
ಅಹಮದಾಬಾದ್[ಜ.04]: ‘ಭಾರತದ ಸಂವಿಧಾ ನದ ಕರಡು ರಚನೆಯ ಶ್ರೇಯಸ್ಸನ್ನು ಬ್ರಾಹ್ಮ ಣರಾಗಿದ್ದ ಬಿ.ಎನ್. ರಾವ್ ಅವರಿಗೆ ಸಂವಿಧಾನ ಶಿಲ್ಪಿ ಬಿ.ಆರ್. ಅಂಬೇಡ್ಕರ್ ನೀಡಿದ್ದರು’ ಎಂದು ಗುಜರಾತ್ ವಿಧಾನ ಸಭಾಧ್ಯಕ್ಷ ರಾಜೇಂದ್ರ ತ್ರಿವೇದಿ ಹೇಳಿದರು. ಅಧಿಕಾರಿಯಾಗಿದ್ದ ರಾವ್ ಅವರು ಕರ್ನಾಟಕದ ಮಂಗಳೂರು ಮೂಲದವರು ಎಂಬುದು ವಿಶೇಷ.
'ಬುದ್ಧ, ಬಸವ, ಅಂಬೇಡ್ಕರ್ ಓಡಿಸಿದವರಿಂದ ಬಿಜೆಪಿಗೆ ಓಟು'
ಸಮ್ಮೇಳನದಲ್ಲಿ ಮಾತನಾಡಿದ ಅವರು, ‘ಭಾರತದ ಸಂವಿಧಾನ ರಚಿಸಲು 60 ದೇಶ ಗಳ ಸಂವಿಧಾನ ಅಧ್ಯಯನ ಮಾಡಲಾಯಿತು ಎಂಬುದು ನಿಮಗೆ ಗೊತ್ತೇ? ಸಂವಿಧಾನದ ಕರಡನ್ನು ಅಂಬೇಡ್ಕರ್ ಅವರಿಗೆ ನೀಡಿದ್ದು ಯಾರು ಎಂಬುದು ಗೊತ್ತೇ? ಸಂವಿಧಾನ ಎಂದರೆ ನಾವೆಲ್ಲ ಅಂಬೇಡ್ಕರ್ ಅವರನ್ನು ನೆನೆಯುತ್ತೇವೆ ಎಂದಿದ್ದಾರೆ.
ಅಲ್ಲದೇ ಸಂವಿಧಾನದ ಕರಡು ಸಿದ್ಧಪಡಿಸಿದ್ದು ಬ್ರಾಹ್ಮಣ ರಾದ ಬೆನೆಗಲ್ ನರಸಿಂಗರಾವ್ ಅವರು ಎಂದು ಅಂಬೇಡ್ಕರ್ ಅವರೇ ಹೇಳಿದ್ದರು. ಅಂಬೇಡ್ಕರ್ರನ್ನು ಮುಂದಕ್ಕೆ ತಂದು ಅವರ ಹಿಂದಿದ್ದವರೇ ರಾವ್. 1949ರ ನವೆಂಬರ್ ೨೫ರ ತಮ್ಮ ಭಾಷಣದಲ್ಲಿ ಅಂಬೇಡ್ಕರ್ ಅವರೇ ಈ ವಿಚಾರವನ್ನು ಒಪ್ಪಿಕೊಂಡಿದ್ದರು ಎಂದು ಹೇಳಿದ್ದಾರೆ.
ಸಿಂದಗಿಯಲ್ಲಿ ಗುಂಪು ಘರ್ಷಣೆ: ಅಂಬೇಡ್ಕರ್ ಮೂರ್ತಿ ಭಗ್ನ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ