ಕತ್ತಲಲ್ಲಿ ನಡೆದ ತಪ್ಪಿನಿಂದ 21ರ ಹರೆಯದ ಯುವಕನ ಪ್ರಾಣಪಕ್ಷಿ ಹಾರಿ ಹೋಯ್ತು !

Published : Jul 11, 2024, 12:48 PM IST
ಕತ್ತಲಲ್ಲಿ ನಡೆದ ತಪ್ಪಿನಿಂದ 21ರ ಹರೆಯದ ಯುವಕನ ಪ್ರಾಣಪಕ್ಷಿ ಹಾರಿ ಹೋಯ್ತು !

ಸಾರಾಂಶ

ಗೆಳೆಯನ ಮನೆಯ ಕಾರ್ಯಕ್ರಮಕ್ಕೆ ಬಂದಿದ್ದ 21 ವರ್ಷದ ಯುವಕ ಬೆಳಗಾಗುವಷ್ಟರಲ್ಲಿಯೇ ಸಾವನ್ನಪ್ಪಿದ್ದಾನೆ. ಇತ್ತ ವಿಷಯ ತಿಳಿಯತ್ತಲೇ ಯುವಕನ ತಾಯಿ ಪ್ರಜ್ಞೆ ಕಳೆದುಕೊಂಡಿದ್ದಾರೆ.

ಜೈಪುರ: ರಾತ್ರಿ ಕತ್ತಲಲ್ಲಿ ನಡೆದ ತಪ್ಪಿನಿಂದಾಗಿ 21 ವರ್ಷದ ಯುವಕ ಪ್ರಾಣ ಕಳೆದುಕೊಂಡಿದ್ದಾನೆ. ಕುಟುಂಬಸ್ಥರು ಎಷ್ಟೇ ಪ್ರಯತ್ನಿಸಿದರೂ ಯುವಕನನ್ನು ಉಳಿಸಿಕೊಳ್ಳಲು ಸಾಧ್ಯವಾಗಿಲ್ಲ. ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದ್ದು, ವಯಸ್ಸಿಗೆ ಬಂದ ಮಗನನ್ನು ಕಳೆದುಕೊಂಡು ಕುಟುಂಬ ದಿಕ್ಕು ತೋಚದ ಸ್ಥಿತಿಯಲ್ಲಿದೆ. ರಾಜಸ್ಥಾನದ ಜುಂಜುನ ಜಿಲ್ಲೆಯ ಜಾಕ್ಲಾ ಗ್ರಾಮದಲ್ಲಿ ಈ ದುರಂತ ನಡೆದಿದೆ. 21 ವರ್ಷದ ಮುಕೇಶ್ ಮೃತ ಯುವಕ. 

ಬಟ್ಟೆ ಒಣಗಲು ಹಾಕುತ್ತಿರುವ ಸಂದರ್ಭದಲ್ಲಿ ವಿದ್ಯುತ ಸ್ಪರ್ಶಿಸಿ ಮುಕೇಶ್ ಸಾವನ್ನಪ್ಪಿದ್ದಾನೆ. ಬಟ್ಟೆ ಹಾಕಲು ಕಬ್ಬಿಣದ ತಂತಿಯೊಂದನ್ನು ಹಾಕಲಾಗಿದೆ. ಇದರ ಪಕ್ಕದಲ್ಲಿಯೇ ವಿದ್ಯುತ್ ತಂತಿ ಹಾದು ಹೋಗಿದೆ. ರಾತ್ರಿ ಬಟ್ಟೆ ತೊಳೆದ ಮುಕೇಶ್ ಹಸಿಯಾದ ಶರ್ಟ್ ತಂತಿ ಮೇಲೆ ಹಾಕಿದ್ದಾನೆ. ಈ ವೇಳೆ ವಿದ್ಯುತ್ ತಂತಿ ತಾಗಿದ್ದರಿಂದ ಮುಕೇಶ್ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾನೆ. ಸುಮಾರು ಒಂದು ಗಂಟೆ ಕಾಲ ಮುಕೇಶ್ ತಂತಿಗೆ ತಾಗಿಕೊಂಡು ನೇತಾಡುತ್ತಿತ್ತು. ಮುಕೇಶ್ ಗೆಳೆಯ ಹಲವು ಬಾರಿ ವಿದ್ಯುತ್ ಪ್ರಸರಣ ಕೇಂದ್ರಕ್ಕೆ ಫೋನ್ ಮಾಡಿದ್ರೂ ಅಧಿಕಾರಿಗಳು ಸ್ಪಂದಿಸಿಲ್ಲ. ಕೊನೆಗೆ ಕೋಲಿನ ಸಹಾಯದಿಂದ ಶವವನ್ನು ತಳ್ಳಲಾಗಿದೆ ಎಂದು ವರದಿಯಾಗಿದೆ. 

ಗೆಳೆಯನ ಮನೆಯಲ್ಲಿಯೇ ಉಳಿದುಕೊಂಡಿದ್ದ ಮುಕೇಶ್!

ಮಾಲ್ಸರ ಗ್ರಾಮದ ನಿವಾಸಿಯಾಗಿರುವ ಮುಕೇಶ್ ಗೆಳೆಯನ ಮನೆಯಲ್ಲಿ ನಡೆಯುತ್ತಿರುವ ಕಾರ್ಯಕ್ರಮದಲ್ಲಿ ಭಾಗಿಯಾಗಲು ಜಾಕ್ಲಾ ಗ್ರಾಮಕ್ಕೆ ತೆರಳಿದ್ದನು. ಹಿಂದಿರುಗುವ ವೇಳೆಗೆ ತಡರಾತ್ರಿಯಾಗಿದ್ದರಿಂದ ಗೆಳೆಯನ ಮನೆಯಲ್ಲಿಯೇ ಮುಕೇಶ್ ಉಳಿದುಕೊಂಡಿದ್ದನು. ರಾತ್ರಿ ಸುಮಾರು 3 ಗಂಟೆಗೆ ಮುಕೇಶ್ ಬಟ್ಟೆ ತೊಳೆದಿದ್ದಾನೆ. ಬಟ್ಟೆ ಒಣಗಲು ಹಾಕುವ ಸಂದರ್ಭದಲ್ಲಿ ವಿದ್ಯುತ್ ಶಾಕ್‌ನಿಂದ ಮುಕೇಶ್ ಸಾವನ್ನಪ್ಪಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

8 ಹುಡುಗಿಯರ ಜೊತೆ 3 ಹುಡುಗರ ಸರಸ ಸಲ್ಲಾಪ; ಬಾಗಿಲು ತರೆದವರಿಗೆ ಕಂಡಿದ್ದು ಬೆತ್ತಲೆ ಲೋಕ!

ಕತ್ತಲಿನಲ್ಲಿ ಕಾಣಲಿಲ್ಲ ವಿದ್ಯುತ್ ತಂತಿ!

ಶಾಕ್ ಬಳಿಕ ಮುಕೇಶ್ ವಿದ್ಯುತ್ ತಂತಿಗೆ ತಗುಲಿಕೊಂಡು ಒಂದು ಗಂಟೆಗೂ ಅಧಿಕ ಕಾಲ ನೇತಾಡಿದೆ. ನಂತರ ಮುಕೇಶ್‌ ನನ್ನು ತಂತಿಯಿಂದ ಬೇರ್ಪಡಿಸಿ ಸಮೀಪದ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಪರೀಕ್ಷೆ ನಡೆಸಿದ ವೈದ್ಯರು ಮುಕೇಶ್ ಸಾವನ್ನಪ್ಪಿರೋದನ್ನು ದೃಢೀಕರಿಸಿದರು. ಬಟ್ಟೆ ಹಾಕಲು ಹಾಕಿರುವ ತಂತಿಯ ಪಕ್ಕದಲ್ಲಿಯೇ ಎಲೆಕ್ಟ್ರಿಕ್ ವೈರ್ ಹಾದು ಹೋಗಿದೆ. ಅದು ಕತ್ತಲಿನಲ್ಲಿ ಕಾಣಿಸಲ್ಲ. ಹಾಗಾಗಿ ಮುಕೇಶ್‌ಗೆ ವಿದ್ಯುತ್ ತಂತಿ ಕಾಣಿಸದ ಕಾರಣ ತೊಳೆದಿರುವ ಬಟ್ಟೆ  ಹಾಕಿದ್ದಾನೆ. ಇದರಿಂದ ಆತನ ಸಾವು ಆಗಿದೆ ಎಂದು ಮುಕೇಶ್ ಗೆಳೆಯ ಹೇಳಿದ್ದಾರೆ. 

ವಿದ್ಯುತ್ ಶಾಕ್ ತಗುಲಿದ ಬಳಿಕ ಮುಕೇಶ್ ಕುಟುಂಬಸ್ಥರಿಗೆ ವಿಷಯ ತಿಳಿಸಲಾಗಿತ್ತು. ಮಗನ ಶವ ನೀಡುತ್ತಿದ್ದಂತೆ ಮುಕೇಶ್ ತಾಯಿ ಪ್ರಜ್ಞೆ ಕಳೆದುಕೊಂಡರು. ನಂತರ ಅವರನ್ನು ಆಸ್ಪತ್ರೆಗೆ ಸಾಗಿಸಲಾಯ್ತು. ಮರಣೋತ್ತರ ಪರೀಕ್ಷೆ ಬಳಿಕ ಶವವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಲಾಗಿದೆ.

ಫಸ್ಟ್ ನೈಟ್‌ಗೂ ಮೊದಲೇ  ಆಸ್ಪತ್ರೆಗೆ  ದಾಖಲಾದ ವಧು; ಗಂಡನ ನಡೆ ಕಂಡು ಮೂಕವಿಸ್ಮಿತರಾದ ಕುಟುಂಬಸ್ಥರು

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಎರಡು ಮಕ್ಕಳ ತಾಯಿ ಸಹವಾಸ ಮಾಡಿ ಮಸಣ ಸೇರಿದ ಯುವಕ: ತಾಯಿಯ ಲೀವಿಂಗ್ ಪಾರ್ಟನರ್ ಕತೆ ಮುಗಿಸಿದ ಅಮ್ಮ ಮಕ್ಕಳು
Viral Video: ಮಾಜಿ ಸಿಜೆಐ ಬಿಆರ್‌ ಗವಾಯಿಗೆ ಶೂ ಎಸೆದಿದ್ದ ವಕೀಲ ರಾಕೇಶ್‌ ಕಿಶೋರ್‌ಗೆ ಕೋರ್ಟ್‌ನಲ್ಲೇ ಚಪ್ಪಲಿಯಿಂದ ಹಲ್ಲೆ!