ಲಖೀಂಪುರ ಗಲ​ಭೆ : ಸುಪ್ರೀಂ ಚಾಟಿ - ಇಬ್ಬರು ಅರೆಸ್ಟ್

Kannadaprabha News   | Asianet News
Published : Oct 08, 2021, 09:43 AM IST
ಲಖೀಂಪುರ ಗಲ​ಭೆ : ಸುಪ್ರೀಂ ಚಾಟಿ -  ಇಬ್ಬರು ಅರೆಸ್ಟ್

ಸಾರಾಂಶ

ಉತ್ತರ ಪ್ರದೇಶದ ಲಖೀಂಪುರ ಖೇರಿಯಲ್ಲಿ ನಾಲ್ವರು ರೈತರು ಸೇರಿದಂತೆ 8 ಮಂದಿ ಬಲಿ ಪಡೆದ ಘಟನೆ ಸಚಿವರ ಬೆಂಗಾವಲು ವಾಹನಗಳಲ್ಲಿ ಇದ್ದ ಇಬ್ಬ​ರು ಆರೋಪಿಗಳನ್ನು ಬಂಧಿಸಿದ ಉತ್ತರ ಪ್ರದೇಶ ಪೊಲೀಸರು 

ನವದೆಹಲಿ/ಲಖೀಂಪು​ರ (ಅ.08): ಉತ್ತರ ಪ್ರದೇಶದ (Uttara Pradesh) ಲಖೀಂಪುರ ಖೇರಿಯಲ್ಲಿ ನಾಲ್ವರು ರೈತರು (Farmers) ಸೇರಿದಂತೆ 8 ಮಂದಿ ಬಲಿ ಪಡೆದ ಘಟನೆಯನ್ನು ದುರದೃಷ್ಟಕರ ಎಂದಿರುವ ಸುಪ್ರೀಂ ಕೋರ್ಟ್‌ (Supreme Court), ‘ಎಷ್ಟುಜನ​ರನ್ನು ಈವ​ರೆಗೆ ಬಂಧಿ​ಸಿ​ದ್ದೀರಿ? ಏನು ಕ್ರಮ ಕೈಗೊಂಡಿ​ದ್ದೀ​ರಿ?’ ಎಂದು ಪ್ರಶ್ನಿ​ಸಿದೆ. ಈ ಘಟನೆ ಕುರಿತು ಶುಕ್ರವಾರದ ಒಳಗಾಗಿ ವರದಿ ಸಲ್ಲಿಸುವಂತೆ ಉತ್ತರ ಪ್ರದೇಶ ಸರ್ಕಾರಕ್ಕೆ ಸೂಚನೆ ನೀಡಿದೆ.

ಇದರ ಬೆನ್ನಲ್ಲೇ, ಈ ಹಿಂಸಾಚಾರ ಘಟನೆ ಪ್ರಕರಣದ ವೇಳೆ ರೈತರ ಮೇಲೆ ಹತ್ತಿಸಿದ ಸಚಿವರ ಬೆಂಗಾವಲು ವಾಹನಗಳಲ್ಲಿ ಇದ್ದರು ಎನ್ನಲಾದ ಇಬ್ಬ​ರು ಆರೋಪಿಗಳನ್ನು ಉತ್ತರ ಪ್ರದೇಶ ಪೊಲೀಸರು (Police) ಬಂಧಿಸಿದ್ದಾರೆ. ಬಂಧಿ​ತ​ರನ್ನು ಕೇಂದ್ರ ಸಚಿವ ಅಜಯ್‌ ಮಿಶ್ರಾ ಅವರ ಪುತ್ರ ಆಶಿ​ಷ್‌ ಮಿಶ್ರಾನ (Ashish MIshra) ಆಪ್ತ​ರಾದ ಲವ​ಕುಶ ಹಾಗೂ ಆಶಿಷ್‌ ಪಾಂಡೆ ಎಂದು ಗುರು​ತಿ​ಸ​ಲಾ​ಗಿ​ದೆ.

ನಿರಾ​ಯುಧ ರೈತರ ಮೇಲೆ ಹರಿದ ಕಾರು: ಮತ್ತೊಂದು ವಿಡಿಯೋ ವೈರ​ಲ್‌!

ಈ ನಡುವೆ, ಕೇಂದ್ರ ಸಚಿವ ಅಜಯ್‌ ಕುಮಾರ್‌ ಮಿಶ್ರಾ ಅವರ ಪುತ್ರ ಆಶಿಶ್‌ ಮಿಶ್ರಾಗೆ ಸಮನ್ಸ್‌ ನೀಡಲಾಗಿದ್ದು, ಶುಕ್ರ​ವಾರ ಬೆಳಗ್ಗೆ 10 ಗಂಟೆಗೆ ವಿಚಾ​ರ​ಣೆಗೆ ಬರಲು ಸೂಚಿ​ಸ​ಲಾ​ಗಿ​ದೆ. ಅಲ್ಲದೆ ಈ ಪ್ರಕರಣದ ತನಿಖೆಗಾಗಿ ಉತ್ತರ ಪ್ರದೇಶ ಸರ್ಕಾರ ತರಾತುರಿಯಲ್ಲಿ ಏಕ ವ್ಯಕ್ತಿ ನ್ಯಾಯಾಂಗ ಆಯೋಗವನ್ನು ರಚನೆ ಮಾಡಿದ್ದು, ಅದರ ಹೊಣೆಯನ್ನು ಅಲಹಾಬಾದ್‌ ಹೈಕೋರ್ಟ್‌ನ ನಿವೃತ್ತ ನ್ಯಾಯಾಧೀಶ ಪ್ರದೀಪ್‌ ಕುಮಾರ್‌ ಶ್ರೀವಸ್ತವ ಅವರಿಗೆ ವಹಿಸಿದೆ. ಆದರೆ ಈ ಬಗ್ಗೆ ಕಿಡಿಕಾರಿರುವ ಕಾಂಗ್ರೆಸ್‌ ನಾಯಕಿ ಪ್ರಿಯಾಂಕಾ ಗಾಂಧಿ (Priyanka Gandhi), ‘ಸುಪ್ರೀಂ ಕೋರ್ಟ್‌ ಅಥವಾ ಉಚ್ಚ ನ್ಯಾಯಾಲಯದ ಹಾಲಿ ನ್ಯಾಯಾಧೀಶರ ನೇತೃತ್ವದಲ್ಲಿ ತನಿಖೆ ನಡೆಸಬೇಕು’ ಎಂದು ಒತ್ತಾಯಿಸಿದ್ದಾರೆ.

ಕೊಲೆ ಮಾಡಿ, ಬಾಯಿ ಮುಚ್ಚಿಸಲು ಸಾಧ್ಯವಿಲ್ಲ: ರೈತರ ಪರ ಬಿಜೆಪಿ ಸಂಸದನ ಧ್ವನಿ!

ಏತನ್ಮಧ್ಯೆ, ಈ ಬಗ್ಗೆ ಗುರುವಾರ ಪ್ರತಿಕ್ರಿಯಿಸಿದ ಲಖನೌ ಇನ್‌ಸ್ಪೆಕ್ಟರ್‌ ಜನರಲ್‌ ಲಕ್ಷ್ಮೇ ಸಿಂಗ್‌, ‘ಆ​ಶಿಷ್‌ ಮಿಶ್ರಾ ಅವರು ವಿಚಾರಣೆಗೆ ಹಾಜರಾಗದಿದ್ದರೆ ಕಾನೂನು ಕ್ರಮ ಕೈಗೊಳ್ಳುತ್ತೇವೆ. ಅಲ್ಲದೆ ಲಖೀಂಪುರ ಹಿಂಸಾಚಾರ ಕುರಿತು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್‌ ಆಗಿರುವ ವಿಡಿಯೋ ಮತ್ತು ಮಾಹಿತಿಗಳ ಕುರಿತೂ ತನಿಖೆ ಕೈಗೊಳ್ಳಲಾಗುತ್ತದೆ’ ಎಂದು ಹೇಳಿದರು.

ನ್ಯಾಯಾಲಯ ಹೇಳಿದ್ದೇನು?:

ಈ ಬಗ್ಗೆ ಗುರುವಾರ ವಿಚಾರಣೆ ನಡೆಸಿದ ಸುಪ್ರೀಂ ಮುಖ್ಯ ನ್ಯಾಯಮೂರ್ತಿ ಎನ್‌.ವಿ. ರಮಣ ನೇತೃತ್ವದ ಪೀಠ, 8 ಮಂದಿಯ ಕೊಲೆಗೆ ಕಾರಣವಾದ ಈ ಘಟನೆ ದುರದೃಷ್ಟಕರ. ಆದರೆ ಈ ಘಟನೆಯಲ್ಲಿ ಭಾಗಿಯಾದ ಆರೋಪಿಗಳ್ಯಾರು? ಅವರನ್ನು ಬಂಧಿಸಲಾಗಿದೆಯೇ?. ಈ ಪ್ರಕರಣವನ್ನು ನೀವು ಸರಿಯಾಗಿ ನಿರ್ವಹಿಸಿಲ್ಲ. ಸರಿಯಾದ ಕ್ರಮದಲ್ಲಿ ಎಫ್‌ಐಆರ್‌ ಅನ್ನೂ ದಾಖಲಿಸಿಲ್ಲ. ಜೊತೆಗೆ ಈ ಘಟನೆಯಲ್ಲಿ ಸಾವನ್ನಪ್ಪಿದ ವ್ಯಕ್ತಿಯ ತಾಯಿ ಆಘಾತದಿಂದ ಅನಾರೋಗ್ಯಕ್ಕೆ ತುತ್ತಾಗಿದ್ದು, ಅವರ ಆಸ್ಪತ್ರೆ ವೆಚ್ಚವನ್ನು ಉತ್ತರ ಪ್ರದೇಶ ಸರ್ಕಾರವೇ ಭರಿಸಬೇಕು ಎಂದು ಸೂಚಿಸಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ರೈತರಿಗಾಗಿ ಮಸೂದೆ ಮಂಡಿಸಿದ ಸಂಸದ ಡಾ.ಕೆ.ಸುಧಾಕರ್: ಹೈನುಗಾರರು-ಹೂವು ಬೆಳೆಗಾರರಿಗೆ ದೊಡ್ಡ ಆಶಾಕಿರಣ
ಇಂದಿಗೋ ನಾಳೆಗೋ ಎನ್ನುವಂತಿಲ್ಲ, ತಕ್ಷಣದಿಂದಲೇ ಪ್ರಯಾಣಿಕರಿಗೆ ಹಣ ರೀಫಂಡ್‌ ಮಾಡಿ; ಇಂಡಿಗೋಗೆ ಸೂಚಿಸಿದ ಸರ್ಕಾರ!