
ಚಂಡೀಗಢ(ಸೆ.20): ಪಂಜಾಬ್ ಮುಖ್ಯಮಂತ್ರಿಯಾಗಿ ಚರಣ್ಜಿತ್ ಸಿಂಗ್ ಚನ್ನಿ ಅವರು ಹೊರಹೊಮ್ಮಿದ ಬೆನ್ನಲ್ಲೇ, ಅವರ ವಿರುದ್ಧ 2018ರಲ್ಲಿ ಕೇಳಿಬಂದಿದ್ದ ಮೀಟೂ ಆರೋಪ ಇದೀಗ ಮತ್ತೊಮ್ಮೆ ಸದ್ದು ಮಾಡಿದೆ.
ಚಮ್ಕೌರ್ ಸಾಹಿಬ್ ವಿಧಾನಸಭೆ ಕ್ಷೇತ್ರದ ಶಾಸಕರಾಗಿರುವ ಚನ್ನಿ ಅವರು 2018ರಲ್ಲಿ ಮಹಿಳಾ ಐಎಎಸ್ ಅಧಿಕಾರಿಯೊಬ್ಬರಿಗೆ ಅನುಚಿತ ಸಂದೇಶಗಳನ್ನು ರವಾನಿಸಿದ್ದರು ಎಂದು ಆರೋಪಿಸಲಾಗಿತ್ತು. ಈ ವಿಚಾರವನ್ನು ಮಹಿಳಾ ಅಧಿಕಾರಿಯ ಸಮ್ಮುಖದಲ್ಲೇ ಇತ್ಯರ್ಥಗೊಳಿಸಲಾಗಿತ್ತು. ಅಲ್ಲದೆ ತಮ್ಮ ಈ ಕೃತ್ಯಕ್ಕಾಗಿ ಚನ್ನಿ ಅವರು ಮಹಿಳಾ ಅಧಿಕಾರಿಗೆ ಕ್ಷಮಾಪಣೆಯನ್ನೂ ಕೋರಿದ್ದರು.
ಆದರೆ ಇದೇ ವಿಚಾರವನ್ನು ಈಗ ಮುಂದಿಟ್ಟುಕೊಂಡಿರುವ ಬಿಜೆಪಿ, ಪಂಜಾಬ್ ಮುಖ್ಯಮಂತ್ರಿ ಆಗಿ ಕಾಂಗ್ರೆಸ್ ನೇಮಕ ಮಾಡಿರುವ ಚರಣ್ಜಿತ್ ಸಿಂಗ್ ಚನ್ನಿ ಅವರು ಪ್ರಶ್ನಾತೀತ ಮತ್ತು ವಿವಾದಕ್ಕೀಡಾಗದ ನಾಯಕರೇನಲ್ಲ. ಅವರ ವಿರುದ್ಧ ಮೀಟೂ ಆರೋಪವಿದೆ ಎಂದು ಕಿಡಿಕಾರಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ