ಫೋನ್‌ ಸಂಭಾಷಣೆ ಆಡಿಯೋ ಲೀಕ್: ಶವಗಳ ಜೊತೆ ರ‍್ಯಾಲಿಗೆ ಹೊರಟಿದ್ದ ಮಮತಾ?

Published : Apr 18, 2021, 07:37 AM IST
ಫೋನ್‌ ಸಂಭಾಷಣೆ ಆಡಿಯೋ ಲೀಕ್: ಶವಗಳ ಜೊತೆ ರ‍್ಯಾಲಿಗೆ ಹೊರಟಿದ್ದ ಮಮತಾ?

ಸಾರಾಂಶ

ಶವಗಳ ಜೊತೆ ರ‍್ಯಾಲಿಗೆ ಹೊರಟಿದ್ದ ಮಮತಾ?| ಬಂಗಾಳ ಸಿಎಂ ಫೋನ್‌ ಸಂಭಾಷಣೆ ಆಡಿಯೋ ಲೀಕ್‌| ಆಯೋಗಕ್ಕೆ ಬಿಜೆಪಿ ದೂರು| ಇದು ನಕಲಿ: ಟಿಎಂಸಿ

 ಅಸನ್ಸೋಲ್‌(ಏ.18): ಇತ್ತೀಚೆಗೆ ಕೂಚ್‌ ಬೆಹಾರ್‌ನಲ್ಲಿ ಭದ್ರತಾ ಪಡೆಗಳ ಗೋಲಿಬಾರ್‌ಗೆ ಬಲಿಯಾದ ನಾಲ್ವರ ಶವ ಇಟ್ಟುಕೊಂಡು ರಾರ‍ಯಲಿ ನಡೆಸಿ ರಾಜಕೀಯ ಲಾಭ ಪಡೆಯಲು ಸ್ವತಃ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸಂಚು ರೂಪಿಸಿದ್ದರು ಎಂಬ ಗಂಭೀರ ಆರೋಪ ಕೇಳಿಬಂದಿದೆ. ಇಂಥದ್ದೊಂದು ಆರೋಪಕ್ಕೆ ಸಾಕ್ಷ್ಯ ಎನ್ನುವಂಥ ಆಡಿಯೋವೊಂದನ್ನು ಬಿಜೆಪಿ ನಾಯಕರು ಶನಿವಾರ ಬಿಡುಗಡೆ ಮಾಡಿ, ಚುನಾವಣಾ ಆಯೋಗಕ್ಕೆ ದೂರನ್ನೂ ಸಲ್ಲಿಸಿದ್ದಾರೆ.

ಈ ನಡುವೆ, ಆಡಿಯೋ ಬಗ್ಗೆ ಶನಿವಾರ ಬಂಗಾಳದ ಅಸನ್ಸೋಲ್‌ನಲ್ಲಿ ನಡೆದ ರಾರ‍ಯಲಿಯಲ್ಲಿ ಪ್ರತಿಕ್ರಿಯಿಸಿರುವ ಪ್ರಧಾನಿ ಮೋದಿ, ಶವದ ಮೇಲೆ ದೀದಿ ರಾಜಕೀಯ ಮಾಡುತ್ತಿದ್ದಾರೆ ಎಂದು ಟೀಕಿಸಿದ್ದಾರೆ. ಆದರೆ ಟಿಎಂಸಿ ನಾಯಕರು ಮಾತ್ರ ಇದು ‘ಬೋಗಸ್‌ ಆಡಿಯೋ’ ಎಂದು ತಿರುಗೇಟು ನೀಡಿದ್ದಾರೆ. ಇದೇ ವೇಳೆ ನನ್ನ ದೂರವಾಣಿ ಕದ್ದಾಲಿಕೆ ಮಾಡಲಾಗುತ್ತಿದ್ದು, ಈ ಕುರಿತು ಸಿಐಡಿ ತನಿಖೆ ನಡೆಸಲಾಗುವುದು ಎಂದು ಅಬ್ಬರಿಸುವ ಮೂಲಕ, ಮಾತುಕತೆ ನಡೆದಿದ್ದನ್ನು ಮಮತಾ ಪರೋಕ್ಷವಾಗಿ ಒಪ್ಪಿಕೊಂಡಿದ್ದಾರೆ.

ಮೋದಿ ಟೀಕೆ:

ಆಡಿಯೋ ಬಗ್ಗೆ ಪ್ರತಿಕ್ರಿಯಿಸಿರುವ ಮೋದಿ ‘ಮಮತಾ ಬ್ಯಾನರ್ಜಿಗೆ ಶವಗಳ ಮೇಲೆ ರಾಜಕೀಯ ಮಾಡುವುದು ಹಳೇ ಚಟ. ಕೂಚ್‌ಬೆಹಾರ್‌ನ ಸೀತಾಲ್‌ಕುಚಿಯಲ್ಲಿ ನಡೆದ ಐವರ ದುರದೃಷ್ಟಕರ ಸಾವಿನ ವಿಚಾರವನ್ನೂ ಅವರು ರಾಜಕೀಯಕ್ಕೆ ಬಳಸಿಕೊಳ್ಳುತ್ತಿದ್ದಾರೆ’ ಎಂದು ದೂರಿದರು.

ಆಡಿಯೋದಲ್ಲೇನಿದೆ?

- ಮಮತಾ ಮತ್ತು ಸೀತಾಲ್‌ಕುಚಿ ಟಿಎಂಸಿ ಅಭ್ಯರ್ಥಿ ಪ್ರಾರ್ಥ ಪ್ರತಿಮ್‌ ರಾಯ್‌ ನಡುವೆ ನಡೆದಿದೆ ಎನ್ನಲಾದ ಸಂಭಾಷಣೆ

- ‘ನೀವೇನೂ ಆತಂಕಕ್ಕೆ ಒಳಗಾಗಬೇಡಿ. ಪೊಲೀಸರ ಗುಂಡಿಗೆ ಬಲಿಯಾದ ನಾಲ್ವರ ಶವಗಳೊಂದಿಗೆ ರಾರ‍ಯಲಿ ನಡೆಸಲು ಎಲ್ಲಾ ಸಿದ್ಧತೆ ನಡೆಸಿ’ ಎಂದು ಹೇಳಿದ ಮಮತಾ

- ವಕೀಲರ ಮೂಲಕ ಈ ನಾಲ್ವರ ಹತ್ಯೆ ಬಗ್ಗೆ ಪ್ರಕರಣ ದಾಖಲಿಸಿ. ಎಸ್‌ಪಿ ಮತ್ತು ಕೇಂದ್ರೀಯ ಪಡೆಗಳು ಯಾವುದೇ ಕಾರಣಕ್ಕೂ ತಪ್ಪಿಸಿಕೊಳ್ಳಬಾರದು ಎಂದೂ ತಾಕೀತು

- ಜನರ ಸಾವಿನ ವಿಚಾರವನ್ನೂ ಮಮತಾ ರಾಜಕೀಯಕ್ಕೆ ಬಳಸಿಕೊಳ್ಳುತ್ತಾರೆ ಎಂದು ಬಿಜೆಪಿ ದೂರು, ಟೀಕೆ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

15 ವರ್ಷಗಳಿಂದ ನಾಪತ್ತೆ: ವಿಡಿಯೋ ವೈರಲ್ ಬಳಿಕ ಮರಳಿ ಕುಟುಂಬ ಸೇರಿದ ಮಾಜಿ ಯೋಧ
ಪೌರತ್ವ ಸಿಗುವ ಮುನ್ನವೇ ವೋಟರ್‌ ಲಿಸ್ಟ್‌ನಲ್ಲಿ ಹೆಸರು, ಸೋನಿಯಾ ಗಾಂಧಿಗೆ ನೋಟಿಸ್‌ ಕೊಟ್ಟ ದೆಹಲಿ ಕೋರ್ಟ್!