ನೀರಾವರಿ ಹಗರಣದಲ್ಲಿ ಅಜಿತ್ ಪವಾರ್‌ಗೆ ಕ್ಲಿನ್‌ಚಿಟ್ ನೀಡಿದ ಎಸಿಬಿ!

By Suvarna NewsFirst Published Dec 6, 2019, 3:08 PM IST
Highlights

ವಿದರ್ಭ ನೀರಾವರಿ ಹಗರಣದಲ್ಲಿ ಅಜಿತ್ ಪವಾರ್‌ಗೆ ಕ್ಲಿನ್‌ಚಿಟ್| ಅಜಿತ್ ಪವಾರ್‌ಗೆ ಕ್ಲಿನ್‌ಚಿಟ್ ನೀಡಿದ ಮಹಾರಾಷ್ಟ್ರ ಭ್ರಷ್ಟಾಚಾರ ವಿರೋಧಿ ದಳ| ನಾಗಪುರ್ ನ್ಯಾಯಪೀಠಕ್ಕೆ ಎಸಿಬಿ ಅಫಿಡವಿಟ್| ನೀರಾವರಿ ಹಗರಣಗಳಲ್ಲಿ ಅಜಿತ್​ ಪವಾರ್ ಪಾತ್ರವಿಲ್ಲ ಎಂದ ಎಸಿಬಿ| ಎಸಿಬಿ ರಾಜ್ಯ ಸರ್ಕಾರದ ಒತ್ತಡಕ್ಕೆ ಮಣಿದಿದೆ ಎಂಬ ಆರೋಪ|

ಮುಂಬೈ(ಡಿ.06): ಮಹತ್ವದ ಬೆಳವಣಿಗೆಯೊಂದರಲ್ಲಿ ವಿದರ್ಭ ನೀರಾವರಿ ಹಗರಣದ ಪ್ರಮುಖ ಆರೋಪಿಯಾಗಿದ್ದ ಎನ್​ಸಿಪಿ ನಾಯಕ ಅಜಿತ್ ಪವಾರ್‌ಗೆ, ಮಹಾರಾಷ್ಟ್ರ ಭ್ರಷ್ಟಾಚಾರ ವಿರೋಧಿ ದಳ(ಎಸಿಬಿ)  ಕ್ಲಿನ್‌ಚಿಟ್ ನೀಡಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಂಬೆ ಹೈಕೋರ್ಟ್​ನ ನಾಗಪುರ್ ನ್ಯಾಯಪೀಠಕ್ಕೆ ಎಸಿಬಿ ಅಫಿಡವಿಟ್ ಸಲ್ಲಿಸಿದ್ದು, ವಿದರ್ಭ ಪ್ರದೇಶದಲ್ಲಿ ನಡೆದಿರುವ ನೀರಾವರಿ ಹಗರಣಗಳಲ್ಲಿ ಅಜಿತ್​ ಪವಾರ್ ಪಾತ್ರವಿಲ್ಲ ಎಂದು ಸ್ಪಷ್ಟಪಡಿಸಿದೆ.

ಅಜಿತ್‌ ಪವಾರ್‌ ಅವಧಿಯ 9 ನೀರಾವರಿ ಹಗರಣಗಳ ತನಿಖೆಗೆ ತಿಲಾಂಜಲಿ!

ಅಜಿತ್ ಪವಾರ್ ಜಲಸಂಪನ್ಮೂಲ ಸಚಿವರಾಗಿದ್ದಾಗ ಮಹಾರಾಷ್ಟ್ರದ ಅತ್ಯಂತ ಬರಪೀಡಿತ ಪ್ರದೇಶವಾದ ವಿದರ್ಭದಲ್ಲಿ ಹಲವು ನೀರಾವರಿ ಯೋಜನೆಗಳು ಜಾರಿಯಾಗಿದ್ದವು. ಆದರೆ ಈ ಯೋಜನೆಯಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ಆರೋಪಿಸಿ ಎಸಿಬಿಯಲ್ಲಿ ಪ್ರಕರಣ ದಾಖಲಾಗಿತ್ತು.

Maharashtra’s anti-corruption bureau (ACB) clears NCP's Ajit Pawar of allegations in irrigation scam.The affidavit, submitted on 27 Nov at Bombay HC,states 'Chairman of VIDC (Ajit Pawar) can't be held responsible for acts of executing agencies,as there's no legal duty on his part pic.twitter.com/C31dKmyABQ

— ANI (@ANI)

ಇದೀಗ ಭ್ರಷ್ಟಾಚಾರದಲ್ಲಿ ಅಜಿತ್ ಪವಾರ್ ಪಾತ್ರವನ್ನು ನಿರಾಕರಿಸಿರುವ ಎಸಿಬಿ, ಕ್ಲಿನ್‌ಚಿಟ್ ನೀಡುವ ಮೂಲಕ ರಾಜ್ಯ ಸರ್ಕಾರದ ಒತ್ತಡಕ್ಕೆ ಮಣಿದಿದೆ ಎಂಬ ಆರೋಪಕ್ಕೆ ಗುರಿಯಾಗಿದೆ.

9 ನೀರಾವರಿ ಹಗರಣ ಪ್ರಕರಣ ಹಿಂಪಡೆದ ಎಸಿಬಿ: ಇದು ಪವಾರ್ ಪವರ್?

click me!