ಹಿಂದು ಧರ್ಮಕ್ಕೆ ಸೇರಿದ 9 ಸದಸ್ಯರ ಮುಸ್ಲಿಂ ಕುಟುಂಬ!

Published : Dec 30, 2023, 06:50 PM IST
ಹಿಂದು ಧರ್ಮಕ್ಕೆ ಸೇರಿದ 9 ಸದಸ್ಯರ ಮುಸ್ಲಿಂ ಕುಟುಂಬ!

ಸಾರಾಂಶ

ಭದೋಹಿ ಜಿಲ್ಲೆಯ ಮುಸ್ಲಿಂ ಕುಟುಂಬದ ಒಂಬತ್ತು ಸದಸ್ಯರು ವಿಂಧ್ಯಾಚಲದಲ್ಲಿ ಪೂಜೆ ಸಲ್ಲಿಸಿದ ನಂತರ ಹಿಂದೂ ಧರ್ಮಕ್ಕೆ ಮತಾಂತರಗೊಂಡರು. ಮುಸ್ಲಿಂ ಧರ್ಮದಿಂದ ಹಿಂದೂ ಧರ್ಮಕ್ಕೆ ಮತಾಂತರಗೊಂಡ ಕುಟುಂಬದ ಮುಖ್ಯಸ್ಥರು, ಅಯೋಧ್ಯೆ ರಾಮ ಮಂದಿರಕ್ಕೆ ದರ್ಶನಕ್ಕೆ ಹೋಗುವುದಾಗಿ ಹೇಳಿದ್ದಾರೆ.  

ನವದೆಹಲಿ (ಡಿ.30): ಉತ್ತರ ಪ್ರದೇಶದ ಭದೋಹಿಯಲ್ಲಿ ಮುಸ್ಲಿಂ ಕುಟುಂಬವೊಂದು ವಿಂಧ್ಯಾಚಲದಲ್ಲಿ ಪೂಜೆ ಸಲ್ಲಿಸಿ ಹಿಂದೂ ಧರ್ಮಕ್ಕೆ ಮತಾಂತರಗೊಂಡಿತು. ಮುಸಲ್ಮಾನರಿಂದ ಹಿಂದೂವಾಗಿ ಮತಾಂತರಗೊಂಡ ಕುಟುಂಬದ ಮುಖ್ಯಸ್ಥರು ರಾಮಮಂದಿರ ದರ್ಶನಕ್ಕೆ ಅಯೋಧ್ಯೆಗೆ ಹೋಗುವುದಾಗಿ ಹೇಳಿದ್ದಾರೆ. ಹಿಂದೂ ಧರ್ಮಕ್ಕೆ ಮತಾಂತರಗೊಂಡ ಕುಟುಂಬಕ್ಕೆ ಬಿಜೆಪಿ ಮುಖಂಡರು ಹೂಮಾಲೆ ಹಾಕಿ, ಕೇಸರಿ ಬಟ್ಟೆ ತೊಡಿಸಿ ಸನ್ಮಾನಿಸಿದ್ದಾರೆ. ಇಡೀ ವಿಷಯವು ಚೌರಿ ಪೊಲೀಸ್ ಠಾಣೆ ವ್ಯಾಪ್ತಿಯ ದನು ಪಟ್ಟಿಯದ್ದು. ಇಲ್ಲಿ, ಚೇಡಿ ಮತ್ತು ಅವನ ಕುಟುಂಬ, ಮುಸ್ಲಿಂ ಧರ್ಮದ ಕೆಳ ಸಮುದಾಯದಿಂದ ಬಂದವರು, ಬ್ಯಾಂಡ್ ನುಡಿಸುವುದರ ಜೊತೆಗೆ ಇತರ ಸಣ್ಣಪುಟ್ಟ ಕೆಲಸಗಳನ್ನು ಮಾಡುತ್ತಾರೆ. ಏತನ್ಮಧ್ಯೆ, ಚೇಡಿ  ಶುಕ್ರವಾರ ತನ್ನ ಕುಟುಂಬದ ಎಲ್ಲಾ ಒಂಬತ್ತು ಸದಸ್ಯರೊಂದಿಗೆ ಮಿರ್ಜಾಪುರದ ವಿಂಧ್ಯಾಚಲ ಧಾಮ್‌ಗೆ ತೆರಳಿದರು. ಅಲ್ಲಿ ಅವರು ಪ್ರಾರ್ಥನೆ ಸಲ್ಲಿಸಿದ ಬಳಿಕ ಹಿಂದೂ ಧರ್ಮವನ್ನು ಸ್ವೀಕರಿಸಿದರು.

ಮೊದಲು ತಾನು ಮುಸ್ಲಿಮನಾಗಿದ್ದೆ ಮತ್ತು ಕೆಲವೊಮ್ಮೆ ನಮಾಜ್ ಕೂಡ ಮಾಡುತ್ತಿದೆ. ಆದರೆ ಈಗ ಹಿಂದೂ ಧರ್ಮವನ್ನು ಅಳವಡಿಸಿಕೊಂಡಿದ್ದೇನೆ ಎಂದು ಚೇಡಿ ಹೇಳಿದದಾರೆ. ಇದಕ್ಕಾಗಿ ಅವರು ವಿಂಧ್ಯಾಚಲ ಧಾಮಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದ್ದಾರೆ. ಸ್ವತಂತ್ರ ಭಾರತದಲ್ಲಿ ಎಲ್ಲಿ ಬೇಕಾದರೂ ಹೋಗುವ ಹಕ್ಕಿದೆ ಎಂದು ಇದೇ ವೇಳೆ ಹೇಳಿದ್ದಾರೆ. ಅಯೋಧ್ಯೆಗೆ ಹೋಗುವ ಕುರಿತಾದ ಪ್ರಶ್ನೆಗೆ, 'ಹೌದು ಹೋಗುತ್ತೇನೆ, ರಾಮಲಲ್ಲಾನನ್ನು ನೋಡಲು ಹೋಗುತ್ತೇನೆ' ಎಂದು ತಿಳಿಸಿದ್ದಾರೆ.

Video: ಜೈ ಶ್ರೀರಾಮ್‌ ಘೋಷಣೆಯೊಂದಿಗೆ ದೆಹಲಿಯಿಂದ ಅಯೋಧ್ಯೆಗೆ ಹೊರಟ ಮೊದಲ ವಿಮಾನ

ಚೇಡಿಯ ಮಕ್ಕಳು ತಮ್ಮ ತಂದೆ ಎಲ್ಲಿದ್ದರೂ ತಾವೂ ಆ ಧರ್ಮದಲ್ಲಿಯೇ ಇರುವುದಾಗಿ ತಿಳಿಸಿದ್ದಾರೆ. ಚೇಡಿ ಅವರ ಕುಟುಂಬ ಹಿಂದೂ ಧರ್ಮಕ್ಕೆ ಮತಾಂತರಗೊಂಡಿರುವ ಬಗ್ಗೆ ಸಾಕಷ್ಟು ಚರ್ಚೆ ನಡೆಯುತ್ತಿದೆ. ಈ ಮಾಹಿತಿ ತಿಳಿದ ಮುಖಂಡರು ಚೇಡಿಯವರ ಮನೆಗೆ ಆಗಮಿಸಿ ಇಡೀ ಕುಟುಂಬಕ್ಕೆ ಮಾಲಾರ್ಪಣೆ ಮಾಡಿ ಕೇಸರಿ ವಸ್ತ್ರ ತೊಡಿಸಿ ಗೌರವಿಸಿದರು.

ಆಯೋಧ್ಯೆಯಲ್ಲಿ ಮೋದಿಗೆ ಹೂಮಳೆ ಸ್ವಾಗತ ನೀಡಿದ ಬಾಬ್ರಿ ಮಸೀದಿ ಅರ್ಜಿದಾರ ಇಕ್ಬಾಲ್ ಅನ್ಸಾರಿ!

ಮತ್ತೊಂದೆಡೆ, ವಿಂಧ್ಯಾಚಲದಲ್ಲಿ ಪೂಜೆ ಪುನಸ್ಕಾರದ ಫೋಟೋವೊಂದು ಹೊರಬಿದ್ದಿದ್ದು, ಮಿರ್ಜಾಪುರದ ಬಿಜೆಪಿ ಶಾಸಕ ರತ್ನಾಕರ್ ಮಿಶ್ರಾ ಈ ಕುಟುಂಬಕ್ಕೆ ಪೂಜೆ ಸಲ್ಲಿಸುತ್ತಿದ್ದಾರೆ. ಚೇಡಿಗೆ ಐದು ಗಂಡು ಮಕ್ಕಳಿದ್ದಾರೆ, ಅವರ ಹೆಸರುಗಳು ಅನ್ವರ್, ಸನ್ವರ್, ಗುಡ್ಡು, ಬಬ್ಲು ಮತ್ತು ಗಬ್ಬರ್. ಅವರಿಗೆ ಐದು ಮೊಮ್ಮಕ್ಕಳು ಕೂಡ ಇದ್ದಾರೆ, ಅವರ ಹೆಸರುಗಳು ಶಂಶಾದ್, ಕಾಶ್‌,  ಆರಿಫ್ ಮತ್ತು ಸಲೀಂ. ಎಲ್ಲರ ಹೆಸರನ್ನೂ ಬದಲಾಯಿಸುವುದಾಗಿ ಚೇಡಿ ಹೇಳಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

Dhurandhar Review: ಹಿಂದೂಗಳಿಗೆ ಪ್ರಥಮ ಶತ್ರು ಹಿಂದೂ-ಮೊಬೈಲ್‌ ಕೂಡ ನೋಡದಂತೆ ಮಾಡೋ ರಣ್‌ವೀರ್‌ ಸಿಂಗ್‌ ಸಿನಿಮಾ!
ಟೀ ಶರ್ಟ್ ಬಿಟ್ಟು ಖಾದಿ ಧರಿಸಿ ಬಂದು ರಾಜಕೀಯ ಸಂದೇಶ ರವಾನಿಸಿದ ರಾಹುಲ್ ಗಾಂಧಿ