ಟ್ರಂಪ್‌ ಹಾದಿ ಸುಗಮಗೊಳಿಸಲು ನಾಯಿ, ನೀಲಿ ಜಿಂಕೆ 'ಮಾಯ': ಪಾನ್ ಅಂಗಡಿ ಸೀಲ್!

Published : Feb 17, 2020, 01:29 PM ISTUpdated : Feb 17, 2020, 03:02 PM IST
ಟ್ರಂಪ್‌ ಹಾದಿ ಸುಗಮಗೊಳಿಸಲು ನಾಯಿ, ನೀಲಿ ಜಿಂಕೆ 'ಮಾಯ': ಪಾನ್ ಅಂಗಡಿ ಸೀಲ್!

ಸಾರಾಂಶ

ಟ್ರಂಪ್ ಭಾರತ ಭೇಟಿ| ಗುಜರಾತ್‌ಗೆ ಭೇಟಿ ನೀಡಲಿರುವ ಟ್ರಂಪ್‌ಗಾಗಿ ಭರದ ಸಿದ್ಧತೆ| ಟ್ರಂಪ್ ಸಂಚರಿಸುವ ಹಾದಿಯ ನಾಯಿ, ನೀಲಿ ಜಿಂಕೆಗಳು ಮಾಯ| ಪಾನ್‌ ಅಂಗಡಿಗಳಿಗೂ ಬೀಗ

ಅಹಮದಾಬಾದ್[ಫೆ.17]: ಅಮೆರಿಕಾ ರಾಷ್ಟ್ರಪತಿ ಡೊನಾಲ್ಡ್ ಟ್ರಂಪ್ ಭಾರತ ಪ್ರವಾಸ ಕೈಗೊಳ್ಳಲಿದ್ದಾರೆ. ಗುಜರಾತ್‌ನ ಅಹಮದಾಬಾದ್‌ನಲ್ಲಿ ಇದಕ್ಕಾಗಿ ವಿಶೇಷ ತಯಾರಿ ನಡೆಯುತ್ತಿದೆ. ಮೂರು ಗಂಟೆಯ ಭೇಟಿ ವೇಳೆ ಟ್ರಂಪ್‌ಗೆ ಅಹಮದಾಬಾದ್ ಸ್ವಚ್ಛ ಹಾಗೂ ಸುಂದರವಾಗಿ ಕಾಣಬೇಕೆಂಬ ನಿಟ್ಟಿನಲ್ಲಿ ಎಲ್ಲಾ ರೀತಿಯ ಪ್ರಯತ್ನಗಳು ನಡೆಯುತ್ತಿವೆ. ಸ್ಲಂ ಕಾಣಬಾರದೆಂಬ ನಿಟ್ಟಿನಲ್ಲಿ ಎತ್ತರದ ಗೋಡೆಗಳ ನಿರ್ಮಾಣ ಕಾರ್ಯ ನಡೆಯುತ್ತಿರುವ ವಿಚಾರ ಬಹಿರಂಗಗೊಂಡಿತ್ತು. ಇದೀಗ ಟ್ರಂಪ್ ಹಾದಿಯಲ್ಲಿರುವ ನಾಯಿ, ನೀಲಿ ಜಿಂಕೆಗಳನ್ನೂ 'ಮಾಯ' ಮಾಡಲಾಗುತ್ತದೆ. ಇಷ್ಟೇ ಅಲ್ಲ ಜನರು ಪಾನ್ ತಿಂದು ಗೋಡೆಗಳ ಮೇಲೆ ಉಗಿಯಬಾರದೆಂಬ ನಿಟ್ಟಿನಲ್ಲಿ ಪಾನ್ ಅಂಗಡಿಗಳನ್ನೂ ಸೀಲ್ ಮಾಡಲಾಗುತ್ತಿದೆ. 

3 ಗಂಟೆ ಇರಲಿರುವ ಟ್ರಂಪ್‌ಗಾಗಿ 100 ಕೋಟಿ ರೂ. ಖರ್ಚು ಮಾಡಿದ ಸರ್ಕಾರ!

2015ರಲ್ಲಿ ಎದುರಾಗಿತ್ತು ಮುಜುಗರ

2015ರಲ್ಲಿ ಘಟನೆಯೊಂದು ನಡೆದಿತ್ತು. ಅಮೆರಿಕಾದ ಸಚಿವ ಜಾನ್ ಕೈರಿ ವೈಬ್ರೆಂಟ್ ಗುಜರಾತ್ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ತೆರಳಲು ಸಿದ್ಧರಾಗಿ ವಿಮಾನ ನಿಲ್ದಾಣದತ್ತ ಹೊರಟಿದ್ದರು. ಆದರೆ ಈ ವೇಳೆ ನಾಯಿಯೊಂದು ಅವರ ವಾಹನದೆದುರು ಬಂದಿತ್ತು. ಈ ವೇಳೆ ವೇಗವಾಗಿ ಚಲಿಸುತ್ತಿದ್ದ ಕಾರು ನಾಯಿಗೆ ತಾಗಿತ್ತು. ಆದರೆ ಈ ಬಾರಿ ಇಂತಹ ಮುಜುಗರ ಎದುರಾಗಬಾರದೆಂಬ ನಿಟ್ಟಿನಲ್ಲಿ ಎಲ್ಲಾ ರೀತಿಯ ಮುಂಗಾಗೃತಾ ಕ್ರಮ ಕೈಗೊಳ್ಳಲಾಗುತ್ತಿದೆ. ಪಶು ಸಂಗೋಪನಾ ಇಲಾಖೆ ಇದಕ್ಕಾಗಿ ಸೋಮವಾರದಂದು ವಿಶೇಷ ಸಭೆ ಕರೆದಿದೆ. ಇದರಲ್ಲಿ ಬೀದಿ ನಾಯಿಗಳನ್ನು 5 ದಿನಗಳವರೆಗೆ VVIP ಹಾದಿಯಿಂದ ದೂರ ಇಡುವುದು ಹೇಗೆ ಎಂಬ ನಿಟ್ಟಿನಲ್ಲಿ ಸಮಾಲೋಚನೆ ನಡೆಸಲಾಗುತ್ತದೆ.

ಇನ್ನು ವಿಮಾನ ನಿಲ್ದಾಣದಿಂದ ಸ್ಟೇಡಿಯಂಗೆ ತೆರಳುವ ಹಾದಿಯಲ್ಲಿ  1 ಕಿ. ಮೀಟರ್ ಪ್ರದೇಶದಲ್ಲಿ ನೀಲಿ ಜಿಂಕೆಗಳು ಹೇರಳವಾಗಿವೆ. ಅವುಗಳ ನಿಯಂತ್ರಣಕ್ಕಾಗಿ ಅರಣ್ಯ ಇಲಾಖೆ ಕ್ರಮ ಕೈಗೊಳ್ಳಲಿದೆ. ಇನ್ನು VVIP ಹಾದಿಯಲ್ಲಿ ಸುಮಾರು 2.75 ಕಿ. ಮೀಟರ್ ಪ್ರದೇಶದಲ್ಲಿ ಬೀದಿ ನಾಯಿಗಳು ಹೆಚ್ಚಾಗಿ ಇರುವುದರಿಂದ ಅವುಗಳನ್ನು ದೂರವಿಡಲು, ಸರ್ಕಾರ ಕ್ರಮ ಕೈಗೊಳ್ಳಲಿದೆ.

ಟ್ರಂಪ್‌ಗೆ ಸ್ಲಮ್ ಕಾಣದಂತೆ ತಡೆಯಲು ಅರ್ಧ ಕಿಮೀ ಉದ್ದದ ತಡೆಗೋಡೆ!

ಮೂರು ಪಾನ್ ಅಂಗಡಿಗಳು ಸೀಲ್

ದೇಶದೆಲ್ಲೆಡೆ ಪೇಮಸ್ಬ ಆಗಿರುವ ಪಾನ್ ಗುಜರಾತ್‌ನಲ್ಲೂ ತಿನ್ನುತ್ತಾರೆ. ಇಲ್ಲಿನ ಜನರೂ ಪಾನ್ ತಿಂದು ಹಾದಿಬದಿಯಲ್ಲೇ ಉಗಿಯುತ್ತಾರೆ. ಆದರೆ ಟ್ರಂಪ್ ಪ್ರವಾಸ ಮುಗಿಯುವವರೆಗೆ ಜನರಿಗೆ ಹೀಗೆ ಮಾಡಲು ಕಷ್ಟವಾಗಬಹುದು. ವಿಮಾನ ನಿಲ್ದಾಣದಿಂದ ಸ್ಟೇಡಿಯಂವರೆಗಿನ ಹಾದಿ ಸ್ವಚ್ಛವಾಗಿರಬೇಕೆಂಬ ನಿಟ್ಟಿನಲ್ಲಿ ಾಡಳಿತ ಅಧಿಕಾರಿಗಳು ಈ ಹಾದಿಯಲ್ಲಿರುವ ಸುಮಾರು ಮೂರು ಪಾನ್ ಅಂಗಡಿಗಳನ್ನು ಸೀಲ್ ಮಾಡಿದೆ. ಒಂದು ವೇಳೆ ಈ ಬೀಗ ತೆರೆದರೆ ಕ್ರಮ ಕೈಗೊಳ್ಳುವುದಾಗಿ ಅಂಗಡಿ ಮಾಲೀಕರಿಗೆ ಖಡಕ್ ಎಚ್ಚರಿಕೆ ನೀಡಲಾಗಿದೆ. 

News In 100 Seconds: ಪ್ರಮುಖ ಸುದ್ದಿಗಳು

"

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಮಾಲೀಕನ ನಿಧನಕ್ಕೆ ಬಿಕ್ಕಿ ಬಿಕ್ಕಿ ಕಣ್ಣೀರು ಹಾಕಿದ ಶ್ವಾನ; ವಿಡಿಯೋ ನೋಡಿ ಭಾವುಕರಾದ ಜನರು
India Latest News Live: ಭಾರತ-ದಕ್ಷಿಣ ಆಫ್ರಿಕಾ 2ನೇ ಟಿ20 - ಮತ್ತೊಂದು ಗೆಲುವಿನ ವಿಶ್ವಾಸದಲ್ಲಿ ಟೀಂ ಇಂಡಿಯಾ!