
ಕೋಲ್ಕತಾ(ಫೆ.26): ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ವಿದ್ಯುತ್ ಚಾಲಿತ ದ್ವಿಚಕ್ರ ವಾಹನವನ್ನು ಖುದ್ದಾಗಿ ತಾವೇ ಚಾಲನೆ ಮಾಡುವ ಮೂಲಕ ಇಂಧನ ದರ ಏರಿಕೆ ವಿರುದ್ಧ ವಿಶೇಷ ಪ್ರತಿಭಟನೆ ನಡೆಸಿದರು.
ಗುರುವಾರ ಬೆಳಗ್ಗೆ ಬ್ಯಾನರ್ಜಿ ಅವರು ತಮ್ಮ ನಿವಾಸದಿಂದ 7 ಕಿ. ಮೀ ದೂರದ ವಿಧಾನಸೌಧಕ್ಕೆ ವಿದ್ಯುತ್ ಚಾಲಿತ ಸ್ಕೂಟರ್ನಲ್ಲಿ ಹಿಂಬದಿ ಸವಾರರಾಗಿ ತೆರಳಿದರು. ಆದರೆ ವಿಧಾನಸೌಧದಿಂದ ಹಿಂದಿರುಗುವಾಗ ಎಲೆಕ್ಟ್ರಿಕ್ ಚಾಲಿತ ಸ್ಕೂಟರ್ ಅನ್ನು ಬ್ಯಾನರ್ಜಿ ಅವರು ತಾವೇ ಚಾಲನೆ ಮಾಡಿದರು.
ಈ ವೇಳೆ ‘ಪೆಟ್ರೋಲ್, ಡೀಸೆಲ್ ಮತ್ತು ಅಡುಗೆ ಅನಿಲ ದರವೂ ಭಾರೀ ಏರಿಕೆ ಕಂಡಿದೆ. ಆದರೆ ನಿಮ್ಮ ಬಾಯಲ್ಲಿ ಏನಿಟ್ಟುಕೊಂಡಿದ್ದೀರಿ’ ಎಂಬ ಸ್ಲೋಗನ್ ಇರುವ ಬ್ಯಾನರ್ ಅನ್ನು ತಮ್ಮ ಕುತ್ತಿಗೆಗೆ ನೇತು ಹಾಕಿಕೊಂಡಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ