ಅಹಮದಾಬಾದ್, ಬೆಂಗಳೂರು, ಭೋಪಾಲ್, ಚೆನ್ನೈ, ಮುಂಬೈ ಮತ್ತು ನೋಯ್ಡಾದಂತಹ ಪ್ರಮುಖ ನಗರಗಳಲ್ಲಿ ಬಿಲ್ಬೋರ್ಡ್ಗಳಲ್ಲಿ ಈ ಜಾಹೀರಾತು ಇರೋದನ್ನು ನೋಡಬಹುದು. ಈ ಸಂಸ್ಥೆಯು, “ಹೈನುಗಾರಿಕೆಯ ಉತ್ಪಾದನೆಯು ಕ್ರೌರ್ಯದಲ್ಲಿ ಬೇರೂರಿದೆ, ಬಲವಂತದ ಗರ್ಭಧಾರಣೆಯಿಂದ ಹಿಡಿದು ಕರುಗಳನ್ನು ತಾಯಿಯಿಂದ ಹೃದಯವಿದ್ರಾವಕವಾಗಿ ಬೇರ್ಪಡಿಸುವ ಮಟ್ಟಕ್ಕೆ ಇದೆ. ಗೋವುಗಳು ಹಾಲಿನ ಯಂತ್ರಗಳಲ್ಲ; ಅವುಗಳ ಹಾಲು ಕರುಗಳಿಗಾಗಿ, ಮನುಷ್ಯರಿಗಾಗಿ ಅಲ್ಲ. ಹಾಲಿನ ಉತ್ಪನ್ನಗಳನ್ನು ತ್ಯಜಿಸಿ” ಎಂದು ಬರೆದಿದೆ.