ಎಟಿಎಂ ಮುಂದೆ ಪುಲ್ ರಶ್ : ಕಾರಣ ಖಾತೆಗೆ ಕೋಟಿ ಹಣ ಬಂದಿರುವ ಎಂಬ ಸುದ್ದಿ

Kannadaprabha News   | Asianet News
Published : Sep 17, 2021, 09:53 AM ISTUpdated : Sep 17, 2021, 10:10 AM IST
ಎಟಿಎಂ ಮುಂದೆ ಪುಲ್ ರಶ್ : ಕಾರಣ ಖಾತೆಗೆ ಕೋಟಿ ಹಣ ಬಂದಿರುವ ಎಂಬ ಸುದ್ದಿ

ಸಾರಾಂಶ

ಬಿಹಾರದ ಗ್ರಾಮವೊಂದರ ಇಬ್ಬರು ಶಾಲಾ ಬಾಲಕರ ಬ್ಯಾಂಕ್‌ ಖಾತೆಯಲ್ಲಿ 900 ಕೋಟಿ ರು ತಮ್ಮ ಖಾತೆಗೇನಾದರೂ ಈ ರೀತಿಯ ಹಣ ಜಮೆ ಆಗಿದೆಯೇ ಎಂದು ಪರಿಶೀಲಿಸಲು ಎಟಿಎಂಗಳಿಗೆ ಮುಗಿಬಿದ್ದ ಗ್ರಾಮಸ್ಥರು

ಪಟನಾ (ಸೆ.17): ಬಿಹಾರದ ಗ್ರಾಮವೊಂದರ ಇಬ್ಬರು ಶಾಲಾ ಬಾಲಕರ ಬ್ಯಾಂಕ್‌ ಖಾತೆಯಲ್ಲಿ 900 ಕೋಟಿ ರು.ಗೂ ಹೆಚ್ಚಿನ ಹಣ ಜಮೆ ಆಗಿರುವ ಅಚ್ಚರಿಯ ಘಟನೆ ನಡೆದಿದೆ. ಅದರ ಬೆನ್ನಲ್ಲೇ ಗ್ರಾಮಸ್ಥರೆಲ್ಲಾ ತಮ್ಮ ಖಾತೆಗೇನಾದರೂ ಈ ರೀತಿಯ ಹಣ ಜಮೆ ಆಗಿದೆಯೇ ಎಂದು ಪರಿಶೀಲಿಸಲು ಎಟಿಎಂಗಳಿಗೆ ಮುಗಿಬಿದ್ದ ಘಟನೆ ನಡೆದಿದೆ.

ಬಿಹಾರ ಸರ್ಕಾರ ಮಕ್ಕಳಿಗೆ ಶಾಲಾ ಸಮವಸ್ತ್ರ ಮತ್ತು ಬ್ಯಾಗ್‌ ಖರೀದಿಗೆ ಅಗತ್ಯವಾದ ಹಣವನ್ನು ಅವರ ಬ್ಯಾಂಕ್‌ ಖಾತೆಗೆ ಜಮೆ ಮಾಡುತ್ತದೆ. ಹೀಗಾಗಿ ಹಣ ಬಂದಿದೆಯೇ ಎಂದು ಪರಿಶೀಲಿಸಲು ಇಬ್ಬರು ಬಾಲಕರು ಸಮೀಪದ ಕಂಪ್ಯೂಟರ್‌ ಸೆಂಟರ್‌ಗೆ ಹೋಗಿದ್ದರು. ಪರಿಶೀಲನೆ ವೇಳೆ 6ನೇ ತರಗತಿ ವಿದ್ಯಾಥಿ ಆಶಿಶ್‌ ಎಂಬಾತನ ಖಾತೆಗೆ 6.2 ಕೋಟಿ ರು. ಮತ್ತು ಗುರುಚರಣ್‌ ವಿಶ್ವಾಸ್‌ ಎಂಬಾತನ ಖಾತೆಗೆ 900 ಕೋಟಿ ರು.ನಷ್ಟುಭಾರೀ ಹಣ ಜಮೆ ಆಗಿರುವುದು ಕಂಡುಬಂದಿದೆ. ಇದನ್ನು ನೋಡಿ ಕಂಪ್ಯೂಟರ್‌ ಅಂಗಡಿಯ ಮಾಲೀಕ ಮತ್ತು ಬಾಲಕರು ದಂಗಾಗಿ ಹೋಗಿದ್ದಾರೆ.

ಇದು ಮೋದಿ ನೀಡಿದ ಹಣ ಎಂದು ತಪ್ಪಾಗಿ ಜಮೆ ಆದ 5.5 ಲಕ್ಷ ರೂ ಹಿಂದಿರುಗಿಸಲು ನಿರಾಕರಿಸಿದ ವ್ಯಕ್ತಿ ಅರೆಸ್ಟ್!

ಈ ನಡುವೆ ಘಟನೆ ಕುರಿತು ಪ್ರತಿಕ್ರಿಯಿಸಿರುವ ಬ್ಯಾಂಕ್‌ ಅಧಿಕಾರಿಗಳು, ‘ಇಬ್ಬರು ಬಾಲಕರ ಖಾತೆಗೆ ದೊಡ್ಡ ಮೊತ್ತದ ಹಣ ಜಮಾ ಆಗಿರುವುದರ ಬಗ್ಗೆ ಮಾಹಿತಿ ಸಿಕ್ಕಿದೆ. ಹಾಗಾಗಿ ಆ ಬ್ಯಾಂಕ್‌ ಶಾಖೆಯನ್ನು ಬೇಗ ತೆರೆಯಲಾಗಿದ್ದು ತಪಾಸಣೆ ನಡೆಸುತ್ತಿದ್ದೇವೆ. ಕಂಪ್ಯೂಟರ್‌ನಲ್ಲಿ ದೋಷ ಕಂಡುಬಂದಿರುವುದರಿಂದ ಖಾತೆಗೆ ಹಣ ಬಂದಿರುವಂತೆ ಸ್ಟೇಟ್‌ಮೆಂಟ್‌ನಲ್ಲಿ ತೋರಿಸುತ್ತಿದೆ. ಆದರೆ ಅವರ ಖಾತೆಗೆ ಯಾವುದೇ ಹಣ ಬಂದಿಲ್ಲ ಎಂದು ಶಾಖೆಯ ಮ್ಯಾನೆಜರ್‌ ಹೇಳಿದ್ದಾಗಿ ಕತಿಯಾರ್‌ ಜಿಲ್ಲಾ ಮ್ಯಾಜಿಸ್ಪ್ರೇಟ್‌ ಉದ್ಯಾನ್‌ ಮಿಶ್ರಾ ಹೇಳಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಕಟಿಹಾರ್ ಜಂಕ್ಷನ್‌ನಲ್ಲಿ ಮಹಿಳೆಯ ಭಯಾನಕ ಅನುಭವ: 30-40 ಪುರುಷರು ನುಗ್ಗಲು ಯತ್ನ, ಶೌಚಾಲಯದಲ್ಲಿ ಸಿಲುಕಿದ ಮಹಿಳೆ!
ದೇಶದ ಅಗ್ರ ಟಿ20 ಟೂರ್ನಿಯಲ್ಲೇ ಮ್ಯಾಚ್‌ ಫಿಕ್ಸಿಂಗ್‌, ನಾಲ್ವರು ಕ್ರಿಕೆಟಿಗರ ಸಸ್ಪೆಂಡ್‌ ಮಾಡಿ ತನಿಖೆಗೆ ಆದೇಶಿಸಿದ ಬಿಸಿಸಿಐ!