ಜಾಗ ಹೇಳಿದರೆ ಬಂದು ಗುಂಡು ಹೊಡೆಸಿಕೊಳ್ಳುತ್ತೇನೆ: ಒವೈಸಿ!

By Suvarna NewsFirst Published Jan 29, 2020, 4:22 PM IST
Highlights

ಅನುರಾಗ್ ಠಾಕೂರ್ ಗುಂಡೇಟು ತಿನ್ನಲು ರೆಡಿಯಾದ ಒವೈಸಿ| ‘ಜಾಗ ಹೇಳಿದರೆ ನಾನೇ ಹೋಗಿ ಎದೆಯೊಡ್ಡುತ್ತೇನೆ’|  ದೇಶ ವಿರೋಧಿಗಳಿಗೆ ಗುಂಡಿಕ್ಕಬೇಕು ಎಂದಿದ್ದ ಅನುರಾಗ್ ಠಾಕೂರ್| ‘ಸಿಎಎ ವಿರೋಧಿ ಹೋರಾಟ ದೇಶಾದ್ಯಂತ ಕಾಡ್ಗಿಚ್ಚಿನಂತೆ ಹಬ್ಬಿದೆ’| ‘ಗುಂಡು ಹೊಡೆದು ಹೋರಾಟ ಅಂತ್ಯಗೊಳಿಸುವುದು ಮೋದಿ ಸರ್ಕಾರದ ಬಯಕೆ’|

ಹೈದರಾಬಾದ್(ಜ.29): ದೇಶ ವಿರೋಧಿಗಳಿಗೆ ಗುಂಡು ಹೊಡೆಯಬೇಕು ಎಂಬ ಕೇಂದ್ರ ಸಚಿವ ಅನುರಾಗ್ ಠಾಕೂರ್ ಹೇಳಿಕೆಯನ್ನು ಎಐಎಂಐಎಂ ಸಂಸದ ಅಸದುದ್ದೀನ್ ಒವೈಸಿ ಖಂಡಿಸಿದ್ದಾರೆ.

ಕೇಂದ್ರ ಸಚಿವರಿಗೆ ಗುಂಡು ಹೊಡೆಯವ ಬಯಕೆ ಇದ್ದರೆ ಅವರು ಹೇಳಿದ ಸ್ಥಳಕ್ಕೆ ಹೋಗಿ ಎದೆಯೊಡ್ಡುತ್ತೇನೆ ಎಂದು ಅಸದುದ್ದೀನ್ ಒವೈಸಿ ಗುಡುಗಿದ್ದಾರೆ.

Asaduddin Owaisi,AIMIM:I challenge you Anurag Thakur, to specify a place in India where you'll shoot me&I'm ready to come.Your statements will not create fear in my heart,because our mothers&sisters have come out in large numbers on roads,they've decided to save the country(28.1) pic.twitter.com/Mh3sj33voV

— ANI (@ANI)

ಸಿಎಎ ವಿರೋಧಿಗಳನ್ನು ದೇಶದ್ರೋಹಿಗಳೆಂದು ಕರೆದು ಅವರಿಗೆ ಗುಂಡಿಕ್ಕುವಂತೆ ಅನುರಾಗ್ ಠಾಕೂರ್ ಹೇಳಿದ್ದಾರೆ. ಅವರ ಬಯಕೆಯಂತೆ ನಾನು ಅವರ ಗುಂಡಿಗೆ ಎದೆಯೊಡ್ಡುವುದಾಗಿ ಒವೈಸಿ ಹೇಳಿದ್ದಾರೆ.

ಸಿಎಎ ವಿರೋಧಿ ಹೋರಾಟ ದೇಶಾದ್ಯಂತ ಕಾಡ್ಗಿಚ್ಚಿನಂತೆ ಹಬ್ಬಿದ್ದು, ಗುಂಡು ಹೊಡೆದು ಈ ಹೋರಾಟವನ್ನು ಅಂತ್ಯಗೊಳಿಸುವುದು ಮೋದಿ ಸರ್ಕಾರದ ಬಯಕೆಯಾಗಿದೆ ಎಂದು ಒವೈಸಿ ಕಿಡಿಕಾರಿದರು.

ಸಿಎಎ ವಿರೋಧಿಗಳಿಗೆ ‘ಗೋಲಿ ಮಾರೋ’ ಎಂದ ಕೇಂದ್ರ ಸಚಿವ!

ಈ ದೇಶದ ಅಕ್ಕ-ತಂಗಿಯರು ಸಿಎಎ ವಿರೋಧಿಸಿ ಬೀದಿಗಿಳಿದಿದ್ದು, ನಮ್ಮ ಹೋರಾಟಕ್ಕೆ ಜಯ ಶತಸಿದ್ಧ ಎಂದು ಈ ವೇಳೆ ಒವೈಸಿ ಭರವಸೆ ವ್ಯಕ್ತಪಡಿಸಿದರು.

Shocking: It was a local BJP leader from Delhi back then, its now a front line BJP leader and MoS Finance, Anurag Thakur who is leading the crowd to chant “Desh ke gaddaron ko, Goli maro salon ko”.

Such is the level of politics, ladies and gentlemen! pic.twitter.com/rXZ8M8m6lz

— Prashant Kumar (@scribe_prashant)

ಸಿಎಎ ವಿರೋಧಿಗಳು ದೇಶ ದ್ರೋಹಿಗಳಾಗಿದ್ದು, ಅವನ್ನು ಗುಂಡಿಕ್ಕಿ ಕೊಲ್ಲಬೇಕು ಎಂದು ದೆಹಲಿ ಚುನಾವಣೆ ಪ್ರಚಾರದ ವೇಳೆ ಕೇಂದ್ರ ಸಚಿವ ಅನುರಾಗ್ ಠಾಕೂರ್ ಹೇಳಿದ್ದನ್ನು ಇಲ್ಲಿ ಸ್ಮರಿಸಬಹುದು.

click me!