ಹಣ ಕೊಡಲಾಗದ್ದಕ್ಕೆ 80ರ ವೃದ್ಧನ ಕಟ್ಟಿಹಾಕಿದ ಆಸ್ಪತ್ರೆ, ಕಠಿಣ ಕ್ರಮಕ್ಕೆ ಸಿಎಂ ಸೂಚನೆ

Published : Jun 07, 2020, 09:40 PM ISTUpdated : Jun 07, 2020, 09:44 PM IST
ಹಣ ಕೊಡಲಾಗದ್ದಕ್ಕೆ 80ರ ವೃದ್ಧನ ಕಟ್ಟಿಹಾಕಿದ ಆಸ್ಪತ್ರೆ, ಕಠಿಣ ಕ್ರಮಕ್ಕೆ ಸಿಎಂ ಸೂಚನೆ

ಸಾರಾಂಶ

ಹೊಟ್ಟೆ ನೋವಿಗೆ ಚಿಕಿತ್ಸೆ ಪಡೆದುಕೊಂಡಿದ್ದ ವೃದ್ಧ/ ಹಣ ನೀಡಲು ಸಾಧ್ಯವಾಗದ್ದಕ್ಕೆ ಮಂಚಕ್ಕೆ ಕಟ್ಟಿಹಾಕಿದ ಆಸ್ಪತ್ರೆ ಸಿಬ್ಬಂದಿ/ ಗಾಯ ಮಾಡಿಕೊಳ್ಳುತ್ತಾರೆ ಎಂದು ಹೀಗೆ ಮಾಕಡಿದ್ದೇವೆ ಎಂಬ ಸಬೂಬು

ಭೋಪಾಲ್ (ಜೂ. 07) ಚಿಕಿತ್ಸೆ ಪಡೆದುಕೊಂಡ  80 ವರ್ಷದ ವೃದ್ಧ ಹಣ  ನೀಡಲು ಸಾಧ್ಯವಾಗದ್ದಕ್ಕೆ ಆತನನ್ನು ಖಾಸಗಿ ಆಸ್ಪತ್ರೆಯ ಸಿಬ್ಬಂದಿ ಬೆಡ್ ಮೇಲೆ ಕಟ್ಟಿ ಹಾಕಿ ಹಿಂಸೆ ನೀಡಿದ್ದಾರೆ. ಮಧ್ಯಪ್ರದೇಶದ  ಶಾಜಾಪುರ್‌ನಲ್ಲಿ ಘಟನೆ ನಡೆದಿದೆ.

ವೃದ್ಧನಿಗೆ ಸ್ನಾಯು ಸೆಳೆತ ಉಂಟಾಗಿದ್ದು, ಚಿಕಿತ್ಸೆ ನೀಡಲಾಗಿದೆ. ಗಾಯಮಾಡಿಕೊಳ್ಳಬಾರದು ಎನ್ನುವ ಉದ್ದೇಶದಿಂದ ಕಟ್ಟಿ ಹಾಕಿದ್ದೇವೆ ಎಂದು ಖಾಸಗಿ ಆಸ್ಪತ್ರೆ ಆಡಳಿತ ಮಂಡಳಿ ಪ್ರಕರಣ ಮುಚ್ಚಿಹಾಕಲು ಸಬೂಬು ನೀಡಿದೆ.

ಶ್ವಾನವನ್ನು ಬೈಕ್ ಗೆ ಕಟ್ಟಿ ಎಳೆದ ದುರುಳರು 

ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರ ಗಮನಕ್ಕೂ  ಘಟನೆ ಬಂದಿದ್ದು, ಆಸ್ಪತ್ರೆಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುವ ಎಚ್ಚರಿಕೆ ನೀಡಿದ್ದಾರೆ. ಜೊತೆಗೆ ಈ ಕುರಿತು ತನಿಖೆ ನಡೆಸಲು ಸೂಚನೆ ನೀಡಿದ್ದಾರೆ.

ಆಸ್ಪತ್ರೆಗೆ ದಾಖಲಾಗುವಾಗ 5,000 ರೂ. ಪಾವತಿಸಿದ್ದೇವು. ಆದರೆ ಚಿಕಿತ್ಸೆ ಫಲಕಾರಿಯಾಗಲು ಬಹಳ ದಿನ ಬೇಕಾಯಿತು. ಹೀಗಾಗಿ ನಾವು ಇನ್ನೂ 11 ಸಾವಿರ ರೂ. ಪಾವತಿಸಬೇಕಾದ ಪರಿಸ್ಥಿತಿ ಎದುರಾಗಿತ್ತು. ನಮ್ಮಿಂದ ಹಣ ಸಿಗುವುದಿಲ್ಲ  ಎಂದಿದ್ದಕ್ಕೆ ಇಂಥ ಕೆಲಸ ಮಾಡಿದ್ದಾರೆ ಎಂದು ವೃದ್ಧನ ಕುಟುಂಬದವರು ಆರೋಪಿಸಿದ್ದಾರೆ.

ವೃದ್ಧ ಹೊಟ್ಟೆ ನೋವಿನ ಕಾರಣಕ್ಕೆ ಆಸ್ಪತ್ರೆಗೆ ದಾಖಲಾಗಿದ್ದ. ಕೊರೋನಾದಂತಹ ಮಹಾಮಾರಿ ಸಂದರ್ಭದಲ್ಲಿ ಖಾಸಗಿ ಆಸ್ಪತ್ರೆಗಳು ಮಾನವೀಯತೆಗೆ ಹೆಚ್ಚಿನ ಬೆಲೆ ನೀಡಬೇಕು ಎಂದು ಕೇಂದ್ರ ಸರ್ಕಾರ ಕೇಳಿಕೊಂಡಿದ್ದರೂ ಇಂಥ ಘಟನೆಗಳು ಅಲ್ಲಿಲ್ಲಿ ವರದಿಯಾಗುತ್ತಿವೆ.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಹೆಣ್ಣು ಮಕ್ಕಳಿಗೆ ತವರು ಸುರಕ್ಷಿತ ಮಾಡಿ : ನಿತೀಶ್‌ಗೆ ಲಾಲು ಪುತ್ರಿ!
ಪ್ರಾಡಾದಿಂದ ಕೊಲ್ಹಾಪುರಿ ಚಪ್ಪಲಿ ಸೇಲ್‌, ಬೆಲೆ ₹83000!