ಭಾರತದಿಂದ ಕುವೈತ್‌ಗೆ 192 ಟನ್‌ ಸಗಣಿ ರಫ್ತು!

Published : Jun 18, 2022, 10:19 AM IST
ಭಾರತದಿಂದ ಕುವೈತ್‌ಗೆ 192 ಟನ್‌ ಸಗಣಿ ರಫ್ತು!

ಸಾರಾಂಶ

* ನೈಸರ್ಗಿಕ ಕೃಷಿಗಾಗಿ ಸಗಣಿ ಖರೀದಿಸಿದ ಕೊಲ್ಲಿ ರಾಷ್ಟ್ರ * ಭಾರತದಿಂದ ಕುವೈತ್‌ಗೆ 192 ಟನ್‌ ಸಗಣಿ ರಫ್ತು * ರಾಜಸ್ಥಾನದ ಜೈಪುರದ ಗೋಶಾಲೆಯೊಂದರಿಂದ ಪೂರೈಕೆ

ಜೈಪುರ(ಜೂ.18): ಪ್ರಮುಖ ಕೊಲ್ಲಿ ರಾಷ್ಟ್ರಗಳಲ್ಲಿ ಒಂದಾಗಿರುವ ಕುವೈತ್‌ ಭಾರತದಿಂದ 1,92,000 ಕೆ.ಜಿ. (192 ಟನ್‌) ಸಗಣಿ ಆಮದು ಮಾಡಿಕೊಳ್ಳುತ್ತಿದೆ. ನೈಸರ್ಗಿಕ ಕೃಷಿಗಾಗಿ ಹಸು ಹಾಗೂ ಎಮ್ಮೆಯ ಸಗಣಿಯನ್ನು ಕುವೈತ್‌ ತರಿಸಿಕೊಳ್ಳುತ್ತಿದೆ ಎಂದು ಮೂಲಗಳು ಹೇಳಿವೆ.

ರಾಜಸ್ಥಾನದ ಜೈಪುರದಲ್ಲಿರುವ ಬೃಹತ್‌ ಗೋಶಾಲೆಯೊಂದರಿಂದ ಕುವೈತ್‌ನ ಖಾಸಗಿ ಕಂಪನಿಯೊಂದು ಸಗಣಿ ತರಿಸಿಕೊಳ್ಳುತ್ತಿದೆ. ಜೂ.15ರಂದು ಮೊದಲ ಬ್ಯಾಚ್‌ನ ಸಗಣಿ ಜೈಪುರದ ಕನಕಪುರ ಎಂಬಲ್ಲಿರುವ ರೈಲ್ವೆ ನಿಲ್ದಾಣದಿಂದ ಕುವೈತ್‌ಗೆ ತೆರಳಿದೆ. ಕಸ್ಟಮ್ಸ್‌ ಇಲಾಖೆಯ ಮೇಲ್ವಿಚಾರಣೆಯಲ್ಲಿ ಸಗಣಿಯನ್ನು ಪ್ಯಾಕೇಜಿಂಗ್‌ ಮಾಡಲಾಗುತ್ತಿದೆ.

ಸಗಣಿ ರಫ್ತಿಗೆ ಈಗಾಗಲೇ ಕುವೈತ್‌ ಹಾಗೂ ಭಾರತದ ನಡುವೆ ಒಪ್ಪಂದ ಏರ್ಪಟ್ಟಿದೆ. ಕುವೈತ್‌ನಲ್ಲಿ ಸಗಣಿ ಬಳಸಿ ಕೃಷಿ ಮಾಡುವ ಬಗ್ಗೆ ಸಂಶೋಧನೆಯೂ ನಡೆಯುತ್ತಿದೆ. ಈವರೆಗಿನ ಬೇರೆ ಬೇರೆ ಸಂಶೋಧನೆಗಳಿಂದ ನೈಸರ್ಗಿಕ ಕೃಷಿಗೆ ಸಗಣಿ ಬಳಸಿದರೆ ಇಳುವರಿ ಜಾಸ್ತಿಯಾಗುತ್ತದೆ ಮತ್ತು ಸಗಣಿ ಬಳಸಿ ಬೆಳೆದ ಆಹಾರದಿಂದ ಕೆಲ ರೋಗಗಳು ಬರುವುದಿಲ್ಲ ಎಂಬುದು ಕಂಡುಬಂದಿದೆ.

ಕುವೈತ್‌, ಒಣಹವೆಯ ಮತ್ತು ನೀರಿನ ಕೊರತೆಯ ದೇಶವಾಗಿರುವುದರಿಂದ ನೈಸರ್ಗಿಕ ಕೃಷಿಗೆ ಸಗಣಿಯ ಗೊಬ್ಬರ ಬಳಸುವುದಕ್ಕೆ ಒತ್ತು ನೀಡುತ್ತಿದೆ.

- ರಾಜಸ್ಥಾನದ ಜೈಪುರದ ಗೋಶಾಲೆಯೊಂದರಿಂದ ಪೂರೈಕೆ

- ಜೂ.15ರಂದು ಮೊದಲ ಬ್ಯಾಚ್‌ನ ಸಗಣಿ ಕುವೈತ್‌ಗೆ ರವಾನೆ

- ಕಸ್ಟಮ್ಸ್‌ ಇಲಾಖೆಯ ಮೇಲ್ವಿಚಾರಣೆಯಲ್ಲಿ ಸಗಣಿ ಪ್ಯಾಕೇಜ್‌

- ಭಾರತದ ಸಗಣಿ ಖರೀದಿಸಲು ಕುವೈತ್‌ನಿಂದ ಈಗಾಗಲೇ ಡೀಲ್‌

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಇಡಿಯಿಂದ ಮತ್ತೆ ಅನಿಲ್ ಅಂಬಾನಿ 1120 ಕೋಟಿ ಹೆಚ್ಚುವರಿ ಆಸ್ತಿ ಮುಟ್ಟುಗೋಲು
ಮನೆ ಮುಂದೆ ದನ ಸೆಗಣಿ ಹಾಕಿದ್ದಕ್ಕೆ ಯುವಕನ ಕೊಲೆ