
ದೆಹಲಿ(ಮಾ.23): ಹಿಮಪಾತದಿಂದಾಗಿ ರಸ್ತೆಗಳೆಲ್ಲ ಮುಚ್ಚಲ್ಪಟ್ಟಿದ್ದು, ತುರ್ತು ಸ್ಥಿತಿಯಲ್ಲಿ ತುಂಬು ಗರ್ಭಿಣಿಯನ್ನು ಸೈನಿಕರೇ ಹೊತ್ತುಕೊಂಡು ಆಸ್ಪತ್ರೆಗೆ ಸೇರಿಸಿದ ಘಟನೆ ಜಮ್ಮು ಕಾಶ್ಮೀರದ ಸುಮ್ವಾಲಿಯಲ್ಲಿ ನಡೆದಿದೆ.
ಭಾರತೀಯ ಸೇನೆಯ ಟೋರ್ನಾ ಬೆಟಾಲಿಯನ್ ತುಂಬು ಗರ್ಭಿಣಿ ಪ್ರಾಥಮಿಕ ಆರೋಗ್ಯ ಕೇಂದ್ರ ಸೇರಲು ನೆರವಾಗಿದೆ. ಸ್ಥಳೀಯರೊಂದಿಗೆ 5 ಕಿಮೀ ಗರ್ಭಿಣಿಯನ್ನು ಹೊತ್ತು ನಡೆದ ಸೈನಿಕರು ಅಲ್ಲಿಂದ ಆಕೆಯನ್ನು ಆರ್ಮಿ ಆಂಬುಲೆನ್ಸ್ನಲ್ಲಿ ಕರೆದೊಯ್ದಿದ್ದಾರೆ.
ಬಿಜೆಪಿ ಆವಾಸ್ ಯೋಜನೆ ಜಾಹೀರಾತಿನ ಮಹಿಳೆಗೆ ಸ್ವಂತ ಮನೆಯೇ ಇಲ್ಲ!
ಮಾರ್ಚ್ 22ರಂದು ತಡರಾತ್ರಿ ಸುಮ್ವಾಲಿಯ ಆರ್ಮಿಗೆ ನೆರವಿನ ಕರೆ ಬಂದಿತ್ತು. 9 ತಿಂಗಳಾದ ಗರ್ಭಿಣಿಗೆ ತರ್ತು ಚಿಕಿತ್ಸೆಯ ಅಗತ್ಯವಿತ್ತು.
ಸ್ಥಳಕ್ಕೆ ಬಂದ ಆರ್ಮಿ ವೈದ್ಯಾಧಿಕಾರಿ ಮಹಿಳೆಯನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲು ಸೂಚಿಸಿದ್ದಾರೆ. ಪ್ರತಿಕೂಲ ಹವಾಮಾನ, ಹೆಚ್ಚಿನ ಹಿಮಪಾತದಲ್ಲಿ ಮಹಿಳೆಯನ್ನು ಹೊತ್ತುಕೊಂಡೇ ಬರಲಾಗಿತ್ತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ