ಲಡಾಖ್‌ ಮುಂಚೂಣಿ ಪ್ರದೇಶಕ್ಕೆ ಸೇನಾ ಮುಖ್ಯಸ್ಥ ನರವಣೆ ಭೇಟಿ, ಕ್ರಿಸ್‌ಮಸ್‌ ಕೇಕ್‌ಗಳ ವಿತರಣೆ!

Published : Dec 24, 2020, 01:15 PM IST
ಲಡಾಖ್‌ ಮುಂಚೂಣಿ ಪ್ರದೇಶಕ್ಕೆ ಸೇನಾ ಮುಖ್ಯಸ್ಥ ನರವಣೆ ಭೇಟಿ, ಕ್ರಿಸ್‌ಮಸ್‌ ಕೇಕ್‌ಗಳ ವಿತರಣೆ!

ಸಾರಾಂಶ

ಲಡಾಖ್‌ ಮುಂಚೂಣಿ ಪ್ರದೇಶಕ್ಕೆ ಸೇನಾ ಮುಖ್ಯಸ್ಥ ನರವಣೆ ಭೇಟಿ| ಕ್ರಿಸ್‌ಮಸ್‌ ಪ್ರಯುಕ್ತ ಯೋಧರಿಗೆ ಸಿಹಿ, ಕೇಕ್‌ಗಳ ವಿತರಣೆ| ಶತ್ರು ರಾಷ್ಟ್ರದ ದಾಳಿ ತಡೆಗೆ ಸೇನೆಯ ಸಿದ್ಧತೆ ಬಗ್ಗೆ ಮಾಹಿತಿ ಸಂಗ್ರಹ

ಲಡಾಖ್(ಡಿ.24)‌: ವಾಸ್ತವ ಗಡಿ ರೇಖೆಯಲ್ಲಿ ಭಾರತ ಮತ್ತು ಚೀನಾ ಮಧ್ಯೆ ತ್ವೇಷಮಯ ಸ್ಥಿತಿ ಮುಂದುವರೆರುವಾಗಲೇ, ಭಾರತೀಯ ಸೇನಾ ಮುಖ್ಯಸ್ಥ ಜನರಲ್‌ ಮನೋಜ್‌ ಮುಕುಂದ್‌ ನರವಣೆ ಅವರು ಲಡಾಖ್‌ನ ರೆಚಿನ್‌ ಲಾ ಸೇರಿದಂತೆ ಇನ್ನಿತರ ಗಡಿ ಮುಂಚೂಣಿ ಪ್ರದೇಶಗಳಿಗೆ ಬುಧವಾರ ದಿಢೀರ್‌ ಭೇಟಿ ನೀಡಿದರು.

ಮೈಕೊರೆಯುವ ಚಳಿಯಲ್ಲೂ ದೇಶದ ರಕ್ಷಣೆಗೆ ಹಗಲಿರುಳು ಶ್ರಮಿಸುವ ಯೋಧರಿಗೆ ಕ್ರಿಸ್‌ಮಸ್‌ ಪ್ರಯುಕ್ತ ಸಿಹಿತಿಂಡಿಗಳು ಮತ್ತು ಕೇಕ್‌ಗಳನ್ನು ನೀಡಿ ಶುಭ ಕೋರಿದರು. ತನ್ಮೂಲಕ ಗಡಿ ಮುಂಚೂಣಿ ಯೋಧರಿಗೆ ನೈತಿಕ ಸ್ಥೈರ್ಯ ತುಂಬಿದರು.

ಅಲ್ಲದೆ ಪಾಕಿಸ್ತಾನ ಮತ್ತು ಚೀನಾ ಜೊತೆ ವ್ಯೂಹಾತ್ಮಕವಾದ ಪ್ರದೇಶಗಳಲ್ಲಿ ಭದ್ರತೆಗೆ ನಿಯೋಜಿಸಲಾದ ಭಾರತೀಯ ಸೇನೆಯ 14 ಕಾಫ್ಸ್‌ರ್‍ ತಂಡದ ಜೊತೆ ಸಭೆ ನಡೆಸಿದರು. ಅಲ್ಲದೆ ಒಂದು ವೇಳೆ ಭಾರತದ ಮೇಲೆ ಚೀನಾದ ಸೇನೆ ದಾಳಿಗೆ ಮುಂದಾದಲ್ಲಿ, ಅದನ್ನು ಎದುರಿಸಲು ಸೇನೆಯ ಒಟ್ಟಾರೆ ಸಿದ್ಧತೆಗಳ ಬಗ್ಗೆ 14 ಕಾಫ್ಸ್‌ರ್‍ನಿಂದ ಮಾಹಿತಿ ಪಡೆದರು.

ಈ ಹಿಂದೆ ಜುಲೈನಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಸೇನೆಯ 3 ಪಡೆಗಳ ಮುಖ್ಯಸ್ಥ ಜನರಲ್‌ ಬಿಪಿನ್‌ ರಾವತ್‌ ಅವರು ಸಹ ಲಡಾಖ್‌ಗೆ ಭೇಟಿ ನೀಡಿ, 13 ಕಾಫ್ಸ್‌ರ್‍ ಯೋಧರ ಕುಂದುಕೊರತೆಗಳನ್ನು ಆಲಿಸಿದ್ದನ್ನು ಸ್ಮರಿಸಬಹುದು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

India Latest News Live: ಭಾರತದಲ್ಲಿ ಭರ್ಜರಿ ಹೂಡಿಕೆಯ ಘೋಷಣೆ ಮಾಡಿದ ದೈತ್ಯ ಕಂಪನಿಗಳು
ಗುಜರಾತ್‌ನಲ್ಲೊಂದು ನಿರ್ಭಯಾ ಪ್ರಕರಣ