MSP Benefit: 18.17 ಲಕ್ಷ ರೈತರಿಗೆ 57,032.03 ಕೋಟಿ ರೂಪಾಯಿ MSP ಲಾಭ: ಕೇಂದ್ರ ಸರ್ಕಾರ!

By Suvarna NewsFirst Published Dec 2, 2021, 1:45 PM IST
Highlights

* ಮೂರೂ ಕೃಷಿ ಕಾನೂನು ರದ್ದುಗೊಳಿಸಿದ ಕೇಂದ್ರ ಸರ್ಕಾರ

* ಕೃಷಿ ಕಾನೂನು ರದ್ದುಗೊಮಡ ಬೆನ್ನಲ್ಲೇ ಸದ್ದು ಮಾಡಿದ ಎಂಎಸ್‌ಪಿ ವಿಚಾರ

* 18.17 ಲಕ್ಷ ರೈತರು ಎಂಎಸ್‌ಪಿ ಲಾಭ ಪಡೆದಿರುವ ಮಾಹಿತಿ ಕೊಟ್ಟ ಕೇಂದ್ರ

ನವದೆಹಲಿ(ಡಿ.02): 2021-22ರ ಮುಂಗಾರು ಹಂಗಾಮು ಸೀಸನ್‌ನಲ್ಲಿ (Kharif marketing season) ಸುಮಾರು 18.17 ಲಕ್ಷ ರೈತರು 57,032.03 ಕೋಟಿ ರೂ.ಗಳ ಕನಿಷ್ಠ ಬೆಂಬಲ ಬೆಲೆಯೊಂದಿಗೆ ಪ್ರಯೋಜನ ಪಡೆದಿದ್ದಾರೆ ಎಂದು ಕೇಂದ್ರ ಗುರುವಾರ ತಿಳಿಸಿದೆ. ಸರ್ಕಾರದ ಅಂಕಿಅಂಶಗಳ ಪ್ರಕಾರ, ಪಂಜಾಬ್, ಉತ್ತರ ಪ್ರದೇಶ, ಚಂಡೀಗಢ, ಹರಿಯಾಣ, ಹಿಮಾಚಲ ಪ್ರದೇಶ, ಗುಜರಾತ್, ಜಮ್ಮು ಮತ್ತು ಕಾಶ್ಮೀರ, ಉತ್ತರಾಖಂಡ, ತೆಲಂಗಾಣ, ರಾಜಸ್ಥಾನ, ಕೇರಳ, ತಮಿಳುನಾಡು, ಬಿಹಾರ, ಒಡಿಶಾ, ಮಹಾರಾಷ್ಟ್ರ ಮತ್ತು ಆಂಧ್ರಪ್ರದೇಶಗಳಿಂದ ನವೆಂಬರ್ 30 ರವರೆಗೆ KMS 2021-22 ರಲ್ಲಿ 290.98 LMT ಭತ್ತವನ್ನು ಸಂಗ್ರಹಿಸಲಾಗಿದೆ. 

Farmers Suicide: ರೈತರ ಆತ್ಮಹತ್ಯೆಯಲ್ಲಿ ಮಹಾರಾಷ್ಟ್ರ ನಂ.1: ಕರ್ನಾಟಕಕ್ಕೆ ಎರಡನೇ ಸ್ಥಾನ!

ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವಾಲಯವು (Consumer Affairs, Food & Public Distribution ministry)ಬಿಡುಗಡೆ ಮಾಡಿದ ಅಂಕಿಅಂಶಗಳು, ಇದುವರೆಗೆ ಸುಮಾರು 18.17 ಲಕ್ಷ ರೈತರು 57,032.03 ಕೋಟಿ ರೂಪಾಯಿಗಳ MSP ಮೌಲ್ಯದೊಂದಿಗೆ ಪ್ರಯೋಜನ ಪಡೆದಿದ್ದಾರೆ ಎಂದು ಹೇಳುತ್ತದೆ. ನಡೆಯುತ್ತಿರುವ ಮುಂಗಾರು ಋತುವಿನಲ್ಲಿ ಗರಿಷ್ಠ ಸಂಗ್ರಹವನ್ನು ಪಂಜಾಬ್ (1,86,85,532 MT) ನಂತರ ಹರಿಯಾಣ (55,30,596 MT) ಮತ್ತು ಉತ್ತರ ಪ್ರದೇಶ (12,42,593 MT) ನಿಂದ ಮಾಡಲಾಗಿದೆ. ಕನಿಷ್ಠ ಬೆಂಬಲ ಬೆಲೆಯ ಖಾತರಿಗಾಗಿ ಪ್ರತಿಭಟನೆ ನಡೆಸುತ್ತಿರುವ ರೈತರ ಮನವೊಲಿಸುವ ಪ್ರಯತ್ನದಲ್ಲಿ ಕೇಂದ್ರವು ಈ ದಾಖಲೆ ಬಳಸಿಕೊಳ್ಳುವ ಸಾಧ್ಯತೆಯಿದೆ.

2020-21 ರಲ್ಲಿ ಸಂಗ್ರಹಣೆಯನ್ನು ಗಣನೆಗೆ ತೆಗೆದುಕೊಂಡಾಗ, 1.31 ಕೋಟಿ ರೈತರು (ನವೆಂಬರ್ 30 ರವರೆಗೆ) 1,68,823.23 ಕೋಟಿ ರೂಪಾಯಿಗಳ MSP ಮೌಲ್ಯದೊಂದಿಗೆ ಲಾಭ ಪಡೆದಿದ್ದಾರೆ. 8,94,19,081 ಮೆಟ್ರಿಕ್ ಟನ್ ಖರೀದಿ ಮಾಡಲಾಗಿದೆ ಎಂದು ಸರ್ಕಾರ ಮಾಹಿತಿ ನೀಡಿದೆ.

ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ (Parliament Winter Session) ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆಯಲ್ಲಿ ಕಾನೂನುಬದ್ಧ ಖಾತರಿಗಾಗಿ ತಮ್ಮ ಬೇಡಿಕೆಯನ್ನು ನಿರ್ಧರಿಸಲು ಪಂಜಾಬ್‌ನ ರೈತ ಮುಖಂಡರು ಕೇಂದ್ರಕ್ಕೆ ವಿನಂತಿಸಿದ ಕೆಲವು ದಿನಗಳ ನಂತರ ಈ ಡೇಟಾ ಬಂದಿದೆ. ಕೇಂದ್ರವು ತನ್ನ ಕಡೆಯಿಂದ, ರೈತ ಸಂಘಗಳ ಮೂಲ ಸಂಸ್ಥೆಯಾದ ಸಂಯುಕ್ತ ಕಿಸಾನ್ ಮೋರ್ಚಾವನ್ನು (Samkyukt Kisan Morcha) ಈ ಸಮಸ್ಯೆಯನ್ನು ಚರ್ಚಿಸುವ ಸಮಿತಿಯ ಭಾಗವಾಗಿ ಐದು ಸದಸ್ಯರನ್ನು ಹೆಸರಿಸಲು ಕೇಳಿದೆ.

Farm Laws Repeal Bill 2021: ಕೃಷಿ ಕಾನೂನು ಹಿಂಪಡೆದರೂ ಪ್ರತಿಭಟನೆ ಮುಂದುವರೆಯುತ್ತೆ ಎಂದ ಟಿಕಾಯತ್!

ಮೂಲಗಳ ಪ್ರಕಾರ, ನವೆಂಬರ್ 19 ರಂದು ರಾಷ್ಟ್ರವನ್ನುದ್ದೇಶಿಸಿ ಮಾಡಿದ ಭಾಷಣದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಮೂರು ಕೃಷಿ ಕಾನೂನುಗಳನ್ನು ರದ್ದುಗೊಳಿಸುವುದಾಗಿ ಘೋಷಿಸಿದ ಕೆಲವೇ ದಿನಗಳಲ್ಲಿ ಪ್ರಾರಂಭವಾದ ಕೇಂದ್ರ ಮತ್ತು ಎಸ್‌ಕೆಎಂ ನಡುವಿನ ಬ್ಯಾಕ್-ಚಾನೆಲ್ ಮಾತುಕತೆಗಳ ನಂತರ ಸಮಿತಿಯನ್ನು ನೇಮಿಸುವ ನಿರ್ಧಾರಕ್ಕೆ ಬಂದಿದೆ.

click me!