ಪಿಎನ್‌ಜಿ ಪೂರೈಕೆ ತ್ವರಿತಗೊಳಿಸಿದ ರಾಜ್ಯಗಳಿಗೆ 10% ಹೆಚ್ಚು ಸಿಲಿಂಡರ್‌

Kannadaprabha News   | Kannada Prabha
Published : Mar 19, 2026, 05:10 AM IST
LPG

ಸಾರಾಂಶ

ಅನಿಲ ಬಿಕ್ಕಟ್ಟು ಪರಿಹಾರಕ್ಕೆ ಕೇಂದ್ರ ಸರ್ಕಾರವು ಪಿಎನ್‌ಜಿ ಬಳಕೆಗೆ ಒತ್ತು ನೀಡುತ್ತಿದೆ. ಇದರ ಭಾಗವಾಗಿ, ಅನಿಲ ಪೂರೈಕೆಯ ಪೈಪ್‌ ಜಾಲವನ್ನು ತ್ವರಿತಗತಿಯಲ್ಲಿ ವಿಸ್ತರಿಸುವ ರಾಜ್ಯಗಳಿಗೆ ಶೇ.10ರಷ್ಟು ಹೆಚ್ಚುವರಿ ವಾಣಿಜ್ಯ ಎಲ್‌ಪಿಜಿ ನೀಡುವುದಾಗಿ ಘೋಷಿಸಲಾಗಿದೆ.

ನವದೆಹಲಿ: ದೇಶದಲ್ಲಿ ತಲೆದೋರಿರುವ ಅನಿಲ ಬಿಕ್ಕಟ್ಟು ಪರಿಹಾರಕ್ಕೆ ಕ್ರಮಗಳನ್ನು ಕೈಗೊಳ್ಳುತ್ತಿರುವ ನಡುವೆಯೇ, ಮುನ್ನೆಚ್ಚರಿಕಾ ಕ್ರಮವಾಗಿ ಕೇಂದ್ರ ಸರ್ಕಾರವು ಪಿಎನ್‌ಜಿ (ಪೈಪ್‌ ಮೂಲಕ ಅನಿಲ ಪೂರೈಕೆ) ಬಳಕೆಗೆ ಒತ್ತು ನೀಡುತ್ತಿದೆ. ಇದರ ಭಾಗವಾಗಿ, ಅನಿಲ ಪೂರೈಕೆಯ ಪೈಪ್‌ ಜಾಲವನ್ನು ತ್ವರಿತಗತಿಯಲ್ಲಿ ವಿಸ್ತರಿಸುವ ರಾಜ್ಯಗಳಿಗೆ ಶೇ.10ರಷ್ಟು ಹೆಚ್ಚುವರಿ ವಾಣಿಜ್ಯ ಎಲ್‌ಪಿಜಿ ನೀಡುವುದಾಗಿ ಘೋಷಿಸಲಾಗಿದೆ.

ಪಿಎನ್‌ಜಿ ಸಪ್ಲೈಯಲ್ಲಿ ಯಾವುದೇ ತೊಂದರೆ ಆಗಿಲ್ಲ

ಈ ಬಗ್ಗೆ ಮಾಹಿತಿ ನೀಡಿರುವ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯದ ಜಂಟಿ ಕಾರ್ಯದರ್ಶಿ ಸುಜಾತಾ ಶರ್ಮಾ, ‘ಎಲ್‌ಪಿಜಿ ಪೂರೈಕೆಯಲ್ಲಿ ಅಡಚಣೆಯಾಗಿದ್ದರೂ ಪಿಎನ್‌ಜಿ ಸಪ್ಲೈಯಲ್ಲಿ ಯಾವುದೇ ತೊಂದರೆ ಆಗಿಲ್ಲ. ಆದ್ದರಿಂದ ನಗರ ಅನಿಲ ವಿತರಣೆ (ಸಿಜಿಡಿ)ಸೌಲಭ್ಯ ಲಭ್ಯವಿದ್ದಲ್ಲಿ ಎಲ್‌ಪಿಜಿ ಬಳಕೆದಾರರು ಅದರ ಬಳಕೆಯನ್ನು ಆರಂಭಿಸಿ’ ಎಂದು ಕರೆ ನೀಡಿದ್ದಾರೆ. ಜತೆಗೆ, ‘ಪೈಪ್‌ ಅಳವಡಿಕೆಗೆ ಈಗಾಗಲೇ ಸಲ್ಲಿಸಿರುವ ಅರ್ಜಿಗಳನ್ನು ತಕ್ಷಣವೇ ಅನುಮೋದಿಸಲಾಗುವುದು ಹಾಗೂ ಹೊಸದಾಗಿ ಸಲ್ಲಿಸುವ ಅರ್ಜಿಗಳಿಗೆ 24 ತಾಸುಗಳೊಳಗೆ ಅನುಮೋದನೆ ನೀಡಲಾಗುವುದು. ಜತೆಗೆ ಆ ರಾಜ್ಯಗಳಿಗೆ ಬಹುಮಾನವಾಗಿ ಸದ್ಯಕ್ಕಿಂತ ಶೇ.10ರಷ್ಟು ಹೆಚ್ಚು ಎಲ್‌ಪಿಜಿ ಪೂರೈಸಲಾಗುವುದು’ ಎಂದು ತಿಳಿಸಿದ್ದಾರೆ.

ಕಳವಳವಿದೆ, ಕಷ್ಟವಿಲ್ಲ:

ದೇಶದಲ್ಲಿ ಸದ್ಯದ ಅನಿಲ ಲಭ್ಯತೆಯ ಬಗ್ಗೆ ಮಾತನಾಡುತ್ತಾ, ‘ಎಲ್ಲೂ ಅನಿಲದ ಪೂರೈಕೆ ನಿಂತಿಲ್ಲ. ಆದರೆ ಸಂಘರ್ಷದ ಕಾರಣ ಕಳವಳ ಮುಂದುವರೆದಿದೆ. ಆದ್ದರಿಂದ ಸಿಲಿಂಡರ್‌ ಬುಕ್‌ ಮಾಡಿದವರು ಅದು ತಲುಪುವ ತನಕ ತಾಳ್ಮೆಯಿಂದ ಕಾಯಬೇಕು’ ಎಂದು ಸುಜಾತಾ ಹೇಳಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಶೋರೂಂ, ಬಹು ಅಂತಸ್ತಿನ ಮನೆ ಇದ್ದ ಕಟ್ಟಡಕ್ಕೆ ಬೆಂಕಿ, ಕುಟುಂಬದ 9 ಜನ ಸಾವು
ವಿಮಾನಗಳಲ್ಲಿ ಸೀಟು ಆಯ್ಕೆಗೆ ಹೇರುವ ಶುಲ್ಕಕ್ಕೆ ಕೇಂದ್ರ ಬ್ರೇಕ್‌