
ನವದೆಹಲಿ, (ಸೆ. 04): ಕಳೆದ ನಾಲ್ಕೈದು ತಿಂಗಳು ಬಳಿಕ ಓಪನ್ ಆದ ಡಾಬಾಕ್ಕೆ ಕೊರೋನಾ ವಕ್ಕರಿಸಿದ್ದು, ಸಿಕ್ಕ-ಸಿಕ್ಕವರಿಗೆ ಸೋಂಕು ತಗುಲಿದೆ.
ಹರಿಯಾಣ ದೆಹಲಿ ಹೆದ್ದಾರಿಯಲ್ಲಿರುವ ಫೇಮಸ್ ಸುಖದೇವ್ ಡಾಬಾದ ಬರೋಬ್ಬರಿ 65 ಸಿಬ್ಬಂದಿಗೆ ಕೊರೋನಾ ಅಟ್ಯಾಕ್ ಆಗಿದೆ.
ಹೌದು.. ಮೊನ್ನೇ ಅಷ್ಟೇ ಕೇಂದ್ರ ಸರ್ಕಾರ ಬಿಡುಗಡೆ ಮಾಡಿರುವ ಅನ್ಲಾಕ್4.0 ಮಾರ್ಗಸೂಚಿಯಲ್ಲಿ ತಿಳಿಸಿರುವ ಈ ಡಾಬಾವನ್ನು ತೆರೆಯಲಾಗಿತ್ತು. ಆದ್ರೆ, ಸಿಬ್ಬಂದಿಗೆ ಸೋಂಕು ತಗುಲಿದ್ದು, ಇದೀಗ ಈ ಡಾಬಾವನ್ನು ಸೀಲ್ಡೌನ್ ಮಾಡಲಾಗಿದೆ.
ಕೊರೋನಾಗೆ ಪರಮೌಷಧ, ಗಂಭೀರ ರೋಗಿಗಳಿಗೂ ಬಳಸಲು ಸೂಚನೆ!
ಸೋನಿಪತ್ ಡೆಪ್ಯೂಟಿ ಕಮಿಷನರ್ ಶ್ಯಾಮ್ ಲಾಅಲ್ ಪೂನಿಯಾ ಪ್ರತಿಕ್ರಿಯಿಸಿದ್ದು, ಅಮ್ರಿಕ್ ಸುಖದೇವ್ ಡಾಬಾದಲ್ಲಿ 65 ಮಂದಿಯಲ್ಲಿ ಕೊರೋನಾ ಸೋಂಕು ಪತ್ತೆಯಾಗಿದೆ. ಮತ್ತೊಂದು ದೆಹಲಿಯಿಂದ 50 ಕಿ.ಮೀ ದೂರದಲ್ಲಿರುವ ಮೂರ್ಥಾಲ್ನಲ್ಲಿರುವ ಡಾಬಾವನ್ನು ಕೂಡ ಬಂದ್ ಮಾಡಲಾಗಿದೆ ಎಂದು ಸ್ಪಷ್ಟಪಡಿಸಿದರು.
ಆ ಎರಡು ಡಾಬಾವನ್ನು ಸ್ಯಾನಿಟೈಸ್ ಮಾಡುವಂತೆ ಜಿಲ್ಲಾಡಳಿತ ಸೂಚನೆ ನೀಡಿದೆ. ಸೋನಪತ್ ಜಿಲ್ಲಾಡಳಿತವು ಎಲ್ಲಾ ಡಾಬಾಗಳಿಗೆ ತೆರಳಿ ಕೊರೊನಾ ಪರೀಕ್ಷೆ ಮಾಡುತ್ತಿದೆ. ಉಳಿದ ಡಾಬಾಗಳಲ್ಲಿ ಜನರು ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು, ಪ್ರತಿಯೊಬ್ಬರು ಮಾಸ್ಕ್ ಧರಿಸಬೇಕು ಎಂದು ತಿಳಿಸಿದರು.
ದೆಹಲಿ, ಹರಿಯಾಣ ಮತ್ತು ಪಂಜಾಬ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಪ್ರಯಾಣಿಸುವ ಪ್ರಯಾಣಿಕರಿಗೆ ಈ ಮೂರ್ಥಾಲ್ ಡಾಬಾ ಫೆವರೆಟ್ ಆಗಿದೆ.
ಎಲ್ಲವೂ ಓಪನ್ ಆಗಿವೆ. ಬಾಯಿ ರುಚಿ ಕೆಟ್ಟಿದೆ ಅಂತ ಯಾವುದೇ ಮುಂಜಾಗ್ರತೆ ಇಲ್ಲದೆ ಸಿಕ್ಕ-ಸಿಕ್ಕ ಹೋಟೆಲ್, ಡಾಬಾ ಸೇರಿದಂತೆ ಇತರೆ ಕಡೆ ಸುತ್ತಾಡುವವರಿಗೆ ಇದು ಎಚ್ಚರಿಕೆ ಗಂಟೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ