
ದೆಹಲಿ(ಮೇ.08): ಕೊರೋನಾದಿಂದಾಗಿ ಬಹಳಷ್ಟು ಜನರ ಕನಸುಗಳು ಭಗ್ನವಾಗಿದೆ, ಬದುಕು ಮುರಿದುಹೋಗಿದೆ. ಆದರೆ ಮಾರಕ ವೈರಸ್ ಜೊತೆ ಹೋರಾಡುವುದಕ್ಕಾಗಿ ಸ್ವಯಂ ಪ್ರೇರಿತರಾಗಿ ಮುನ್ನುಗ್ಗುತ್ತಿರುವ ಬಹಳಷ್ಟು ಜನರು ನಮ್ಮ ಮಧ್ಯೆ ಇದ್ದಾರೆ.
ದೆಹಲಿಯ ನಿಝಾಮುದ್ದೀನ್ ಬರಾಕ್ನಲ್ಲಿ ವಾಸಿಸೋ ಮೂರು ಮಕ್ಕಳ ತಂದೆ ಎಎಸ್ಐ ರಾಕೇಶ್ 56 ವರ್ಷದವರು. ಲೋಡಿ ರಸ್ತೆ ಶವಾಗಾರದಲ್ಲಿ ಏ.13ರಿಂದಲೂ ಕೆಲಸ ಮಾಡುತ್ತಿದ್ದಾರೆ.
ಟಿಫಿನ್ ಬಾಕ್ಸ್ನಲ್ಲಿ ಚಿನ್ನದ ಬಳೆ: ಸೋಂಕಿತರಾಗಿದ್ದಾಗ ಊಟ ಕೊಟ್ಟಿದ್ದಕ್ಕೆ ಥ್ಯಾಂಕ್ಸ್ ಹೇಳಿದ್ದು ಹೀಗೆ
ಮಗಳ ಮದುವೆ, ಎಲ್ಲಾ ತಯಾರಿಯಾಗ್ಬೇಕು, ಮದುವೆ ಮಾಡ್ಬೇಕು ಅಂತೆಲ್ಲಾ ಕನಸು ಕಂಡಿದ್ದ ತಂದೆ ಕೊರೋನಾ ಕೊರೋನಾದಿಂದಾಗಿ ಸಾಲು ಸಾಲು ಮೃತದೇಹಗಳ ಅಂತ್ಯಸಂಸ್ಕಾರದಲ್ಲಿ ಕೈ ಜೋಡಿಸುವಂತಾಯಿತು.
50ಕ್ಕೂ ಹೆಚ್ಚು ಜನರ ಅಂತ್ಯಸಂಸ್ಕಾರವನ್ನು ಸ್ವತಃ ನಿರ್ವಹಿಸಿದ ಇವರು ಇದಕ್ಕಾಗಿ ಮಗಳ ಮದುವೆಯನ್ನೂ ಮುಂದೂಡಿ ಈ ಕಷ್ಟದ ಸಂದರ್ಭದಲ್ಲಿ ಕರ್ತವ್ಯದಲ್ಲಿ ಮುಂದುವರಿಯುತ್ತಿದ್ದಾರೆ. ಕೊರೋನಾ ಕರ್ತವ್ಯವವನ್ನು ಮಾತ್ರ ಬಿಡೋದಿಲ್ಲ ಎಂದು ನಿತ್ಯ ಶವಾಗಾರದಲ್ಲಿ ಹಾಜರಾಗುತ್ತಿದ್ದಾರೆ.
ವೈದ್ಯರು, ನರ್ಸ್ಗಳು ಜೀವ ಉಳಿಸುವಲ್ಲಿ ಕೆಲಸ ಮಾಡುತ್ತಿದ್ದರೆ, ಮೃತದೇಹಗಳಿಗೂ ಗೌರವಯುತವಾಗಿ, ಸಮಯೋಚಿತವಾಗಿ ಅಂತ್ಯಸಂಸ್ಕಾರ ನೀಡೋ ಸಿಬ್ಬಂದಿಗಳ ಸೇವೆಯನ್ನು ಶ್ಲಾಘಿಸಲೇಬೇಕಲ್ಲ..
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ