
ನರ್ಸಿಪಟ್ಣಂ: ಹಬ್ಬಕ್ಕೆ ಮನೆಗೆ ಬರುವ ಅಳಿಯನಿಗೆ ಅದ್ಧೂರಿ ಸ್ವಾಗತ-ಸತ್ಕಾರ ಸಾಮಾನ್ಯ. ಆದರೆ ಆಂಧ್ರಪ್ರದೇಶದಲ್ಲಿ ಹೊಸದಾಗಿ ಮದುವೆಯಾದ ಮಗಳು-ಅಳಿಯ ಮೊದಲ ಸಂಕ್ರಾಂತಿ ಆಚರಣೆಗೆಂದು ಮನೆಗೆ ಬಂದ ವೇಳೆ ಅವರಿಗೆ 290 ವಿವಿಧ ರೀತಿಯ ಖಾದ್ಯ ಸಿದ್ದಪಡಿಸಿದ ಉಣಬಡಿಸಲಾಗಿದೆ.
ಶಾಂತಿನಗರ ನಿವಾಸಿಗಳಾದ ರಮೇಶ್ ಕುಮಾರ್ ಮತ್ತು ಅವರ ಪತ್ನಿ ಕಲಾವತಿ, ತಮ್ಮ ಅಳಿಯ ಶ್ರೀಹರ್ಷ (29) ಅವರಿಗಾಗಿ ಗೋದಾವರಿ ಶೈಲಿಯಲ್ಲಿ 290 ಬಗೆಯ ತಿಂಡಿ-ತಿನಿಸು ತಯಾರಿಸಿದ್ದಾರೆ. ಇದನ್ನು ಕಂಡ ಅಳಿಯ ದಂಗಾಗಿದ್ದಾರೆ.
ಅತ್ತ ಗುಂಟೂರಿನ ತೆನಾಲಿಯಲ್ಲಿ ಶ್ರೀದತ್ತ ಎಂಬುವವರಿಗೆ ಅತ್ತೆ ಮನೆಯಲ್ಲಿ 158 ವಿಧದ ಭಕ್ಷ್ಯಗಳ ಭೋಜನ ಬಡಿಸಲಾಗಿತ್ತು. ಇದು ಆಂಧ್ರದ ಸಂಪ್ರದಾಯವಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ