
ಲಖನೌ[ಡಿ.01]: ಅಯೋಧ್ಯೆಯಲ್ಲಿ ಬಾಬ್ರಿ ಮಸೀದಿ ಧ್ವಂಸ ಮಾಡಿದ್ದಕ್ಕೆ ಪ್ರತಿ ವರ್ಷ ಡಿಸೆಂಬರ್ 6ರಂದು ಹಿಂದು ಸಂಘಟನೆಗಳು ನಡೆಸುತ್ತಿದ್ದ ‘ಶೌರ್ಯ ದಿವಸ’ದ ಆಚರಣೆ ಈ ಬಾರಿ ನಡೆಯುವ ಸಾಧ್ಯತೆ ಇಲ್ಲ.
ರಾಮಜನ್ಮಭೂಮಿ ನ್ಯಾಸ್ ಸಂಸ್ಥೆಯ ಮುಖ್ಯಸ್ಥ ಮಹಾಂತ ನೃತ್ಯಗೋಪಾಲ ದಾಸ್ ಹಾಗೂ ವಿಎಚ್ಪಿ ವಕ್ತಾರ ಶರದ್ ಶರ್ಮಾ ಶನಿವಾರ ಈ ಸುಳಿವು ನೀಡಿದ್ದಾರೆ.
‘ಸುಪ್ರೀಂ ಕೋರ್ಟು ಇತ್ತೀಚೆಗೆ ರಾಮಮಂದಿರ ನಿರ್ಮಾಣ ಪರ ತೀರ್ಪು ನೀಡಿದೆ. ಹೀಗಾಗಿ ಈ ಸಂದರ್ಭದಲ್ಲಿ ಡಿಸೆಂಬರ್ 6ರಂದು ಶೌರ್ಯ ದಿವಸ ಆಚರಣೆ ಅಥವಾ ಸಂಭ್ರಮಾಚರಣೆ ಅಪ್ರಸ್ತುತವಾಗಿದೆ’ ಎಂದು ದಾಸ್ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
‘ಡಿ.6ರಂದು ಶಾಂತಿ ಭಂಗವಾಗುವಂಥ ಯಾವುದೇ ಕಾರ್ಯಕ್ರಮ ಆಯೋಜನೆ ಬೇಡ. ಅಂದು ಜನರು ತಮ್ಮ ಮನೆಯೊಳಗೇ ರಾಮನ ಭಜನೆ ಮಾಡಿ ಆರತಿ ಬೆಳಗಿ ಸಾಮಾಜಿಕ ಶಾಂತಿಯ ಸಂದೇಶ ಸಾರಬೇಕು’ ಎಂದು ಅವರು ಕರೆ ನೀಡಿದ್ದಾರೆ.
ವಿಎಚ್ಪಿ ವಕ್ತಾರ ಶರದ್ ಶರ್ಮಾ ಕೂಡ ಇದೇ ಮಾತು ಹೇಳಿದ್ದು, ‘ಅಂದು ಶೌರ್ಯ ದಿನಾಚರಣೆ ನಡೆಸುವುದಿಲ್ಲ’ ಎಂದು ತಿಳಿಸಿದ್ದಾರೆ.
ಡಿ.6 ಅನ್ನು ಪ್ರತಿ ವರ್ಷ ಮುಸ್ಲಿಂ ಸಂಘಟನೆಗಳು ಆ ದಿನ ‘ದುಃಖದ ದಿನ’ವನ್ನಾಗಿ ಆಚರಿಸುತ್ತವೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ