತ್ರಿ ಉಮಾ ಭಾರತಿ ಟ್ವೀಟ್ ಒಂದನ್ನು ಮಾಡಿ ಗುಡ್ಡಗಾಡು ಪ್ರಯಾಣದ ಕೊನೆಯ ದಿನ ಅವರು ಅಧಿಕಾರಿಗಳ ಬಳಿ ತನ್ನ ಕೊರೋನಾ ಟೆಸ್ಟ್ ಮಾಡಲು ಮನವಿ ಮಾಡಿದ್ದಾರೆ. ಅವರಿಗೆ ಮೂರು ದಿನಗಳಿಂದ ಕೊಂಚ ಜ್ವರ ಕಾಣಿಸಿಸಿಕೊಂಡಿತ್ತು. ತಾನು ಪ್ರಯಾಣದ ವೇಳೆ ಸಾಮಾಜಿಕ ಅಂತರ ಸೇರಿ ಎಲ್ಲಾ ನಿಯಮಗಳನ್ನು ಪಾಲಿಸಿದ್ದೆ ಆದರೂ ಸೋಂಕು ಕಾಣಿಸಿಕೊಂಡಿದೆ ಎಂದಿದ್ದಾರೆ.

ಉಮಾ ಭಾರತಿ ಜೊತೆ ತೆರಳಿದ್ದ ಧನ್‌ಸಿಂಗ್ ರಾವ್‌ಗ ಕೊರೋನಾ

ಸ್ಯ ಉಮಾ ಭಾರತಿಜೊತೆ ಪ್ರಯಾಣಿಸಿದ್ದ ಉತ್ತರಾಖಂಡ್‌ನ ಸಚಿವ ಧನ್‌ಸಿಂಗ್‌ಗೂ ಕೊರೋನಾ ಸೋಂಕು ದೃಢಪಟ್ಟಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

Holi 2026: ಅರ್ಧ ಜಗತ್ತೇ ಯುದ್ಧದಲ್ಲಿ ರಕ್ತದೋಕುಳಿ ಆಡುತ್ತಿರುವಾಗ, ಅನಾಥಾಶ್ರಮದ ಮಕ್ಕಳೊಂದಿಗೆ ಭಾರತೀಯ ಸೈನಿಕರ ಸಂಭ್ರಮದ ಬಣ್ಣದಾಟ
Holi Special Trains: ಹೋಳಿ ಹಬ್ಬಕ್ಕೆ ಊರಿಗೆ ಹೋಗ್ತೀರಾ? ರೈಲ್ವೆ ಇಲಾಖೆಯಿಂದ ಭರ್ಜರಿ ವ್ಯವಸ್ಥೆ, ಇಲ್ಲಿದೆ ಡೀಟೇಲ್ಸ್