ಎಡ್ಡೆ ಗೊಬ್ಬೋಡು ರಾಹುಲ್ ಎಂದು ಪ್ರೋತ್ಸಾಹಿಸಿದ ತುಳುವರಿಗೆ ನಿರಾಸೆ!

Published : Jun 30, 2019, 08:24 PM ISTUpdated : Jun 30, 2019, 08:28 PM IST
ಎಡ್ಡೆ ಗೊಬ್ಬೋಡು ರಾಹುಲ್ ಎಂದು ಪ್ರೋತ್ಸಾಹಿಸಿದ ತುಳುವರಿಗೆ ನಿರಾಸೆ!

ಸಾರಾಂಶ

ಟೀಂ ಇಂಡಿಯಾ ಬ್ಯಾಟ್ಸ್‌ಮನ್ ಕೆಎಲ್ ರಾಹುಲ್ ಮೂಲತಃ ಮಂಗಳೂರಿನವರು. ಹೀಗಾಗಿ ರಾಹುಲ್‌ಗೆ ಮಂಗಳೂರು ಸೇರಿದಂತೆ ತುಳು ಭಾಷಿಗ ಅಭಿಮಾನಿಗಳು ಹೆಚ್ಚಿದ್ದಾರೆ. ಪಾಕಿಸ್ತಾನ ಪಂದ್ಯದ ಬಳಿಕ ಇದೀಗ ಇಂಗ್ಲೆಂಡ್ ವಿರುದ್ದದ ಪಂದ್ಯದಲ್ಲೂ ರಾಹುಲ್‌ಗೆ ತುಳುವಿನಲ್ಲಿ ಬೆಂಬಲ ವ್ಯಕ್ತಪಡಿಸಿದ್ದಾರೆ. ಈ ವಿಡಿಯೋ ವೈರಲ್ ಆಗಿದೆ.

ಬರ್ಮಿಂಗ್‌ಹ್ಯಾಮ್(ಜೂ. 30): ವಿಶ್ವಕಪ್ ಟೂರ್ನಿಯಲ್ಲಿ ಟೀಂ ಇಂಡಿಯಾ ಕ್ರಿಕೆಟಿಗ ಕೆಎಲ್ ರಾಹುಲ್‌ಗೆ ಪ್ರತಿ ಪಂದ್ಯದಲ್ಲೂ  ತುಳು ಭಾಷಿಗರ ಪ್ರೋತ್ಸಾಹ ಸಿಗುತ್ತಿದೆ. ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ತುಳುನಾಡಿನ ಜನತೆ ರಾಹುಲ್ ಬಳಿ ಎಂಕ್ಲೆಗ್ ಸೆಂಚುರಿ ಬೋಡು ಎಂದು ಆಗ್ರಹಿಸಿದ್ದರು. ಇದೀಗ ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಎಡ್ಡೆ ಗೊಬ್ಬೋಡು ರಾಹುಲ್( ಚೆನ್ನಾಗಿ ಆಡಬೇಕು ರಾಹುಲ್) ಎಂದಿದ್ದಾರೆ. ಆದರೆ ರಾಹುಲ್ ಬಹುಬೇಗನೆ ಔಟಾಗೋ ಮೂಲಕ ನಿರಾಸೆ ಮೂಡಿಸಿದ್ದಾರೆ.

ಇದನ್ನೂ  ಓದಿ: ಇಂಡೋ-ಪಾಕ್ ಫೈಟ್: ಎಂಕ್ಲೆಗ್ ಸೆಂಚುರಿ ಬೋಡು- ರಾಹುಲ್‌ಗೆ ತುಳು ಭಾಷೆಯಲ್ಲಿ ಮನವಿ!

ಟಾಸ್ ಬಳಿಕ ಫೀಲ್ಡಿಂಗ್ ಇಳಿಯಲು ಟೀಂ ಇಂಡಿಯಾ ಸಜ್ಜಾಗಿತ್ತು. ಮೈದಾನಕ್ಕಿಳಿಯುವ ಮುನ್ನ ಸಾಲಾಗಿ ನಿಂತಿದ್ದ ಟೀಂ ಇಂಡಿಯಾಗೆ ಕ್ರೀಡಾಂಗಣದಲ್ಲಿ ನೆರೆದಿದ್ದ ಅಭಿಮಾನಿಗಳು ಶುಭಕೋರುತ್ತಿದ್ದರು. ಇದೇ ವೇಳೆ ಮಂಗಳೂರಿನ ಅಭಿಮಾನಿಗಳು ತುಳುವಿನಲ್ಲಿ ರಾಹುಲ್‌ಗೆ ಪ್ರೋತ್ಸಾಹ ನೀಡಿದ್ದಾರೆ. ಎಡ್ಡೆ ಗೊಬ್ಬೋಡು ರಾಹುಲ್, ಎಂಕ್ಲ್ ಕುಡ್ಲಡ್ದ್ ಬೈದಿನಿ(ಚೆನ್ನಾಗಿ ಆಡಬೇಕು ರಾಹುಲ್, ನಾವು ಮಂಗಳೂರಿನಿಂದ ಬಂದಿದ್ದೇವೆ) ಎಂದು ರಾಹುಲ್‌ಗೆ ಪ್ರೋತ್ಸಾಹ ನೀಡಿದ್ದಾರೆ. ಇತ್ತ ರಾಹುಲ್ ತುಳು ಭಾಷಿಗರತ್ತ  ಕೈಬೀಸಿ ಪ್ರತಿಕ್ರಿಯೆ ನೀಡಿದ್ದಾರೆ. 

"

ಇದನ್ನೂ  ಓದಿ: ವಿಶ್ವಕಪ್ ಟೂರ್ನಿಯಲ್ಲಿ ದಾಖಲೆ ಬರೆದ ಮೊಹಮ್ಮದ್ ಶಮಿ!

ಫೀಲ್ಡಿಂಗ್ ವೇಳೆ ರಾಹುಲ್ ಕ್ಯಾಚ್ ಹಿಡಿಯಲು ಹೋಗಿ ಇಂಜುರಿಗೆ ತುತ್ತಾಗಿದ್ದರು. ಹೀಗಾಗಿ ಫೀಲ್ಡಿಂಗ್ ಮಾಡದೆ ವಿಶ್ರಾಂತಿಗೆ ಜಾರಿದ್ದರು. ಇನ್ನು ಬ್ಯಾಟಿಂಗ್ ನಲ್ಲಿ ರಾಹುಲ್ ನಿರಾಸೆ ಮೂಡಿಸಿದ್ದಾರೆ. ಶೂನ್ಯಕ್ಕೆ ಔಟಾಗೋ ಮೂಲಕ ಭಾರತಕ್ಕೆ ಉತ್ತಮ ಆರಂಭ ನೀಡಲು ವಿಫಲರಾಗಿದ್ದಾರೆ. ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಫೀಲ್ಡಿಂಗ್ ಮಾಡುತ್ತಿದ್ದ ರಾಹುಲ್ ಬಳಿ ಮಂಗಳೂರಿನ ಅಭಿಮಾನಿಗಳು, ರಾಹುಲ್ ಎಂಕ್ಲೆಗ್ ಸೆಂಚುರಿ ಬೋಡು(ರಾಹುಲ್ ನಮಗೆ ಸೆಂಚುರಿ ಬೇಕು) ಎಂದು ಆಗ್ರಹಿಸಿದ್ದರು.  

PREV
click me!

Recommended Stories

ವಿಶ್ವಕಪ್ ಫೈನಲ್ ವಿವಾದಾತ್ಮಕ ತೀರ್ಪು; ಮೌನ ಮುರಿದ ಅಂಪೈರ್ ಧರ್ಮಸೇನಾ!
ವಿಶ್ವಕಪ್ ಫೈನಲ್ ಗೆಲುವು ನ್ಯಾಯವಲ್ಲ; ಇಂಗ್ಲೆಂಡ್ ನಾಯಕ ವಿಷಾದ!