ನರಕಕ್ಕಿಂತ ಕಡಿಮೆ ಇಲ್ಲ ಅಫ್ಘಾನಿಸ್ತಾನ, ದೇಶ ಬಿಡಲು ಬಯಸುವ ಭಾರತೀಯರು ಕೂಡಲೇ ಸಂಪರ್ಕಿಸಿ!
First Published Aug 10, 2021, 5:01 PM ISTಅಫ್ಘಾನಿಸ್ತಾನದಲ್ಲಿ ತಾಲಿಬಾನಿಗಳ ಪ್ರಾಬಲ್ಯ ದಿನೇ ದಿನೇ ಹೆಚ್ಚುತ್ತಿದ್ದು, ಭಾರೀ ಆತಂಕ ಸೃಷ್ಟಿಸಿದೆ. ತಾಲಿಬಾನ್ ಆಡಳಿತ ವೈಖರಿ, ಮಾನವ ನಾಗರೀಕತೆ ಬಹಳ ಕೆಟ್ಟದಾಗಿದೆ. ಅಫ್ಘಾನಿಸ್ತಾನದ ಪರಿಸ್ಥಿತಿ ಪ್ರಸ್ತುತ ನರಕಕ್ಕಿಂತ ಕೆಟ್ಟದಾಗಿದೆ. ಜನರ ಮನೆ ನಾಶಗೊಂಡಿವೆ, ತಿನ್ನಲು ಅಥವಾ ಮಲಗಲು ಸ್ಥಳವಿಲ್ಲ. ಇವೆಲ್ಲಕ್ಕಿಂತಲೂ ಮಿಗಿಲಾಗಿ ಸಾವಿನ ಭಯ ಕಾಡುತ್ತಿದೆ. ಏತನ್ಮಧ್ಯೆ, ಪ್ರಪಂಚದಾದ್ಯಂತದ ದೇಶಗಳು ತಮ್ಮ ನಾಗರಿಕರನ್ನು ಅಲ್ಲಿಂದ ಸುರಕ್ಷಿತವಾಗಿ ಸ್ಥಳಾಂತರಿಸಲು ಪ್ರಯತ್ನಿಸುತ್ತಿವೆ. ಭಾರತ ಕೂಡ ತನ್ನ ದೇಶದ ಜನರನ್ನು ಅಫ್ಘಾನಿಸ್ತಾನದಿಂದ ಮರಳಿ ಕರೆತರುವ ಪ್ರಕ್ರಿಯೆ ಆರಂಭಿಸಿದೆ. ಅಫ್ಘಾನಿಸ್ತಾನದ ಮಜರ್-ಷರೀಫ್ನಲ್ಲಿರುವ ಭಾರತೀಯ ದೂತಾವಾಸವು ಎಲ್ಲಾ ಭಾರತೀಯರನ್ನು ಭಾರತಕ್ಕೆ ಮರಳುವಂತೆ ಹೇಳಿದೆ. ಇದಕ್ಕಾಗಿ, ವಿಶೇಷ ವಿಮಾನ ಇಂದು, ಮಂಗಳವಾರ ಸಂಜೆ ದೆಹಲಿಗೆ ಹೊರಡಲಿದೆ. ಆದಾಗ್ಯೂ, ಅಗತ್ಯವಿದ್ದರೆ ಈ ಸೌಲಭ್ಯವನ್ನು ಮತ್ತೊಮ್ಮೆ ಆಯೋಜಿಸಬಹುದು. ಹೀಗಾಗಿ ತವರುನಾಡಿಗೆ ಮರಳಲು ಬಯಸುವವರು ತಮ್ಮ ಪೂರ್ಣ ಹೆಸರು, ಪಾಸ್ಪೋರ್ಟ್ ಸಂಖ್ಯೆ, ಮುಕ್ತಾಯ ದಿನಾಂಕ 0785891303 ಮತ್ತು 0785891301 ಈ ಸಂಖ್ಯೆಗಳಿಗೆ ವಾಟ್ಸಾಪ್ ಮಾಡಬಹುದು. ಅಪ್ಘಾನಿಸ್ತಾನದ ಪರಿಸ್ಥಿತಿ ವಿವರಿಸುವ ಕೆಲ ಚಿತ್ರಗಳು...