
ಬಿಹಾರ: ದೇವಸ್ಥಾನಕ್ಕೆ ಬಂದ ಕಳ್ಳನೋರ್ವ ಕಳ್ಳತನಕ್ಕೂ ಮೊದಲು ದೇವರಿಗೆ ಕೈ ಮುಗಿದ್ದು, ಬಳಿಕ ದೇಗುಲದ ಶಿವಲಿಂಗದ ಮೇಲಿದ್ದ ಹಾವಿನ ಪ್ರತಿಮೆಯನ್ನು ಎತ್ತಿಕೊಂಡು ಹೋದ ವಿಚಿತ್ರ ಘಟನೆ ನಡೆದಿದೆ. ಇದರ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಬಿಹಾರ ಛಪ್ರಾ ಜಿಲ್ಲೆಯ ದೇಗುಲವೊಂದರಲ್ಲಿ ಈ ಘಟನೆ ನಡೆದಿದೆ. ವೀಡಿಯೋ ನೋಡಿದ ಜನ ಕಳ್ಳನ ವರ್ತನೆಗೆ ಅಚ್ಚರಿ ವ್ಯಕ್ತಪಡಿಸಿದ್ದಾರೆ.
ಕಳ್ಳನಾದರೇನು ದೇವರ ಮೇಲೆ ಭಕ್ತಿ ಇರಬಾರದು ಅಂತೇನು ಇಲ್ವಲ್ಲ? ಹಾಗಾಗಿ ಈ ಕಳ್ಳ ದೇವರ ಮೇಲಿನ ನಂಬಿಕೆಯ ಜೊತೆ ಸುಲಭವಾಗಿ ಹಣ ಮಾಡುವ ದುರುದ್ದೇಶದಿಂದ ದೇಗುಲಕ್ಕೆ ಬಂದಿದ್ದಾನೆ. ಮೊದಲಿಗೆ ಶಿವಲಿಂಗದ ಮುಂದೆ ನಿಂತುಕೊಂಡು ಎರಡು ಕೈಗಳನ್ನು ಜೋಡಿಸಿ ಕೈ ಮುಗಿದಿದ್ದಾನೆ. ಬಳಿಕ ಯಾರಾದರೂ ಇದ್ದಾರೋ ಎಂದು ಅತ್ತಿತ್ತ ನೋಡಿದ ಆತನಿಗೆ ಬಹುಶಃ ದೇಗುಲದೊಳಗಿದ್ದ ಸಿಸಿಟಿವಿ ಬಗ್ಗೆ ಅರಿವಿಲ್ಲ.
ದೇಗುಲಕ್ಕೆ ಬಂದು ಕೈಗಳ ಜೋಡಿಸಿ ದೇವರಿಗೆ ಕೈ ಮುಗಿದ ಆತ ನಿಧಾನವಾಗಿ ಶಿವಲಿಂಗದ ಮೇಲಿದ್ದ ಹಾವಿನ ಕಂಚಿನ ಪ್ರತಿಮೆಯನ್ನು ತೆಗೆದಿದ್ದಾನೆ. ಅದಕ್ಕೂ ಮೊದಲು ಕೂಡ ಆತ ಮತ್ತೊಮ್ಮೆ ಕೈ ಮುಗಿದಿದ್ದು, ನಂತರ ನಿಧಾನವಾಗಿ ಶಿವಲಿಂಗದ ಮೇಲಿದ್ದ ಹಾವನ್ನು ತೆಗೆದುಕೊಂಡು ಕೈಯಲ್ಲಿ ಹಿಡಿದುಕೊಂಡಿದ್ದಾನೆ. ಸೆಪ್ಟೆಂಬರ್ 12 ರಂದು ಈ ಘಟನೆ ನಡೆದಿದ್ದು, ಸಿಸಿಟಿವಿ ವೀಡಿಯೋ ಈಗ ವೈರಲ್ ಆಗುತ್ತಿದೆ. ಛಪ್ರಾದ ಬಟೇಶ್ವರನಾಥ ದೇಗುಲದಲ್ಲಿ ಈ ಘಟನೆ ನಡೆದಿದೆ.
ಕಳ್ಳನ ವರ್ತನೆಗೆ ಅನೇಕರು ಸಾಮಾಜಿಕ ಜಾಲತಾಣದಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಛಪ್ರಾದ ಭಗವಾನ್ ಬಜಾರ್ ಪೊಲೀಸ್ ಸ್ಟೇಷನ್ನಲ್ಲಿ ಎಫ್ಐಆರ್ ದಾಖಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ