
ಬೆಂಗಳೂರು (ಆ.16):ಸಾವರ್ಕರ್ ಬಗ್ಗೆ ದೇಶದ ರಾಜಕೀಯ ಮತ್ತೆ ಬಿಸಿಯಾಗಿದೆ. ಬಿಜೆಪಿ ಮತ್ತು ಕಾಂಗ್ರೆಸ್ ನಾಯಕರು ವಿವಿಧ ರೀತಿಯ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಆದರೆ ಹಲವು ವರ್ಷಗಳ ಹಿಂದೆ ಭಾರತದ ಮಾಜಿ ಪ್ರಧಾನಿ ಭಾರತ ರತ್ನ ಅಟಲ್ ಬಿಹಾರಿ ವಾಜಪೇಯಿ ಅವರು ಕಾರ್ಯಕ್ರಮವೊಂದರಲ್ಲಿ ಸಾವರ್ಕರ್ ಅವರ ಬಗ್ಗೆ ಒಂದು ಕವಿತೆಯನ್ನು ಓದಿದ್ದರು. ಪ್ರತಿ ಬಾರಿ ವೀರ್ ಸಾವರ್ಕರ್ ವಿಚಾರ ಬಂದಾಗ, ಅಟಲ್ ಬಿಹಾರಿ ವಾಜಪೇಯಿ ಅವರು ಹೇಳಿದ್ದ ಈ ಕಾವ್ಯವನ್ನು ಕೇಳಲೇಬೇಕು ಎಂದನಿಸುತ್ತದೆ. ದೇಶದ ಮಹಾ ನಾಯಕರು ವೀರ್ ಸಾವರ್ಕರ್ಅನ್ನು ತಮ್ಮ ಕಣ್ಣುಗಳಿಂದ ಹೇಗೆ ನೋಡಿದ್ದರು ಎನ್ನುವ ವಿಚಾರ ಚರ್ಚೆ ಆಗುತ್ತಲೇ ಇರುತ್ತದೆ. ಮಹಾತ್ಮ ಗಾಂಧೀಜಿ, ಜವಹರಲಾಲ್ ನೆಹರೂ, ಇಂದಿರಾ ಗಾಂಧಿ ಹಾಗೂ ಅಟಲ್ ಬಿಹಾರಿ ವಾಜಪೇಯಿಯಂಥ ವ್ಯಕ್ತಿತ್ವಗಳನ್ನು ತಾವು ವೀರ್ ಸಾವರ್ಕರ್ ಅವರನ್ನು ನೋಡಿದ್ದು ಹೇಗೆ ಎನ್ನುವ ವಿಚಾರ ಈಗಾಗಲೇ ಇತಿಹಾಸದಲ್ಲಿ ದಾಖಲಾಗಿದೆ. ಇವರ ಮಾತುಗಳನ್ನೇ ಸಾವರ್ಕರ್ ಎನ್ನುವ ದೇಶಭಕ್ತ ಸ್ವಾತಂತ್ರ್ಯ ಸೇನಾನಿಯ ವ್ಯಕ್ತಿತ್ವದ ಬಗ್ಗೆ ಸಾಕ್ಷಿ ಎನ್ನುವಂತೆ ಪ್ರತಿಬಿಂಬಿಸಲಾಗುತ್ತದೆ. ಇದರಲ್ಲಿ ಅಟಲ್ ಬಿಹಾರಿ ಅವರು ಸಾವರ್ಕರ್ ಕುರಿತಾಗಿ ಹೇಳಿದ್ದ ಈ ಕಾವ್ಯ ಪ್ರಮುಖವಾಗಿರುವಂಥದ್ದು. ಇದರಲ್ಲಿ ಸಾವರ್ಕರ್ ಅಂದರೆ ಏನು, ಸಾವರ್ಕರ್ ಹೆಸರಿನ ಸರ್ಥವೇನು ಅನ್ನೋದನ್ನ ಅತ್ಯಂತ ಮನೋಜ್ಞವಾಗಿ ವಿವರಿಸಿದ್ದರು.
ಅಟಲ್ ಹೇಳಿದ್ದೇನು: ಕೆಲವು ವರ್ಷಗಳ ಹಿಂದೆ ಮುಂಬೈನಲ್ಲಿ ವೀರ್ ಸಾವರ್ಕರ್ ಜಯಂತಿ ನಡೆದಿತ್ತು. ಸಾವರ್ಕರ್ ದರ್ಶನ್ ಪ್ರತಿಷ್ಠಾನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಅಟಲ್ ಬಿಹಾರಿ ವಾಜಪೇಯಿ ಈ ಕವಿತೆಯನ್ನು ಹೇಳಿದ್ದರು.
ಸಾವರ್ಕರ್ ಎಂದರೆ ವೇಗ, ಸಾವರ್ಕರ್ ಎಂದರೆ ತ್ಯಾಗ,
ಸಾವರ್ಕರ್ ಎಂದರೆ ತಪಸ್ಸು, ಸಾವರ್ಕರ್ ಎಂದರೆ ತತ್ವ
ಸಾವರ್ಕರ್ ಎಂದರೆ ತರ್ಕ, ಸಾವರ್ಕರ್ ಎಂದರೆ ತಾರುಣ್ಯ
ಸಾವರ್ಕರ್ ಎಂದರೆ ಬಾಣ, ಸಾವರ್ಕರ್ ಎಂದರೆ ಕತ್ತಿ,
ಸಾವರ್ಕರ್ ಎಂದರೆ ದೃಢತೆ, ಸಾವರ್ಕರ್ ಎಂದರೆ ಅಂಶ,
ಸಾವರ್ಕರ್ ಎಂದರೆ ನಡುಕ, ಸಾವರ್ಕರ್ ಎಂದರೆ ತೀಕ್ಷ್ಣತೆ, ಸಾವರ್ಕರ್ ಎಂದರೆ ಮೊನಚು. ಎಂತಹ ವರ್ಣರಂಜಿತ ವ್ಯಕ್ತಿತ್ವ!
ಕರಿನೀರ ಶಿಕ್ಷೆಯ ಕರಾಳತೆಯನ್ನು ಅನುಭವಿಸಿದ್ದ ದೇಶಭಕ್ತ ಸಾವರ್ಕರ್!
ಮುಂದೆ ಮಾತನಾಡುತ್ತಾ, " ಕವಿತೆ ಮತ್ತು ಕ್ರಾಂತಿ! ಕಾವ್ಯ ಮತ್ತು ಭ್ರಮೆ ಒಟ್ಟಿಗೆ ಹೋಗಬಹುದು, ಆದರೆ ಕವಿತೆ ಮತ್ತು ಕ್ರಾಂತಿ ಒಟ್ಟಿಗೆ ಹೋಗುವುದು ತುಂಬಾ ಕಷ್ಟ. ಕಾವ್ಯ ಎಂದರೆ ಕಲ್ಪನೆ, ಪದಗಳ ಲೋಕದ ಸೃಷ್ಟಿ, ಎತ್ತರಕ್ಕೆ ಹಾರುವುದು. ವಾಸ್ತವದ ಜೊತೆಗಿನ ಸಂಪರ್ಕ ಕಡಿತವಾದಲ್ಲಿ ಕೆಲವೊಮ್ಮೆ ಎತ್ತರದಲ್ಲಿ ಹಾರುತ್ತಿದ್ದ ವ್ಯಕ್ತಿ ನೆಲಕ್ಕೆ ಬೀಳುತ್ತಾರೆ. ಕವಿ ಅದರ ಬಗ್ಗೆ ದೂರು ನೀಡುವುದಿಲ್ಲ. ಅವರ ಟೀಕಾಕಾರರೂ ಈ ಬಗ್ಗೆ ಪ್ರತಿಕ್ರಿಯಿಸುವುದಿಲ್ಲ. ಆದರೆ ಸಾವರ್ಕರ್, ಎನ್ನುವ ಕವಿ ಪ್ರತಿ ಬಾರಿಯೂ ಎತ್ತರ, ಎತ್ತರಕ್ಕೆ ಹಾರುತ್ತಾರೆ. ಭೂಮಿಯ ಜೊತೆಗಿನ ವಾಸ್ತವದಿಂದ ಅವರು ಎಂದಿಗೂ ಸಂಬಂಧ ಮುರಿದುಕೊಂಡಿರಲಿಲ್ಲ. ಸಾವರ್ಕರ್ ಅವರ ವ್ಯಕ್ತಿತ್ವ ಎಷ್ಟು ಎತ್ತರವಾಗಿತ್ತು ಎಂದರೆ, ಅಷ್ಟೇ ಆಳವನ್ನು ಹೊಂದಿದ ವ್ಯಕ್ತಿಯಾಗಿದ್ದಾರೆ' ಎಂದಿದ್ದರು.
Atal Bihari Vajpayee: ಭಾರತದ ಮಹಾನಾಯಕ ನೀಡಿದ 10 ಮಹತ್ವದ ಸಂದೇಶಗಳು!
ಸಾವರ್ಕರ್ಗೂ ಸಾಗರಕ್ಕೂ ಏನೋ ಒಂದು ಸಂಬಂಧವಿದೆ: ವೀರ್ ಸಾವರ್ಕರ್ ಅಂಡಮಾನ್ ದ್ವೀಪದ ಸೆಲ್ಯುಲಾರ್ ಜೈಲಿನಲ್ಲಿದ್ದರು. ನಾನು ಆ ಜೈಲನ್ನು ನೋಡಿದ್ದೇನೆ. ತಮ್ಮ ಜೀವನದ ಬಹುಮುಖ್ಯ ಭಾಗವನ್ನು ಅವರು ಈ ಜೈಲಿನಲ್ಲಿ ಕಳೆದಿದ್ದರು. ಸಾಗರ ಹಾಗೂ ಸಾವರ್ಕರ್ಗೆ ಇರುವ ಸಂಬಂಧ ಏನೆಂದು ನನಗೆ ಗೊತ್ತಿಲ್ಲ ಎಂದು ಅಟಲ್ ಮಾತನಾಡಿದ್ದರು. ಸಾವರ್ಕರ್ ಅವರ ಜೀವನವು ಅಂತಹ ವಿಶಿಷ್ಟ ಗುಣಗಳಿಂದ ತುಂಬಿದೆ. ಬಲವಾದ ರಾಷ್ಟ್ರೀಯತೆ, ರಾಜಿಯಿಲ್ಲದ ರಾಷ್ಟ್ರೀಯತೆ, ದೇಶಪ್ರೇಮವು ಜೀವನದ ಪ್ರತಿ ಕ್ಷಣವನ್ನೂ ಮತ್ತು ದೇಹದ ಪ್ರತಿಯೊಂದು ಕಣವನ್ನೂ ಮಾತೃಭೂಮಿಯ ಸ್ವಾತಂತ್ರ್ಯಕ್ಕಾಗಿ ಮೀಸಲಿಟ್ಟಿದೆ, ಆದರೆ ಅದರೊಂದಿಗೆ ಆಮೂಲಾಗ್ರ ಸಮಾಜ ಸುಧಾರಕನ ಪಾತ್ರವೂ ಇತ್ತು ಎಂದು ಅಟಲ್ ಮಾತನಾಡಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ