ವಾಟರ್ಮೆನ್ಗೆ ಬುದ್ಧಿ ಕಲಿಸಲು ಹೋಗಿ ಊರನ್ನೇ ಹೆದರಿಸಿದರು!
ಈ ಕಿಡಿಗೇಡಿತನದ ಹಿಂದೆ ಒಂದು ತಮಾಷೆಯ ಕಾರಣವಿತ್ತು. ಗ್ರಾಮದ ವಾಟರ್ಮೆನ್ ಪ್ರಸಾದ್ ಎಂಬುವವರು ಮನೆಗಳಿಗೆ ಸರಿಯಾಗಿ ನೀರು ಬಿಡುತ್ತಿಲ್ಲ ಎಂಬ ಆರೋಪವಿತ್ತು. ಈ ಹಿನ್ನೆಲೆಯಲ್ಲಿ ಅವರಿಗೆ ಬುದ್ಧಿ ಕಲಿಸಲು ಮತ್ತು ಅವರ ಮನೆ ಬಳಿ ಬರದಂತೆ ಹೆದರಿಸಲು ಅವರ ಸ್ನೇಹಿತರೇ ಈ ಪ್ಲಾನ್ ಮಾಡಿದ್ದರು. ಎಐ ಮೂಲಕ ದೈತ್ಯ ಹೆಬ್ಬಾವಿನ ಫೋಟೋ ಸೃಷ್ಟಿಸಿ, ಅದು ಜಕ್ಕಸಂದ್ರದಲ್ಲೇ ಇದೆ ಎಂದು ಹರಿಬಿಟ್ಟಿದ್ದರು.