
ಅಹಮದಾಬಾದ್(ಮೇ.11): ಕ್ಯಾನ್ಸರ್ ನನಗೇನೂ ಹಾನಿ ಮಾಡಲು ಆಗಲಿಲ್ಲ ಅಂದ್ಮೇಲೆ, ಈ ಕೊರೋನಾ ಏನೂ ಅಲ್ಲ. ಈ ಮಾತುಗಳನ್ನು ಹೇಳಿದ್ದು 74 ವರ್ಷದ ಯೂಸುಫ್. ಕೊರೋನಾವನ್ನು ಮಣಿಸಿದ ಅವರು ಗುಣಮುಖರಾಗಿ ಮನೆಗೆ ಮರಳಿದ್ದಾರೆ. ಕಳೆದೊಂದು ವಾರದ ಹಿಂದೆ ಅವರಿಗೆ ಕೊರೋನಾ ಪಾಸಿಟಟಿವ್ ಇದೆ ಎಂದು ಅಜ್ವಾ ರೋಡ್ನಲ್ಲಿರುವ ಕೋವಿಡ್ ಕೇರ್ ಸೆಂಟರ್ಗೆ ಶಿಫ್ಟ್ ಮಾಡಲಾಗಿತ್ತು.
ಯೂಸುಫ್ ಅಪರೂಪದ ಕ್ಯಾನ್ಸರ್ನಿಂದ ಬಳಲುತ್ತಿದ್ದಾರೆ, ಈ ಕ್ಯಾನ್ಸರ್ನಿಂದ ಹೊಟ್ಟೆಯೊಳಗಿನ ಅಂಗಗಳು ಹಾನಿಯಾಗುತ್ತವೆ. ಇಂತ ಮಾರಕ ರೋಗವಿದ್ದರೂ ಈ ವ್ಯಕ್ತಿ ಕೊರೋನಾ ಮಣಿಸಿರುವುದು ಎಲ್ಲರನ್ನೂ ಅಚ್ಚರಿಗೀಡು ಮಾಡಿದೆ. ಶನಿವಾರ ಮತ್ತೆ ಕೊರೋನಾ ವೈರಸ್ ಸಂಬಂಧಿತ ಪರೀಕ್ಷೆ ನಡೆಸಲಾಗಿದ್ದು, ನೆಗೆಟಿವ್ ಎಂಬ ವರದಿ ಬಂದಿದೆ. ಇನ್ನು ಈ ಹಿಂದೆ ಯೂಸುಫ್ಗೆ ಎರಡು ಬಾರಿ ಹೃದಯಾಘಾತ ಕೂಡಾ ಆಗಿದೆ.
ಇನ್ನು ಚೈತನ್ಯತೆ, ಆತ್ಮವಿಶ್ವಾಸ ಹಾಗೂ ಬದುಕಬೇಕೆಂಬ ಆಸೆಯೇ ನನ್ನ ಸಾಮರ್ಥ್ಯದ ಹಿಂದಿನ ಗುಟ್ಟು. ನನ್ನ ಅರೋಗ್ಯ ಸ್ಥಿರವಾಗಿದೆ ಹಾಗೂ ನಾನು ಹೋಂ ಕ್ವಾರಂಟೈನ್ನಲ್ಲಿರಬಹುದೆಂದು ವೈದ್ಯರೇ ತಿಳಿಸಿರುವುದಾಗಿ ಯೂಸುಫ್ ಹೆಳಿದ್ದಾರೆ.
ಚಿಕಿತ್ಸೆ ನೀಡಿದ ವೈದ್ಯರಿಗೂ ಅಚ್ಚರಿ
ಇನ್ನು ಇವರಿಗೆ ಚಿಕಿತ್ಸೆ ನೀಡಿದ ವೈದ್ಯ ಮೊಹಮ್ಮದ್ ಹುಸೈನ್ ಪ್ರತಿಕ್ರಿಯಿಸಿದ್ದು, 'ಅವರ ಧನಾತ್ಮಕ ಚಿಂತನೆ ಹಾಗೂ ಚೈತನ್ಯ ಒಂದೆಡೆ ಕೊರೋನಾ ಮಣಿಸಲು ಸಹಾಯ ಮಾಡಿದ್ದರೆ, ಮತ್ತೊಂದೆಡೆ ಅವರು ಪಾಲಿಸುತ್ತಿದ್ದ ಆಹಾರ ಕ್ರಮವೂ ಇದಕ್ಕೆ ಪೂರಕವಾಗಿತ್ತು' ಎಂದಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ