ಪಟ್ನಾಯಕ್‌ ಕಾಮರಾಜ್‌ ಸೂತ್ರ: ಎಲ್ಲ 20 ಒಡಿಶಾ ಸಚಿವರ ರಾಜೀನಾಮೆ

By Suvarna NewsFirst Published Jun 5, 2022, 9:44 AM IST
Highlights

* ಇಂದು ಹೊಸ ಸಂಪುಟ ಪ್ರಮಾಣವಚನ

* ಪಟ್ನಾಯಕ್‌ ಕಾಮರಾಜ್‌ ಸೂತ್ರ: ಎಲ್ಲ 20 ಒಡಿಶಾ ಸಚಿವರ ರಾಜೀನಾಮೆ

ಭುವನೇಶ್ವರ(ಜೂ.05): ಮಹತ್ವದ ವಿದ್ಯಮಾನವೊಂದರಲ್ಲಿ ತಮ್ಮ ಮಂತ್ರಿಮಂಡಲದ ಎಲ್ಲ 20 ಸಚಿವರ ರಾಜೀನಾಮೆಯನ್ನು ಒಡಿಶಾ ಮುಖ್ಯಮಂತ್ರಿ ನವೀನ್‌ ಪಟ್ನಾಯಕ್‌ ಶನಿವಾರ ಪಡೆದಿದ್ದಾರೆ. ಈ ಮೂಲಕ ‘ಕಾಮರಾಜ್‌ ಮಾದರಿ’ ಸಂಪುಟ ಪುನಾರಚನೆಗೆ ಅವರು ಮುಂದಾಗಿದ್ದು, ಭಾನುವಾರ ನೂತನ ಸಚಿವರ ಪ್ರಮಾಣವಚನ ಸ್ವೀಕಾರ ಸಮಾರಂಭ ನಡೆಯಲಿದೆ.

ಎಲ್ಲ ಸಚಿವರ ರಾಜೀನಾಮೆ ಪಡೆದು ಹೊಸ ಸಂಪುಟ ರಚಿಸುವುದೇ ‘ಕಾಮರಾಜ್‌ ಸೂತ್ರ’. 60ರ ದಶಕದಲ್ಲಿ ತಮಿಳುನಾಡಿನ ಮುಖ್ಯಮಂತ್ರಿ ಆಗಿದ್ದ ಕೆ. ಕಾಮರಾಜ್‌ ಈ ಸೂತ್ರ ಜಾರಿಗೆ ತಂದಿದ್ದರು.

‘ಈಗ ಇದನ್ನೇ ಅನುಸರಿಸಲು ಪಟ್ನಾಯಕ್‌ ಮುಂದಾಗಿದ್ದಾರೆ. ಎಲ್ಲ ಸಚಿವರ ರಾಜೀನಾಮೆ ಪಡೆದು ನೂತನ ಮಂತ್ರಿಮಂಡಲ ರಚಿಸಲಿದ್ದಾರೆ. ಭಾನುವಾರ ಬೆಳಗ್ಗೆ 11.45ಕ್ಕೆ ನೂತನ ಸಚಿವರ ಪ್ರಮಾಣವಚನ ನಡೆಯಲಿದೆ’ ಎಂದು ಮೂಲಗಳು ಹೇಳಿವೆ.

2​024ರ ಚುನಾವಣೆಗೆ ಪಕ್ಷ ಬಲಪಡಿಸಲು ಈ ತಂತ್ರವನ್ನು ಪಟ್ನಾಯಕ್‌ ಅನುಸರಿಸಿದ್ದಾರೆ ಎಂದು ಅವು ಹೇಳಿವೆ.

click me!