ಬರೀ 24 ಜನ ಸೇರಿದ ಸಭೇಲಿ 12 ಕೆಜಿ ಡ್ರೈ ಫ್ರೂಟ್ಸ್‌, 9 ಕೆ.ಜಿ. ಹಣ್ಣು, 30 ಕೆಜಿ ಸ್ನ್ಯಾಕ್ಸ್‌ ಗುಳುಂ !

Published : Jul 13, 2025, 05:37 AM IST
DRYFRUITS

ಸಾರಾಂಶ

ಭಾರತೀಯರಿಗೆ ಬಾಯಿರುಚಿ ಹೆಚ್ಚು, ಹೌದು. ಆದರೆ ಈ ಮಟ್ಟಿಗೆ! ಮಧ್ಯಪ್ರದೇಶದ ಭದ್ವಾಹಿ ಹಳ್ಳಿಯಲ್ಲಿ ಜಲ ಸಂರಕ್ಷಣೆ ಕುರಿತಾದ ಪಂಚಾಯತ್‌ ಸಭೆಯೊಂದರಲ್ಲಿ ತರಿಸಲಾದ 12 ಕೆ.ಜಿ. ಒಣಹಣ್ಣು, 9 ಕೆ.ಜಿ. ಹಣ್ಣು, ಮತ್ತು 30 ಕೆ.ಜಿ. ಕುರುಕುಲು ತಿಂಡಿಯಷ್ಟನ್ನೂ ಬರೀ 24 ಜನ ಸೇರಿ ತಿಂದು ತೇಗಿದ ಘಟನೆ ನಡೆದಿದೆ.

ಭೋಪಾಲ್‌: ಭಾರತೀಯರಿಗೆ ಬಾಯಿರುಚಿ ಹೆಚ್ಚು, ಹೌದು. ಆದರೆ ಈ ಮಟ್ಟಿಗೆ! ಮಧ್ಯಪ್ರದೇಶದ ಭದ್ವಾಹಿ ಹಳ್ಳಿಯಲ್ಲಿ ಜಲ ಸಂರಕ್ಷಣೆ ಕುರಿತಾದ ಪಂಚಾಯತ್‌ ಸಭೆಯೊಂದರಲ್ಲಿ ತರಿಸಲಾದ 12 ಕೆ.ಜಿ. ಒಣಹಣ್ಣು, 9 ಕೆ.ಜಿ. ಹಣ್ಣು, ಮತ್ತು 30 ಕೆ.ಜಿ. ಕುರುಕುಲು ತಿಂಡಿಯಷ್ಟನ್ನೂ ಬರೀ 24 ಜನ ಸೇರಿ ತಿಂದು ತೇಗಿದ ಘಟನೆ ನಡೆದಿದೆ.

ಇದಕ್ಕಾಗಿ 85,000 ರು. ಖರ್ಚಾಗಿದೆ. ಜಿಲ್ಲಾಧಿಕಾರಿ, ಹಿರಿಯ ಅಧಿಕಾರಿಗಳು, ಪಂಚಾಯತ್ ಪ್ರತಿನಿಧಿಗಳು ಮತ್ತು ಕೆಲ ಗ್ರಾಮಸ್ಥರು ಸೇರಿ ಒಟ್ಟು 24 ಜನ ಸಭೆಯಲ್ಲಿ ಹಾಜರಿದ್ದರು. ಈ ವೇಳೆ ತರಿಸಲಾದ ತಿನಿಸುಗಳ ಬಿಲ್‌ ವೈರಲ್‌ ಆಗುತ್ತಿದೆ. ಅದರ ಪ್ರಕಾರ, 6 ಕೆಜಿ ಗೋಡಂಬಿ, 3 ಕೆಜಿ ಒಣದ್ರಾಕ್ಷಿ, 3 ಕೆಜಿ ಬಾದಾಮಿ, 9 ಕೆಜಿ ಹಣ್ಣುಗಳು, 5 ಡಜನ್ ಬಾಳೆಹಣ್ಣುಗಳು ಮತ್ತು 30 ಕೆಜಿ ತಿಂಡಿಗಳನ್ನು ಖರೀದಿಸಲಾಗಿತ್ತು.

ಈ ಬಗ್ಗೆ ಮಾತನಾಡಿದ ಶಹದೋಲ್ ಜಿಲ್ಲಾಧಿಕಾರಿ, ‘ನಾನು ಒಣಹಣ್ಣುಗಳನ್ನು ತಿನ್ನುವುದಿಲ್ಲ. ಸಭೆಯಲ್ಲೂ ತಿಂದಿರಲಿಲ್ಲ. ಬಿಲ್‌ ನೋಡಿ ದಂಗಾಗಿ, ತನಿಖೆಗೆ ಆದೇಶಿಸಿದ್ದೇನೆ. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು’ ಎಂದಿದ್ದಾರೆ.

ಬೇಸಿಗೆಯಲ್ಲಿ ಖರ್ಜೂರ ತಿನ್ನುವುದರಿಂದ ಸಿಗುವ ಹೆಚ್ಚುವರಿ ಲಾಭಗಳು

ತಕ್ಷಣದ ಶಕ್ತಿ: ಬೇಸಿಗೆಯಲ್ಲಿ ದೇಹದ ಉಷ್ಣತೆ ಹೆಚ್ಚುವುದರಿಂದ ಆಯಾಸ ಸಹಜ. ಖರ್ಜೂರದಲ್ಲಿರುವ ನೈಸರ್ಗಿಕ ಸಕ್ಕರೆ ದೇಹಕ್ಕೆ ತಕ್ಷಣದ ಶಕ್ತಿ ನೀಡಿ ಚುರುಕಾಗಿರಲು ಸಹಾಯ ಮಾಡುತ್ತದೆ. ಇತರ ಸಿಹಿ ತಿಂಡಿಗಳಂತೆ, ಇದು ರಕ್ತದಲ್ಲಿನ ಸಕ್ಕರೆಯನ್ನು ಏಕಾಏಕಿ ಹೆಚ್ಚಿಸುವುದಿಲ್ಲ.

 ನೀರಿನ ಕೊರತೆ ತಡೆಯಲು ಸಹಾಯ: ಬೇಸಿಗೆಯಲ್ಲಿ ಬೆವರಿನ ಮೂಲಕ ದೇಹದಿಂದ ಹೆಚ್ಚಿನ ಪ್ರಮಾಣದಲ್ಲಿ ನೀರು ಹೊರಹೋಗುತ್ತದೆ. ಖರ್ಜೂರದಲ್ಲಿರುವ ಪೊಟ್ಯಾಶಿಯಂನಂತಹ ಎಲೆಕ್ಟ್ರೋಲೈಟ್‌ಗಳು ದೇಹದಲ್ಲಿ ನೀರಿನಂಶವನ್ನು ಸಮತೋಲನದಲ್ಲಿಡಲು ಸಹಾಯ ಮಾಡುತ್ತವೆ. ಪ್ರತಿದಿನ ಬೆಳಿಗ್ಗೆ ಖರ್ಜೂರ ತಿನ್ನುವುದು ನೀರಿನ ಕೊರತೆ ತಡೆಯಲು ಉತ್ತಮ ಮಾರ್ಗ.

ಜೀರ್ಣಕ್ರಿಯೆ ಸುಧಾರಿಸುತ್ತದೆ: ಖರ್ಜೂರದಲ್ಲಿ ಹೆಚ್ಚಿನ ಪ್ರಮಾಣದ ನಾರಿನಂಶವಿದೆ. ಇದು ಬೇಸಿಗೆಯಲ್ಲಿ ಉಂಟಾಗುವ ಮಲಬದ್ಧತೆಯಂತಹ ಜೀರ್ಣಕ್ರಿಯೆಯ ಸಮಸ್ಯೆಗಳನ್ನು ತಡೆಯಲು ಸಹಾಯ ಮಾಡುತ್ತದೆ. ಬೆಳಿಗ್ಗೆ ಖರ್ಜೂರ ತಿನ್ನುವುದು ಕರುಳಿನ ಚಲನೆಯನ್ನು ಸುಗಮಗೊಳಿಸಿ ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ.

ದೇಹದ ಉಷ್ಣತೆ ತಗ್ಗಿಸುತ್ತದೆ: ಸಾಂಪ್ರದಾಯಿಕ ಔಷಧದಲ್ಲಿ, ಖರ್ಜೂರವನ್ನು ದೇಹಕ್ಕೆ ತಂಪು ನೀಡುವ ಆಹಾರವೆಂದು ಪರಿಗಣಿಸಲಾಗುತ್ತದೆ. ಬೇಸಿಗೆಯಲ್ಲಿ ಉಂಟಾಗುವ ದೇಹದ ಉಷ್ಣತೆಯನ್ನು ತಗ್ಗಿಸಲು ಇದು ಸಹಾಯ ಮಾಡುತ್ತದೆ.

ರೋಗನಿರೋಧಕ ಶಕ್ತಿ: ಖರ್ಜೂರದಲ್ಲಿರುವ ಉತ್ಕರ್ಷಣ ನಿರೋಧಕಗಳು ದೇಹವನ್ನು ಹಾನಿಕಾರಕ ಫ್ರೀ ರಾಡಿಕಲ್‌ಗಳಿಂದ ರಕ್ಷಿಸುತ್ತವೆ. ಇದು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿ ಬೇಸಿಗೆಯಲ್ಲಿ ಉಂಟಾಗುವ ಸೋಂಕುಗಳಿಂದ ನಮ್ಮನ್ನು ಕಾಪಾಡಲು ಸಹಾಯ ಮಾಡುತ್ತದೆ.

ಎಲುಬುಗಳನ್ನು ಬಲಪಡಿಸುತ್ತದೆ: ಖರ್ಜೂರದಲ್ಲಿ ಕ್ಯಾಲ್ಸಿಯಂ, ಮೆಗ್ನೀಷಿಯಂನಂತಹ ಖನಿಜಗಳಿವೆ. ಇವು ಎಲುಬುಗಳ ಆರೋಗ್ಯಕ್ಕೆ ಬಹಳ ಮುಖ್ಯ. ಬೇಸಿಗೆಯಲ್ಲಿ ಮಾತ್ರವಲ್ಲ, ಯಾವಾಗಲೂ ಖರ್ಜೂರ ತಿನ್ನುವುದು ಎಲುಬುಗಳನ್ನು ಗಟ್ಟಿಮುಟ್ಟಾಗಿಡಲು ಸಹಾಯ ಮಾಡುತ್ತದೆ.

ರಕ್ತಹೀನತೆ ತಡೆಯುತ್ತದೆ: ಖರ್ಜೂರದಲ್ಲಿ ಕಬ್ಬಿಣದ ಅಂಶ ಹೆಚ್ಚಿದೆ. ಬೇಸಿಗೆಯಲ್ಲಿ ದೇಹ ದುರ್ಬಲವಾಗಿರುವಾಗ, ಖರ್ಜೂರ ತಿನ್ನುವುದು ರಕ್ತ ಕಣಗಳ ಉತ್ಪಾದನೆಯನ್ನು ಹೆಚ್ಚಿಸಿ ರಕ್ತಹೀನತೆ ಬರದಂತೆ ತಡೆಯಲು ಸಹಾಯ ಮಾಡುತ್ತದೆ.

ಹೃದಯದ ಆರೋಗ್ಯ: ಖರ್ಜೂರದಲ್ಲಿ ಪೊಟ್ಯಾಶಿಯಂ ಹೆಚ್ಚಿನ ಪ್ರಮಾಣದಲ್ಲಿದೆ. ಇದು ರಕ್ತದೊತ್ತಡವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಅಧಿಕ ರಕ್ತದೊತ್ತಡ ಹೃದ್ರೋಗಗಳಿಗೆ ಪ್ರಮುಖ ಕಾರಣಗಳಲ್ಲಿ ಒಂದು. ಪ್ರತಿದಿನ ಖರ್ಜೂರ ತಿನ್ನುವುದರಿಂದ ರಕ್ತದೊತ್ತಡವನ್ನು ನಿಯಂತ್ರಿಸಿ ಹೃದಯದ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ಜೊತೆಗೆ, ಇದರಲ್ಲಿರುವ ನಾರಿನಂಶ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ಮಧುಮೇಹಿಗಳು: ಖರ್ಜೂರ ನೈಸರ್ಗಿಕ ಸಕ್ಕರೆಗಳನ್ನು ಹೊಂದಿದ್ದರೂ, ಅದರ ಗ್ಲೈಸೆಮಿಕ್ ಸೂಚ್ಯಂಕ (GI) ಮಧ್ಯಮದಿಂದ ಹೆಚ್ಚಿನವರೆಗೆ ಇರಬಹುದು. ಆದ್ದರಿಂದ, ಮಧುಮೇಹ ಇರುವವರು ಖರ್ಜೂರವನ್ನು ಸೇವಿಸುವ ಮೊದಲು ವೈದ್ಯರ ಸಲಹೆ ಪಡೆದು ಕಡಿಮೆ ಪ್ರಮಾಣದಲ್ಲಿ ಸೇವಿಸುವುದು ಕೆಲವೊಮ್ಮೆ ಒಳ್ಳೆಯದು, ಆದರೆ ಪ್ರಮಾಣ ಮುಖ್ಯ.

ಮಕ್ಕಳ ಬೆಳವಣಿಗೆ: ಮಕ್ಕಳ ಬೆಳವಣಿಗೆಗೆ ಅಗತ್ಯವಾದ ಹಲವು ಪೋಷಕಾಂಶಗಳು ಖರ್ಜೂರದಲ್ಲಿವೆ. ಕ್ಯಾಲ್ಸಿಯಂ, ಕಬ್ಬಿಣದಂತಹ ಖನಿಜಗಳು ಎಲುಬುಗಳು ಮತ್ತು ರಕ್ತ ಕಣಗಳ ಬೆಳವಣಿಗೆಗೆ ಸಹಾಯ ಮಾಡುತ್ತವೆ. ಜೊತೆಗೆ, ಇದರ ಸಿಹಿ ರುಚಿಯಿಂದ ಮಕ್ಕಳು ಇಷ್ಟಪಟ್ಟು ತಿನ್ನುತ್ತಾರೆ. ಆದರೆ, ಮಕ್ಕಳಿಗೆ ನೀಡುವಾಗ ಸಣ್ಣ ತುಂಡುಗಳಾಗಿ ಕತ್ತರಿಸಿ ನೀಡಬೇಕು

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಟ್ರಂಪ್‌ಗೆ ಮುಯ್ಯಿಗೆ ಮುಯ್ಯಿ, ಪುಟಿನ್‌ ಜೊತೆ ಭಾಯಿ ಭಾಯಿ!
ಇನ್ನೂ 10 ದಿನಗಳ ಕಾಲ ಇಂಡಿಗೋಳು