ಹಾಥ್ರಸ್‌ ಸಂತ್ರಸ್ತೆ, ಆರೋಪಿ ನಡುವೆ ಸಂಬಂಧ ಇತ್ತು!

Published : Oct 08, 2020, 07:37 AM IST
ಹಾಥ್ರಸ್‌ ಸಂತ್ರಸ್ತೆ, ಆರೋಪಿ ನಡುವೆ ಸಂಬಂಧ ಇತ್ತು!

ಸಾರಾಂಶ

ಹಾಥ್ರಸ್‌ ಸಂತ್ರಸ್ತೆ, ಆರೋಪಿ ನಡುವೆ ಸಂಬಂಧ ಇತ್ತು!| ಇದನ್ನು ಸಹಿಸದೆ ಸಂತ್ರಸ್ತೆಗೆ ಮನೆಯವರ ಹಲ್ಲೆ| ಹಾಥ್ರಸ್‌ ಗ್ರಾಮದ ಮುಖ್ಯಸ್ಥನಿಂದ ಹೇಳಿಕೆ| 

ಹಾಥ್ರಸ್(ಅ.08)‌: ದೇಶಾದ್ಯಂತ ಆಕ್ರೋಶಕ್ಕೆ ಕಾರಣವಾಗಿರುವ ಉತ್ತರ ಪ್ರದೇಶದ ಹಾಥ್ರಸ್‌ ದಲಿತ ಯುವತಿಯ ಸಾಮೂಹಿಕ ಅತ್ಯಾಚಾರ ಪ್ರಕರಣ ದಿನೇ ದಿನೇ ಹೊಸ ಹೊಸ ತಿರುವು ಪಡೆದುಕೊಳ್ಳುತ್ತಿದೆ. ಸಂತ್ರಸ್ತೆ ಹಾಗೂ ಪ್ರಕರಣದ ಆರೋಪಿ ಫೋನ್‌ನಲ್ಲಿ ನಿರಂತರ ಸಂಪರ್ಕದಲ್ಲಿದ್ದರು. ಇವರಿಬ್ಬರ ಸಂಬಂಧಕ್ಕೆ ಸಂತ್ರಸ್ತೆಯ ಕುಟುಂಬದ ವಿರೋಧವಿತ್ತು ಎಂದು ಗ್ರಾಮದ ಮುಖ್ಯಸ್ಥ ತಿಳಿಸಿರುವುದು ಸಂಚಲನಕ್ಕೆ ಕಾರಣವಾಗಿದೆ.

ಪ್ರಕರಣದ ಆರೋಪಿಯು ಸಂತ್ರಸ್ತೆಗೆ ಫೋನ್‌ ನೀಡಲು ಹೋಗಿದ್ದ. ಇದನ್ನು ನೋಡಿ ಸಂತ್ರಸ್ತೆಯ ಕುಟುಂಬ ಆಕ್ರೋಶಗೊಂಡು, ಆಕೆಯನ್ನು ಥಳಿಸಿತ್ತು. ಹೀಗಾಗಿ ಆಕೆಗೆ ಗಂಭೀರವಾಗಿ ಗಾಯವಾಗಿತ್ತು. ಬೇರೊಬ್ಬರ ತಪ್ಪಿಗೆ ಯಾವುದೇ ವ್ಯಕ್ತಿಯನ್ನು ಶಿಕ್ಷಿಸಬಾರದು. ಈ ಪ್ರಕರಣದಲ್ಲಿ ಅದೇ ಆಗುತ್ತಿದೆ ಎಂದು ತಿಳಿಸಿದ್ದಾರೆ.

ಈ ನಡುವೆ, ಆರೋಪಿ ಹಾಗೂ ಸಂತ್ರಸ್ತೆ ಕುಟುಂಬದ ನಡುವೆ ನೂರಾರು ಕರೆಗಳ ವಿನಿಮಯವಾಗಿದೆ. ಈ ಸಂಬಂಧ ಸಂತ್ರಸ್ತೆಯ ಸೋದರನನ್ನು ವಿಚಾರಣೆಗೊಳಪಡಿಸಬೇಕು ಎಂದು ಬಿಜೆಪಿ ನಾಯಕ ಅಮಿತ್‌ ಮಾಳವೀಯ ಆಗ್ರಹಿಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ರೈತರಿಗಾಗಿ ಮಸೂದೆ ಮಂಡಿಸಿದ ಸಂಸದ ಡಾ.ಕೆ.ಸುಧಾಕರ್: ಹೈನುಗಾರರು-ಹೂವು ಬೆಳೆಗಾರರಿಗೆ ದೊಡ್ಡ ಆಶಾಕಿರಣ
ಇಂದಿಗೋ ನಾಳೆಗೋ ಎನ್ನುವಂತಿಲ್ಲ, ತಕ್ಷಣದಿಂದಲೇ ಪ್ರಯಾಣಿಕರಿಗೆ ಹಣ ರೀಫಂಡ್‌ ಮಾಡಿ; ಇಂಡಿಗೋಗೆ ಸೂಚಿಸಿದ ಸರ್ಕಾರ!