15 ಬಾಂಗ್ಲಾ ಉಗ್ರರು ದೇಶಕ್ಕೆ ಪ್ರವೇಶ: ಆತಂಕ!

Published : Jul 14, 2021, 09:38 AM IST
15 ಬಾಂಗ್ಲಾ ಉಗ್ರರು ದೇಶಕ್ಕೆ ಪ್ರವೇಶ: ಆತಂಕ!

ಸಾರಾಂಶ

* ಕೋಲ್ಕತಾದಲ್ಲಿ ಮೂವರ ಭಯೋತ್ಪಾದಕರ ಬಂಧನ * 15 ಬಾಂಗ್ಲಾ ಉಗ್ರರು ದೇಶಕ್ಕೆ ಪ್ರವೇಶ: ಆತಂಕ * ಬಂಧಿತರಿಂದಲೇ ಇನ್ನೂ 12 ಉಗ್ರರ ಬಗ್ಗೆ ಮಾಹಿತಿ

ಕೋಲ್ಕತಾ(ಜು.14): ಭಯೋತ್ಪಾದನೆ ನಿಯಂತ್ರಣಕ್ಕೆ ಭಾರತ ಸರ್ಕಾರ ಹಗಲಿರುಳು ಶ್ರಮಿಸುತ್ತಿರುವ ನಡುವೆಯೇ, ‘ನೆರೆಯ ಬಾಂಗ್ಲಾದೇಶದ ಜಮಾತ್‌-ಉಲ್‌-ಮುಜಾಹಿದೀನ್‌ ಬಾಂಗ್ಲಾದೇಶ(ಜೆಎಂಬಿ) ಉಗ್ರ ಸಂಘಟನೆಯ 15 ಭಯೋತ್ಪಾದಕರು ದೇಶಕ್ಕೆ ನುಸುಳಿದಿದ್ದಾರೆ. ಈ ಪೈಕಿ ಇಬ್ಬರು ಬಂಗಾಳದಲ್ಲಿ ಹಾಗೂ 10 ಮಂದಿ ಅನ್ಯ ರಾಜ್ಯಗಳಲ್ಲಿ ತಲೆಮರೆಸಿಕೊಂಡಿದ್ದಾರೆ’ ಎಂದು ಕೋಲ್ಕತಾ ವಿಶೇಷ ಪೊಲೀಸ್‌ ಕಾರ್ಯಪಡೆ (ಎಸ್‌ಟಿಎಫ್‌) ಹೇಳಿದೆ.

ಈ 15 ಮಂದಿಯ ಪೈಕಿ ಮೂವರನ್ನು ಭಾನುವಾರ ಬಂಧಿಸಲಾಗಿತ್ತು. ಇವರ ವಿಚಾರಣೆ ನಡೆಸಿದ ವೇಳೆ ಇನ್ನೂ 12 ಜನರು ತಲೆಮರೆಸಿಕೊಂಡ ವಿಷಯ ಬೆಳಕಿಗೆ ಬಂದಿದೆ.

ಈ ಬಗ್ಗೆ ಮಂಗಳವಾರ ಮಾತನಾಡಿದ ಎಸ್‌ಟಿಎಫ್‌ ಅಧಿಕಾರಿಯೊಬ್ಬರು, ‘ಈ 15 ಮಂದಿ ಪೈಕಿ 10 ಮಂದಿ ಉಗ್ರರು ಒಡಿಶಾ, ಬಿಹಾರ ಮತ್ತು ಜಮ್ಮು-ಕಾಶ್ಮೀರ ಹಾಗೂ ಇತರ ರಾಜ್ಯಗಳಿಗೆ ಭೇಟಿ ನೀಡಿರಬಹುದು. ಇನ್ನುಳಿದ ಇಬ್ಬರಾದ ಶೇಖ್‌ ಶಕೀಲ್‌ ಮತ್ತು ಸಲೀಂ ಮುನ್ಷಿ ಎಂಬುವರು ಬಂಗಾಳದಲ್ಲೇ ಇದ್ದಾರೆ ಎಂದು ಬಂಧಿತ ಮೂವರೂ ಉಗ್ರರು ವಿಚಾರಣೆ ವೇಳೆ ತಿಳಿಸಿದ್ದಾರೆ’ ಎಂದು ಎಸ್‌ಟಿಎಫ್‌ ಅಧಿಕಾರಿ ತಿಳಿಸಿದ್ದಾರೆ.

ಏತನ್ಮಧ್ಯೆ, ಈ ಪ್ರಕರಣದ ತನಿಖೆಗೆ ರಾಷ್ಟ್ರೀಯ ತನಿಖಾ ದಳ(ಎನ್‌ಐಎ) ಪ್ರವೇಶ ನೀಡಿದ್ದು, ಉಗ್ರರ ಕುರಿತಾದ ದಾಖಲೆಗಳನ್ನು ಸಂಗ್ರಹಿಸಲಾಗುತ್ತಿದೆ ಎಂದು ಎನ್‌ಐಎ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ತಿರುಪತಿ ತಿಮ್ಮಪ್ಪನಿಗೆ ಅಂಗವಸ್ತ್ರದ ಮೋಸ, ಪ್ಲಾಸ್ಟಿಕ್‌ ಸಿಲ್ಕ್‌ ಕೊಟ್ಟು 55 ಕೋಟಿ ಯಾಮಾರಿಸಿದ ಕಂಪನಿ!
ರಾಷ್ಟ್ರಪತಿಗಳು ಪದಕ ನೀಡುತ್ತಿದ್ದಂತೆ ಕೊರಳಿನಿಂದ ಕಿತ್ತೆಸೆದ ಬಾಲಕ! ವೈರಲ್ ವಿಡಿಯೋ ಹಿಂದಿನ ಸತ್ಯವೇನು?