'ಸೋಶಿಯಲ್‌ ಮೀಡಿಯಾದಲ್ಲಿ ಪೋಸ್ಟ್‌ ಮಾಡ್ತೇನೆ..' ಮಗಳ ಬಳಿಕ ಪಂಜಾಬ್‌ ಸಿಎಂ ಭಗವಂತ್‌ ಮಾನ್‌ಗೆ ಮಾಜಿ ಪತ್ನಿ ಬೆದರಿಕೆ!

Published : Dec 10, 2023, 03:58 PM ISTUpdated : Dec 10, 2023, 04:01 PM IST
'ಸೋಶಿಯಲ್‌ ಮೀಡಿಯಾದಲ್ಲಿ ಪೋಸ್ಟ್‌ ಮಾಡ್ತೇನೆ..' ಮಗಳ ಬಳಿಕ ಪಂಜಾಬ್‌ ಸಿಎಂ ಭಗವಂತ್‌ ಮಾನ್‌ಗೆ ಮಾಜಿ ಪತ್ನಿ ಬೆದರಿಕೆ!

ಸಾರಾಂಶ

ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಅವರು ಮದ್ಯ ಸೇವಿಸಿ ಗುರುದ್ವಾರಕ್ಕೆ ಹೋಗುತ್ತಾರೆ ಎಂದು ಅವರ ಪುತ್ರಿ ಆರೋಪ ಮಾಡಿದ್ದರು. ಅದರ ಬೆನ್ನಲ್ಲಿಯೇ, ಭಗವಂತ್ ಮಾನ್ ಮಾಜಿ ಪತ್ನಿ ಪ್ರೀತ್ ಗ್ರೆವಾಲ್ ದೊಡ್ಡ ಬೆದರಿಕೆ ಹಾಕಿದ್ದಾರೆ.

ನವದೆಹಲಿ (ಡಿ.10) :ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಅವರ ಮಾಜಿ ಪತ್ನಿ ಪ್ರೀತ್ ಗ್ರೆವಾಲ್ ಅವರು ಮಾನ್‌ ಸಾಹೇಬ್ ಅವರು ಮದ್ಯ ಸೇವಿಸಿ ಬೆತ್ತಲೆಯಾಗಿ ನೃತ್ಯ ಮಾಡುತ್ತಿರುವ ವೀಡಿಯೊಗಳನ್ನು ಶೀಘ್ರದಲ್ಲೇ ಪೋಸ್ಟ್ ಮಾಡುವುದಾಗಿ ಸಾಮಾಜಿಕ ಮಾಧ್ಯಮ ಪೋಸ್ಟ್ ಮೂಲಕ ಬೆದರಿಕೆ ಹಾಕಿದ್ದಾರೆ. ಒಂದು ದಿನದ ಹಿಂದೆ, ಭಗವಂತ್ ಮಾನ್ ಅವರ ಮಗಳು ಕೂಡ ಮಾನ್ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ್ದರು ಮತ್ತು ಅವರು ಮದ್ಯ ಸೇವಿಸಿ ಗುರುದ್ವಾರಕ್ಕೆ ಹೋಗುತ್ತಾರೆ ಎಂದು ಪುತ್ರಿ ಆರೋಪ ಮಾಡಿದ್ದರು. ಪಂಜಾಬ್ ಸಿಎಂ ಭಗವಂತ್ ಮಾನ್ ಅವರ ಮಾಜಿ ಪತ್ನಿ ಪ್ರೀತ್ ಗ್ರೆವಾಲ್ ಅವರು ಸಾಮಾಜಿಕ ಮಾಧ್ಯಮ ವೇದಿಕೆ ಫೇಸ್‌ಬುಕ್‌ನಲ್ಲಿ ಈ ಬಗ್ಗೆ ಬರೆದುಕೊಂಡಿದ್ದು. ನಾನು ಇದನ್ನು ಪ್ರಾರಂಭ ಮಾಡಿದ್ದಲ್ಲ ಆದರೆ, ಇದನ್ನು ಹೇಗೆ ನಡೆಸಬೇಕು ಎನ್ನುವುದು ನನಗೆ ಗೊತ್ತಿದೆ. ನನ್ನ ಫೇಸ್‌ ಬುಕ್‌ ಪುಟಕ್ಕೆ ಟ್ಯೂನ್‌ ಆಗಿದೆ. ಭಗವಂತ್ ಮಾನ್ ಮದ್ಯ ಸೇವಿಸಿ ಬೆತ್ತಲೆಯಾಗಿ ಡ್ಯಾನ್ಸ್ ಮಾಡಿರುವ ವಿಡಿಯೋವನ್ನು ಶೇರ್ ಮಾಡುತ್ತೇನೆ ಎಂದು ಪ್ರೀತ್ ಗ್ರೆವಾಲ್ ಪಂಜಾಬಿ ಭಾಷೆಯಲ್ಲಿ ಬರೆದುಕೊಂಡಿದ್ದಾರೆ.

ಭಗವಂತ್ ಮಾನ್ ಬಗ್ಗೆ ಮಗಳು ಸೀರತ್ ಕೌರ್ ಹೇಳಿದ್ದೇನು?: ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಅವರ ಪುತ್ರಿ ಸೀರತ್ ಕೌರ್ ತನ್ನ ತಂದೆಯ ವಿರುದ್ಧ ಸೆನ್ಸೇಷನಲ್ ಆರೋಪ ಮಾಡಿದ್ದರು. ನನ್ನ ತಂದೆ ಮದ್ಯ ಸೇವಿಸಿ ಗುರುದ್ವಾರಕ್ಕೆ ಹೋಗುತ್ತಾರೆ ಎಂದು ಹೇಳಿದ್ದಾರೆ. ಅವರು ತಮ್ಮ ಮೂರನೇ ಮಗುವಿಗೆ ತಂದೆಯಾಗಲಿದ್ದಾರೆ. ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಶಿರೋಮಣಿ ಅಕಾಲಿದಳದ ನಾಯಕ ಬಿಕ್ರಮ್ ಸಿಂಗ್ ಮಜಿಥಿಯಾ ಅವರು ಸೀರತ್ ಕೌರ್ ಅವರ ವೀಡಿಯೊವನ್ನು ತೋರಿಸಿದರು.

ಪ್ರಧಾನಿ ಮೋದಿಗೆ ಭಾರಿ ಭದ್ರತಾ ಲೋಪ: 7 ಪೊಲೀಸರ ಅಮಾನತು ಮಾಡಿದ ಸರ್ಕಾರ

ವಿವಾದಾತ್ಮಕ ವೀಡಿಯೊದಲ್ಲಿ, ಸೀರತ್ ಕೌರ್ ತನ್ನ ತಂದೆ ಭಗವಂತ್ ಮಾನ್ ವಿರುದ್ಧ ಆರೋಪಗಳನ್ನು ಮಾಡುವುದನ್ನು ಕಾಣಬಹುದು. ಭಗವಂತ್ ಮಾನ್ ತನ್ನ ಮತ್ತು ತನ್ನ ಸಹೋದರನ ಜವಾಬ್ದಾರಿಯನ್ನು ತೆಗೆದುಕೊಳ್ಳಲು ನಿರಾಕರಿಸಿದ್ದಾರೆ ಎಂದು ಸೀರತ್ ಹೇಳಿದ್ದಾರೆ. ವೀಡಿಯೋದಲ್ಲಿ, "ಒಬ್ಬ ವ್ಯಕ್ತಿಗೆ ಪೋಷಕರ ಜವಾಬ್ದಾರಿಯನ್ನು ಪೂರೈಸಲು ಸಾಧ್ಯವಾಗದಿದ್ದರೆ, ಪಂಜಾಬ್ ಅನ್ನು ನಡೆಸುವ ಜವಾಬ್ದಾರಿಯನ್ನು ಅವನಿಗೆ ಹೇಗೆ ವಹಿಸಲು ಸಾಧ್ಯ? ಎಂದು ಪ್ರರ್ಶನೆ ಮಾಡಿದ್ದಾರೆ.

ಪಂಜಾಬ್‌ ಗೌರ್ನರ್‌ಗೆ ಸುಪ್ರೀಂ ಚಾಟಿ: ಮಸೂದೆಗೆ ಸಹಿ ಹಾಕದ್ದಕ್ಕೆ ರಾಜ್ಯಪಾಲರಿಗೆ ತೀವ್ರ ತರಾಟೆ

ಸಿಎಂ ಭಗವಂತ್ ಮಾನ್ ಸುತ್ತ ವಿವಾದ: ಈ ಹಿಂದೆ, ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಅವರ ಪುತ್ರಿ ಸೀರತ್ ಮಾನ್ ಅವರ ವಿಡಿಯೋ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿತ್ತು. ವೀಡಿಯೊದಲ್ಲಿ, ಭಗವಂತ್‌ ಮಾನ್‌ ಅವರ ಪುತ್ರಿ ಸೀರತ್, ಇನ್ನು ಮುಂದೆ ನಾನು ಅವರನ್ನು ಸಿಎಂ ಮಾನ್‌ ಎಂದು ಕರೆಯುತ್ತೇನೆ. ಪಾಪಾ ಎಂದು ಕರೆಯಲು ಅವರು ಅರ್ಹರಲ್ಲ ಎಂದು ಹೇಳಿದ್ದಾರೆ. ಈ ವಿಡಿಯೋವನ್ನು ಶೇರ್ ಮಾಡುವುದರ ಹಿಂದಿನ ಉದ್ದೇಶ ರಾಜಕೀಯವಲ್ಲ ಎಂದು ಸೀರತ್ ಸ್ಪಷ್ಟಪಡಿಸಿದ್ದಾರೆ. ಅವಳು ಕಥೆಯ ತನ್ನ ಕಡೆಯಿಂದ ಕೇಳಬೇಕೆಂದು ಬಯಸಿದ್ದಾಳೆ. ಆಕೆಯ ಪ್ರಕಾರ, ಜನರು ತಮ್ಮ ಕುಟುಂಬದ ಬಗ್ಗೆ ಕೇಳಿದ್ದನ್ನೆಲ್ಲ ಸಿಎಂ ಮಾನ್ ಅವರೇ ಬಹಿರಂಗಪಡಿಸಿದ್ದಾರೆ ಎಂದು ದೂರಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಉಗ್ರವಾದದ ವಿರುದ್ಧ ಜಂಟಿ ಹೋರಾಟ : ಮೋದಿ ಘೋಷಣೆ
Suvarna Special: ಸಂನ್ಯಾಸಿ ಸಿಂಹಾಸನ.. ಸಂಘ ಸಪ್ತಕೋಟಿ..! ಯೋಗಿ ಪಟ್ಟಕ್ಕೆ ಏಳು ಸುತ್ತಿನ ಕೋಟೆ ಕಟ್ಟುತ್ತಿದೆ RSS..!