ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ನಿವಾಸದ ಮುಂದೆ ಹಿಂಸಾಚಾರ, 8 ಮಂದಿಯ ಬಂಧನ

Published : Apr 01, 2022, 06:55 PM IST
ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ನಿವಾಸದ ಮುಂದೆ ಹಿಂಸಾಚಾರ, 8 ಮಂದಿಯ ಬಂಧನ

ಸಾರಾಂಶ

ಬಿಜೆಪಿ ಯುವ ಮೋರ್ಚಾ (ಬಿಜೆವೈಪಿ) ರಾಷ್ಟ್ರೀಯ ಅಧ್ಯಕ್ಷ ಮತ್ತು ಸಂಸದ ತೇಜಸ್ವಿ ಸೂರ್ಯ ನೇತೃತ್ವದಲ್ಲಿ 200 ಪ್ರತಿಭಟನಾಕಾರರು, ಕಾಶ್ಮೀರ ಫೈಲ್‌ಗಳನ್ನು ತೆರಿಗೆ ಮುಕ್ತಗೊಳಿಸುವ ಕುರಿತು ಅವರ ಹೇಳಿಕೆಯನ್ನು ವಿರೋಧಿಸಲು ದೆಹಲಿ ಸಿಎಂ ಅವರ ಮನೆಯ ಹೊರಗೆ ಜಮಾಯಿಸಿದ್ದಲ್ಲದೆ, ದೊಡ್ಡ ಮಟ್ಟದ ಪ್ರತಿಭಟನೆಯನ್ನೂ ನಡೆಸಿದ್ದರು.

ನವದೆಹಲಿ (ಏ. 1): ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ (Delhi CM Arvind Kejriwal) ಅವರ ನಿವಾಸದ ಹೊರಗೆ ಬಿಜೆಪಿ ಯುವ ಮೋರ್ಚಾ (ಬಿಜೆವೈಪಿ) ನಡೆಸಿದ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದ ಒಂದು ದಿನದ ನಂತರ, ದೆಹಲಿ ಪೊಲೀಸ್ (Delhi Police) ಗುರುವಾರ 8 ಮಂದಿಯನ್ನು ಬಂಧಿಸಿದ್ದಾರೆ ಎಂದು ವರದಿಯಾಗಿದೆ. ಇಂಜಿನಿಯರಿಂಗ್‌ನಲ್ಲಿ ಡಿಪ್ಲೊಮಾ ಕೋರ್ಸ್ ಓದುತ್ತಿರುವ ವಿದ್ಯಾರ್ಥಿ, ಕಾನೂನು ಪದವೀಧರ, ಇ ಉದ್ಯೋಗಿ ಬಂಧಿತರಲ್ಲಿ ಸೇರಿದ್ದಾರೆ ಎಂದು ಹೇಳಲಾಗಿದೆ. ಬಂಧಿತರಲ್ಲಿ ಉಳಿದ ಐವರನ್ನು ವಾಣಿಜ್ಯೋದ್ಯಮಿಗಳು ಹಾಗೂ ವಿದ್ಯಾರ್ಥಿಗಳು ಎಂದು ಹೇಳಲಾಗಿದೆ.

ಬಿಜೆಪಿ ಯುವ ಮೋರ್ಚಾ (ಬಿಜೆವೈಎಂ) ರಾಷ್ಟ್ರೀಯ ಅಧ್ಯಕ್ಷ ಮತ್ತು ಲೋಕಸಭೆಯ ಸಂಸದ ತೇಜಸ್ವಿ ಸೂರ್ಯ(Lok Sabha MP Tejaswi Surya)ನೇತೃತ್ವದ ಸುಮಾರು 200 ಪ್ರತಿಭಟನಾಕಾರರು ಬುಧವಾರ ದೆಹಲಿ ಸಿಎಂ (Delhi CM) ಮನೆಯ ಹೊರಗೆ ಜಮಾಯಿಸಿದ್ದರು, ಕಾಶ್ಮೀರ ಫೈಲ್ಸ್ (The Kashmir Files) ಕುರಿತು ಕೇಜ್ರಿವಾಲ್ ದೆಹಲಿ ವಿಧಾನಸಭೆಯಲ್ಲಿ ನೀಡಿದ ಹೇಳಿಕೆಯನ್ನು ವಿರೋಧಿಸಿ ಪ್ರತಿಭಟನೆ ನಡೆಸಿತ್ತು. 90 ದಶಕದಲ್ಲಿ ಪಂಡಿತರ ಮೇಲಿನ ನಡೆದ ಹತ್ಯಾಕಾಂಡದ ಬಳಿಕ ಕಣಿವೆ ರಾಜ್ಯದಿಂದ ಪಂಡಿತರು ಹೇಗೆ ವಲಸೆ ಬಂದರು ಎನ್ನುವುದನ್ನು ತೋರಿಸಿದ ಸಿನಿಮಾವನ್ನು ದೆಹಲಿಯಲ್ಲಿ ತೆರಿಗೆ ಮುಕ್ತ ಮಾಡಬೇಕು ಎಂದು ಬಿಜೆಪಿ (BJP) ಒತ್ತಾಯಿಸಿತ್ತು. ಈ ಕುರಿತಾಗಿ ಅರವಿಂದ್ ಕೇಜ್ರಿವಾಲ್ ನೀಡಿದ ಹೇಳಿಕೆ ವಿವಾದಕ್ಕೆ ಕಾರಣವಾಗಿತ್ತು.

ಮಾರ್ಚ್ 24 ರಂದು ದೆಹಲಿ ಸಿಎಂ ವಿಧಾನಸಭೆಯಲ್ಲಿ ಮಾತನಾಡುತ್ತಾ “ಬಿಜೆಪಿ ಪಕ್ಷವು ದೆಹಲಿಯಲ್ಲಿ ಚಲನಚಿತ್ರವನ್ನು ತೆರಿಗೆ ಮುಕ್ತಗೊಳಿಸಬೇಕೆಂದು ಒತ್ತಾಯಿಸುತ್ತಿದೆ. ಅದನ್ನು ಯೂಟ್ಯೂಬ್‌ನಲ್ಲಿ ಅಪ್‌ಲೋಡ್ ಮಾಡಿ, ಚಲನಚಿತ್ರವನ್ನು ಪ್ರತಿಯೊಬ್ಬರೂ ಉಚಿತವಾಗಿ ವೀಕ್ಷಿಸಲು ಸಾಧ್ಯವಾಗುತ್ತದೆ. ಕೆಲವರು ಕಾಶ್ಮೀರಿ ಪಂಡಿತರ ಹೆಸರಿನಲ್ಲಿ ಕೋಟಿಗಟ್ಟಲೆ ಸಂಪಾದನೆ ಮಾಡುತ್ತಿದ್ದೀರಿ ಮತ್ತು ನೀವು (ಬಿಜೆಪಿ) ಚಿತ್ರದ ಪೋಸ್ಟರ್‌ಗಳನ್ನು ಅಂಟಿಸುವ ಕೆಲಸ ಮಾಡಿದ್ದೀರಿ' ಎಂದು ಅಪಹಾಸ್ಯದ ನಗುವಿನೊಂದಿಗೆ ಮಾತನಾಡಿದ್ದರು.

ಇದನ್ನು ವಿರೋಧಿಸಿ ಬಿವೈಜೆಎಂ ಪ್ರತಿಭಟನಾಕಾರರು ಬುಧವಾರ ಕೇಜ್ರಿವಾಲ್ ಅವರ ನಿವಾಸದ ಹೊರಗಿನ ಬೂಮ್ ತಡೆಗೋಡೆಯನ್ನು ಮುರಿದಿದ್ದರೆ,  ಬಡಿದು ಹಾಕಿದ್ದಲ್ಲದೆ,  ಮುಖ್ಯ ಗೇಟ್‌ಗಳಿಗೆ ಕೆಂಪು ಬಣ್ಣ ಬಳಿದು ಆಕ್ರೋಶ ಹೊರಹಹಾಕಿದ್ದರು. ಮನೆಯ ಹೊರಗಿನ ಸಿಸಿಟಿವಿ ಕ್ಯಾಮೆರಾವನ್ನು ನಾಶಪಡಿಸಿದ್ದರು. ಬುಧವಾರದ ಪ್ರತಿಭಟನೆಗೆ ಅನುಮತಿಯ ಅರ್ಜಿಯನ್ನು ಈ ಹಿಂದೆ ಬಿಜೆಪಿ ಅಧಿಕಾರಿ ಹುಕುಂ ಸಿಂಗ್ ಸಲ್ಲಿಸಿದ್ದರು, ಆದರೆ ದೆಹಲಿ ಉತ್ತರ ಜಿಲ್ಲೆಯ ಪೊಲೀಸರು ಇದನ್ನು ತಿರಸ್ಕರಿಸಿದರು.

ಕಾಶ್ಮೀರದಲ್ಲಿ ಹಿಂದುಗಳ ಹತ್ಯೆ ಕುರಿತು ಅಪಹಾಸ್ಯ, ಕೇಜ್ರಿವಾಲ್ ಮನೆಯ ಮುಂದೆ ತೇಜಸ್ವಿ ಸೂರ್ಯ ನೇತೃತ್ವದಲ್ಲಿ ಪ್ರತಿಭಟನೆ!

ಘಟನೆಯ ನಂತರ, ಬುಧವಾರ "ಅಪರಿಚಿತ ವ್ಯಕ್ತಿಗಳ" ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಪೊಲೀಸರು ಹೇಳಿದ್ದರು. ಸೆಕ್ಷನ್ 186 (ಸಾರ್ವಜನಿಕ ಕಾರ್ಯಗಳನ್ನು ನಿರ್ವಹಿಸುವಲ್ಲಿ ಸಾರ್ವಜನಿಕ ಸೇವಕರಿಗೆ ಅಡ್ಡಿಪಡಿಸುವುದು), 188 (ಸಾರ್ವಜನಿಕ ಸೇವಕರು ಸರಿಯಾಗಿ ಘೋಷಿಸಿದ ಆದೇಶಕ್ಕೆ ಅಸಹಕಾರ), 353 (ದಾಳಿ ಅಥವಾ ಕ್ರಿಮಿನಲ್) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದಿದ್ದರು. “ನಾವು ಇದುವರೆಗೆ ಎಂಟು ಜನರನ್ನು ಬಂಧಿಸಿದ್ದೇವೆ. ಎಲ್ಲರನ್ನೂ ನ್ಯಾಯಾಲಯ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.

ಅತಿ ದೊಡ್ಡ ಪಕ್ಷದಿಂದ ಗೂಂಡಾಗಿರಿ: ಬಿಜೆಪಿ ವಿರುದ್ಧ ಕೇಜ್ರಿ ಆಕ್ರೋಶ

ನಾವು ದೃಶ್ಯಗಳಿಂದ ಕೆಲವರನ್ನು ಗುರುತಿಸಿದ್ದೇವೆ. ಸುಮಾರು 20 ಜನರನ್ನು ಗುರುತಿಸಲಾಗಿದ್ದು, ತಂಡಗಳನ್ನು ದಾಳಿಗೆ ಕಳುಹಿಸಲಾಗಿದೆ ಎಂದು ಡಿಸಿಪಿ (ಉತ್ತರ) ಸಾಗರ್ ಸಿಂಗ್ ಕಲ್ಸಿ ಗುರುವಾರ ತಿಳಿಸಿದ್ದಾರೆ. ನಲವತ್ತು ವರ್ಷದ ಜಿತೇಂದರ್ ಬಿಶ್ತ್, 38 ವರ್ಷದ ನವೀನ್ ಕುಮಾರ್, 35 ವರ್ಷದ ಬಬ್ಲು ಕುಮಾರ್, 28 ವರ್ಷದ ರಾಜು ಸಿಂಗ್, 27 ವರ್ಷದ ಚಂದ್ರಕಾಂತ್ ಮತ್ತು ಪ್ರದೀಪ್ ತಿವಾರಿ, 28 ವರ್ಷದ ನೀರಜ್ ದೀಕ್ಷಿತ್ ಮತ್ತು 21ರ ಹರೆಯದ ಸನ್ನಿ ಕುಶ್ವಾಹ ಅವರನ್ನು ಸಿಎಂ ಕೇಜ್ರಿವಾಲ್ ಅವರ ಮನೆಯ ಹೊರಗೆ ನಡೆದ ಧ್ವಂಸ ಪ್ರಕರಣದಲ್ಲಿ ಬಂದಿಸಲಾಗಿದೆ.
ಎಲ್ಲಾ ಎಂಟು ಮಂದಿ ದೆಹಲಿ ನಿವಾಸಿಗಳು ಮತ್ತು ಬಿಜೆವೈಎಂ ಸದಸ್ಯರು ಎಂದು ದೆಹಲಿ ಪೊಲೀಸ್ ಮೂಲಗಳು ತಿಳಿಸಿವೆ. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ವಂದೇ ಮಾತರಂ ಚರ್ಚೆ ವೇಳೆ ಶಾ ವರ್ಸಸ್‌ ಖರ್ಗೆ
25 ಜನರು ಸಾವನ್ನಪ್ಪಿದ ಪಬ್‌ ಮಾಲೀಕರ ರೆಸಾರ್ಟ್‌ ಧ್ವಂಸ