ಬಿಜೆಪಿ ಸೇರಿದ ರಾಜಕುಮಾರನಿಗೆ ಒಂದೇ ದಿನಕ್ಕೆ ಇದೆಂಥಾ ಕಂಟಕ!

Published : Mar 13, 2020, 11:35 PM ISTUpdated : Mar 13, 2020, 11:53 PM IST
ಬಿಜೆಪಿ ಸೇರಿದ ರಾಜಕುಮಾರನಿಗೆ ಒಂದೇ ದಿನಕ್ಕೆ ಇದೆಂಥಾ ಕಂಟಕ!

ಸಾರಾಂಶ

ಬಿಜೆಪಿ ಸೇರಿದ್ದ ಯುವ ನಾಯಕ ಜೋತಿರಾಧಿತ್ಯ ಸಿಂಧ್ಯಾ/ ಸೇರಿ ಒಂದೇ ದಿನಕ್ಕೆ ಸಿಂಧ್ಯಾ ಮೇಲೆ ಅಕ್ರಮ ಆಸ್ತಿ ಸಂಪಾದನೆ, ಪೋರ್ಜರಿ ದೂರು/ ತನಿಖೆಗೆ ಮುಂದಾದ ಆರ್ಥಿಕ ಅಪರಾಧಗಳ ವಿಭಾಗ

ಭೋಪಾಲ್(ಮಾ. 13)  ಕಾಂಗ್ರೆಸ್ ತೊರೆದು ಜೋತಿರಾಧಿತ್ಯ ಸಿಂಧ್ಯಾ ಬಿಜೆಪಿ ಸೇರಿದ್ದಾರೆ. ರಾಜಕುಮಾರನ ಇದೊಂದು ನಡೆ ಇಡೀ ಮಧ್ಯಪ್ರದೇಶ ರಾಜಕಾರಣವನ್ನೇ ಅಲ್ಲೋಲ ಕಲ್ಲೋಲ ಮಾಡಿಬಿಟ್ಟಿದೆ. ಆದರೆ ಬಿಜೆಪಿ ಸೇರಿದ ಒಂದೇ ದಿನದಲ್ಲಿ ಮತ್ತೊಂದು ದೊಡ್ಡ ಬೆಳವಣಿಗೆಯೂ ನಡೆದು ಹೋಗಿದೆ.

ಮಧ್ಯಪ್ರದೇಶದ ಆರ್ಥಿಕ ಅಪರಾಧಗಳ ವಿಭಾಗ ಸಿಂಧ್ಯಾ ವಿರುದ್ಧ ಅಕ್ರಮ ಆಸ್ತಿ ಸಂಪಾದನೆ ಮತ್ತು ಪೋರ್ಜರಿ ದೂರಿನ ತನಿಖೆಗೆ ಮುಂದಾಗಿದೆ.  ಕೇಂದ್ರದ ಮಾಜಿ ಸಚಿವರ ವಿರುದ್ಧ ಅಕ್ರಮ ಆಸ್ತಿ ಸಂಪಾದನೆ ದೂರು ದಾಖಲಾಗಿದ್ದು ಇಲಾಖೆ ಅತಿ ಶೀಘ್ರವಾಗಿ ಕೈಗೆತ್ತಿಕೊಂಡಿದೆ.

ಸಿಂಧ್ಯಾ 400 ಕೋಣೆ ಭವ್ಯ ಅರಮನೆ ನೋಡ್ಕಂಡು ಬನ್ನಿ

ಸಿಂಧ್ಯಾ ಬಿಜೆಪಿ ಸೇರಿದ ನಂತರ ಮಧ್ಯಪ್ರದೇಶದಲ್ಲಿನ ಕಾಂಗ್ರೆಸ್ ಸರ್ಕಾರದ ಬುಡ ಅಲುಗಾಡುತ್ತಿರುವ ವಿಚಾರ ಇಡೀ ದೇಶಕ್ಕೆ ಗೊತ್ತಿದೆ. ಸಿಂಧ್ಯಾ ಜತೆಗೆ ಇಬ್ಬರು ಎಂಎಲ್ ಎ ಗಳು ಸಹ ಕಾಂಗ್ರೆಸ್ ಕಾಂಗ್ರೆಸ್ ಗೆ  ರಾಜೀನಾಮೆ ಸಲ್ಲಿಕೆ ಮಾಡಿದ್ದಾರೆ.

ಸಿಂಧ್ಯಾ ಮತ್ತು ಅವರ ಕುಟುಂಬದ ಮೇಲೆ ಗುರುವಾರ ದೂರೊಂದು ದಾಖಲಾಗಿದೆ. ಈ ಬಗ್ಗೆ ಮಾಹಿತಿ ಕಲೆಹಾಕಿ ವಿಚಾರಣೆ ನಡೆಸುತ್ತೇವೆ ಎಂದು ಮಧ್ಯಪ್ರದೇಶ ಆರ್ಥಿಕ ಅಪರಾಧಗಳ ವಿಭಾಗದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

2104ರಲ್ಲಿ ಸಲ್ಲಿಕೆಯಾಗಿದ್ದ ಇಂಥದ್ದೇ ಒಂದು ದೂರಿನ ವಿಚಾರಣೆ ನಡೆದು ಆ ಪ್ರಕರಣ 218ರಲ್ಲಿ ಮುಕ್ತಾಯ ಕಂಡಿತ್ತು. ಒಬ್ಬ ಯುವನಾಯಕ ಒಂದು ಪಕ್ಷದಿಂದ ಇನ್ನೊಂದು ಪಕ್ಷಕ್ಕೆ ನೆಗೆದರೆ ಈ ಎಂತೆಂಥಾ ಬದಲಾವಣೆ ಸಾಧ್ಯವಾಗಲಿದೆ ಎಂಬುದನ್ನು ಊಹಿಸಲು ಅಸಾಧ್ಯ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಮುಸ್ಲಿಂ ಲೀಗ್‌, ಜಿನ್ನಾಗೆ ಮಣಿದ ನೆಹರು, ವಂದೇ ಮಾತರಂ ಅನ್ನು ಹರಿದು ಹಾಕಿದ್ದು ಕಾಂಗ್ರೆಸ್‌: ಮೋದಿ ವಾಗ್ದಾಳಿ
ಮದುವೆಯಾದ್ರೆ ಸಿಗುತ್ತೆ 2.5 ಲಕ್ಷ ರೂಪಾಯಿ; ಶೇ.99 ಜನರಿಗೆ ಈ ವಿಷಯವೇ ಗೊತ್ತಿಲ್ಲ