
ನವದೆಹಲಿ: ಭಾರತ ಮತ್ತು ಉರುಗ್ವೆ ನಡುವಿನ ದ್ವಿಪಕ್ಷೀಯ ಸಂಬಂಧವನ್ನು ಮತ್ತಷ್ಟು ಗಟ್ಟಿಗೊಳಿಸುವ ನಿಟ್ಟಿನಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ನೇತೃತ್ವದ 10 ಮಂದಿ ಸಂಸದರ ನಿಯೋಗ 4 ದಿನಗಳ ಕಾಲ ಉರುಗ್ವೆ ಭೇಟಿ ಕೈಗೊಂಡಿತ್ತು. ಜೂ.14ರಿಂದ 17ರವರೆಗೆ ಈ ನಿಯೋಗ ಹಲವು ಒಪ್ಪಂದಗಳು ಹಾಗೂ ದ್ವಿಪಕ್ಷೀಯ ಕಾರ್ಯಕ್ರಮಗಳ ಕುರಿತಾಗಿ ಈ ನಿಯೋಗ ಚರ್ಚೆ ನಡೆಸಿದೆ.
ಈ ನಿಯೋಗದಲ್ಲಿ ವಿವಿಧ ಪಕ್ಷಗಳ ಉಭಯ ಸದನಗಳ ಸಂಸದರು ಸೇರಿದ್ದಾರೆ. ಜೂ.14ರಂದು ಉರುಗ್ವೆಗೆ ಭೇಟಿ ನೀಡಿದ ನಿಯೋಗವನ್ನು ಅಲ್ಲಿನ ರಾಯಭಾರಿ ದಿನೇಶ್ ಭಾಟಿಯಾ (Dinesh Bhatia), ಉರುಗ್ವೆ ಬಗ್ಗೆ ಹಾಗೂ ಉಭಯ ದೇಶಗಳ ನಡುವಿನ ದ್ವಿಪಕ್ಷೀಯ ಸಂಬಂಧದ ಕುರಿತಾಗಿ ವಿವರಿಸಿದರು. ಉರುಗ್ವೆಯ ಸಂದದರ ಜೊತೆಗೆ ಹಲವು ಸುತ್ತಿನ ಮಾತುಕತೆಯನ್ನು ನಡೆಸಲಾಯಿತು. ಇದೇ ವೇಳೆ ಪ್ರಹ್ಲಾದ್ ಜೋಶಿ ಅವರು ಉರುಗ್ವೆಯ ಸಂಸತ್ತಿನಲ್ಲಿ ಭಾರತ-ಉರುಗ್ವೆ ಸಂಸದೀಯ ಗೆಳೆತನ ಗುಂಪಿಗೆ ಚಾಲನೆ ನೀಡಿದರು. ಇದಕ್ಕೂ ಮೊದಲು ಜೋಶಿ ನೇತೃತ್ವದ ಈ ನಿಯೋಗ ಬ್ರೆಜಿಲ್ಗೆ ಭೇಟಿ ನೀಡಿತ್ತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ