
ನವದೆಹಲಿ (ಆ. 07): ಕರ್ಪೂರಿ ಠಾಕೂರ್ ಕಾಲವಾದ ನಂತರ ಬಿಹಾರದ ರಾಜಕಾರಣ ಅರ್ಥವಾಗೋದು ಇಬ್ಬರಿಗೆ ಮಾತ್ರ. ಒಬ್ಬರು ನಿತೀಶ್ ಕುಮಾರ್, ಇನ್ನೊಬ್ಬರು ಲಾಲು ಪ್ರಸಾದ್ ಯಾದವ್. ನಿತೀಶ್ ಮೈದಾನದಲ್ಲಿದ್ದಾರೆ, ಆದರೆ ಲಾಲು ಜೈಲಿನಲ್ಲಿದ್ದಾರೆ. ಅಕ್ಟೋಬರ್ನಲ್ಲಿ ವಿಧಾನಸಭಾ ಚುನಾವಣೆ ನಡೆದರೆ ಎನ್ಡಿಎಗೆ ನೀತಿಶ್ ಇದ್ದಾರೆ, ಮೋದಿಯೂ ಬರುತ್ತಾರೆ.
2022 ಕ್ಕೆ ಪ್ರಿಯಾಂಕಾ ಇನ್ ಉತ್ತರ ಪ್ರದೇಶ?
ಆದರೆ ಕಾಂಗ್ರೆಸ್ ಹಾಗೂ ಆರ್ಜೆಡಿ ಬಳಿ ಯಾರೂ ಇಲ್ಲ. ಹೀಗಾಗಿ ಜೈಲಿನಲ್ಲಿರುವ ಲಾಲು ಯಾದವ್ರನ್ನು ಹೇಗಾದರೂ ಮಾಡಿ ಹೊರಗೆ ಕರೆದುಕೊಂಡು ಬರುವ ಕಾನೂನು ಪ್ರಯತ್ನಗಳು ನಡೆಯುತ್ತಿವೆ. ಈಗಾಗಲೇ ಲಾಲು ಜಾರ್ಖಂಡ್ನ ಶಿಬು ಸೊರೇನ್ ಸರ್ಕಾರದ ಕೃಪೆಯಿಂದ ಜೈಲಿನಿಂದ ಆಸ್ಪತ್ರೆಗೆ ಶಿಫ್ಟ್ ಆಗಿದ್ದಾರೆ. ಲಾಲು ಏನಾದರೂ ಹೊರಗೆ ಬಂದರೆ ಬಿಹಾರದ ಚುನಾವಣೆಯ ವಾತಾವರಣವೇ ಬದಲಾಗಲಿದೆ. ಲಾಲುಗಿರುವ ಪೊಲಿಟಿಕಲ್ ಮಸ್ತಿಷ್ಕ ಮಕ್ಕಳಿಗೆ ಇಲ್ಲ. ಲಾಲುಗೆ ಮತ್ತು ಆಲೂಗೆ ಪರ್ಯಾಯ ಇಲ್ಲ ನೋಡಿ.
- ಪ್ರಶಾಂತ್ ನಾತು, ಸುವರ್ಣ ನ್ಯೂಸ್ ದೆಹಲಿ ಪ್ರತಿನಿಧಿ
ಇಂಡಿಯಾ ಗೇಟ್, ದೆಹಲಿಯಿಂದ ಕಂಡ ರಾಜಕಾರಣ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ