ಸಾಲ ತೀರಿಸಲಾಗದೆ ಕಂಗೆಟ್ಟಿದ್ದೀರಾ? ಹಾಗಿದ್ರೆ ಈ ವಾಸ್ತು ಟಿಪ್ಸ್ ಫಾಲೋ ಮಾಡಿ

First Published Apr 19, 2021, 4:09 PM IST

ವಾಸ್ತು ಟಿಪ್ಸ್: ಜನರು ತುಂಬಾ ಸಂಪಾದನೆ ಮಾಡುತ್ತಾರೆ, ಆದರೆ ಯಾವುದನ್ನು ಉಳಿಸಲು ಸಾಧ್ಯವಾಗುತ್ತಿಲ್ಲ, ಎಂದು ಜನ ಸಾಮಾನ್ಯವಾಗಿ ಹೇಳುತ್ತಿರುವುದನ್ನು ಕೇಳಿರಬಹುದು. ಇಂತಹ ಪರಿಸ್ಥಿತಿಯಲ್ಲಿ ತಮ್ಮ ಅಗತ್ಯಗಳನ್ನು ಪೂರೈಸಲು ಸಾಲ ಮಾಡಬೇಕಾಗುತ್ತದೆ. ಹಣ ಮತ್ತು ಸಾಲದ ನಿರಂತರ ಕೊರತೆಯು ವಾಸ್ತುಶಿಲ್ಪದ ದೋಷಗಳಿಂದ ಉಂಟಾಗಬಹುದು. ಕೆಲವು ಬದಲಾವಣೆಗಳನ್ನು ಮಾಡುವ ಮೂಲಕ ಅದನ್ನು ತೊಡೆದು ಹಾಕಬಹುದು.

ಕೆಲವೊಮ್ಮೆ ಕೆಲವು ಸಂದರ್ಭಗಳು ಅನಿವಾರ್ಯವಾಗಿಸಾಲ ತೆಗೆದುಕೊಳ್ಳುವಂತೆ ಮಾಡುತ್ತದೆ. ನೀವೂ ಈ ಪರಿಸ್ಥಿತಿ ಎದುರಿಸುತ್ತಿದ್ದರೆ ಮತ್ತು ಬಯಸಿದರೂ ಸಾಲ ತೀರಿಸಲು ಸಾಧ್ಯವಾಗದಿದ್ದರೆ, ಕೆಲವು ವಾಸ್ತು ಕ್ರಮಗಳನ್ನು ಅಳವಡಿಸಿ ಕೊಳ್ಳುವ ಮೂಲಕ ಸಾಲದ ಹೊರೆಯನ್ನು ಕಡಿಮೆ ಮಾಡಿಕೊಳ್ಳಬಹುದು.
undefined
ಹಿಂದೂ ಧರ್ಮದಲ್ಲಿ ವಾಸ್ತುಗೆ ಹೆಚ್ಚಿನ ಮಹತ್ವವಿದೆ. ಇದನ್ನು ಅಳವಡಿಸಿಕೊಳ್ಳುವುದರಿಂದ ನಕಾರಾತ್ಮಕ ಶಕ್ತಿ (ಋಣಾತ್ಮಕ ಶಕ್ತಿ) ಮನೆಯಿಂದ ದೂರವಾಗುತ್ತದೆ. ಅದೇ ಸಮಯದಲ್ಲಿ, ಹಣ ಕೈಯಲ್ಲಿ ನಿಲ್ಲುತ್ತದೆ. ವಾಸ್ತು ಪ್ರಕಾರ ಸಾಲ ಮತ್ತು ಇತರೆ ಸಮಸ್ಯೆಗಳಿಂದ ಮುಕ್ತರಾಗಲು ಕೆಲವು ಸಣ್ಣ ವಿಷಯಗಳನ್ನು ನೋಡಿಕೊಳ್ಳಬಹುದು:
undefined
ಮನೆಯ ಗೋಡೆಗಳು ಮನೆಯಲ್ಲಿ ವಾಸಿಸುವ ವ್ಯಕ್ತಿಯ ವ್ಯಕ್ತಿತ್ವವನ್ನು ಬಿಂಬಿಸುತ್ತದೆ.ಆದ್ದರಿಂದ ಮನೆಯ ಗೋಡೆಗಳನ್ನು ಯಾವಾಗಲೂ ಸ್ವಚ್ಛವಾಗಿಡಬೇಕು. ಮನೆಯ ಮೂಲೆಗಳಲ್ಲಿ ಯಾವುದೇ ಬಲೆಗಳು ಇರದಂತೆ ಗಮನಹರಿಸಿ. ಇದಕ್ಕಾಗಿ ನೀವು ವಾರಕ್ಕೆ 2ರಿಂದ 3 ಬಾರಿ ಬಲೆಯನ್ನು ಸ್ವಚ್ಛಗೊಳಿಸುತ್ತಿರಬೇಕು. ಇದರಿಂದ ಮನೆಯಲ್ಲಿ ಸಂಪತ್ತಿನ ಕೊರತೆ ಇರುವುದಿಲ್ಲ.
undefined
ಸಾಲವನ್ನು ತೀರಿಸಲು ಬಯಸಿದರೆ, ಮನೆ ಮತ್ತು ಅಂಗಡಿಯ ಈಶಾನ್ಯ ದಿಕ್ಕಿನಲ್ಲಿ ಗಾಜಿನ ಕಿಟಕಿ ಹಾಕಿಸಿ. ಹೀಗೆ ಮಾಡುವುದರಿಂದ ಸಾಲ ಮುಕ್ತರಾಗಬಹುದು.
undefined
ಮನೆಯಲ್ಲಿ ಭಾರವಾದ ಲಗೇಜ್ ಇದ್ದರೆ ಸಾಲದ ಹೊರೆ ವ್ಯಕ್ತಿಯ ಮೇಲೆ ಹೆಚ್ಚಾಗುತ್ತದೆ. ಆದ್ದರಿಂದ ಮನೆಯ ಪೂರ್ವ ಮತ್ತು ಉತ್ತರ ದಿಕ್ಕಿನಲ್ಲಿ ಯಾವುದೇ ಭಾರವಾದ ವಸ್ತುಗಳನ್ನು ಇಡಬೇಡಿ.
undefined
ಸಂಜೆ ಸಮಯದಲ್ಲಿ ಮರ, ಗಿಡಗಳನ್ನು ಕತ್ತರಿಸಬಾರದು. ಸಂಜೆ ಸಮಯದಲ್ಲಿ ಸಸ್ಯಗಳು ವಿಶ್ರಾಂತಿ ಪಡೆಯುತ್ತಿರುತ್ತವ.ಧಾರ್ಮಿಕ ನಂಬಿಕೆಯ ಪ್ರಕಾರ, ಸಂಜೆ ತುಳಸಿ ಎಲೆಗಳನ್ನು ತೆಗೆಯುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಇದನ್ನು ಮಾಡುವ ವ್ಯಕ್ತಿಯು ಆರ್ಥಿಕ ತೊಂದರೆಗಳನ್ನು ಎದುರಿಸಬಹುದು. ಆದ್ದರಿಂದ ಸಂಜೆ ತುಳಸಿ ಎಲೆಗಳನ್ನು ತೆಗೆಯುವುದನ್ನು ತಪ್ಪಿಸಬೇಕು.
undefined
ಸೋಮವಾರ ಅಥವಾ ಬುಧವಾರಗಳಂದು ಹಣವನ್ನು ವಹಿವಾಟು ಮಾಡುವುದು ಉತ್ತಮ ಅಲ್ಲ ಎಂದು ಪರಿಗಣಿಸಲಾಗಿದೆ. ಆದರೆ ಈ ದಿನ ಸಾಲ ತೆಗೆದುಕೊಳ್ಳುವುದನ್ನು ತಪ್ಪಿಸಿ. ಇಲ್ಲದಿದ್ದರೆ ಸಾಲ ಹೆಚ್ಚಾಗುತ್ತದೆ.
undefined
ಆರೋಗ್ಯದ ದೃಷ್ಟಿಯಿಂದ ನಿದ್ರೆ ಮಾಡುವುದು ತುಂಬಾ ಪ್ರಯೋಜನಕಾರಿ. ಆದರೆ ಸಂಜೆ ಮಲಗುವುದನ್ನು ತಪ್ಪಿಸಬೇಕು. ಸಂಜೆ ಮಲಗುವುದರಿಂದ ಮನೆಯಲ್ಲಿ ಬಡತನವು ಉಂಟಾಗುತ್ತದೆ ಎಂದು ನಂಬಲಾಗಿದೆ. ಆದ್ದರಿಂದ ಸಂಜೆಯನ್ನು ದೇವರ ಪೂಜೆಯಲ್ಲಿ ಕಳೆಯಬೇಕು. ಈ ಸಮಯದಲ್ಲಿ ಪೂಜೆ ಮಾಡುವಾಗ ಶುಭ ಫಲಗಳು ಸಿಗುತ್ತದೆ.
undefined
ಯಾವಾಗಲೂ ದಕ್ಷಿಣ ದಿಕ್ಕಿನಲ್ಲಿ ತಿಜೋರಿ ಸುರಕ್ಷಿತವಾಗಿರುತ್ತದೆ.ಇದರ ಬಾಯಿ ಉತ್ತರ ದಿಕ್ಕಿನಲ್ಲಿ ತೆರೆದುಕೊಳ್ಳಬೇಕು. ಇದರಿಂದ ಸಾಲದ ಹೊರೆ ಯಾಗುವುದಿಲ್ಲ ಮತ್ತು ಹಣವೂ ಉಳಿಯುತ್ತದೆ. .
undefined
ವಾಸ್ತು ಪ್ರಕಾರ, ಮನೆಯಲ್ಲಿ ನೈಋತ್ಯ ದಿಕ್ಕಿನಲ್ಲಿ ಶೌಚಾಲಯವಿದ್ದರೆ, ಅದು ಹಣ ನಷ್ಟಕ್ಕೆ ಕಾರಣವಾಗುತ್ತದೆ. ಇದು ವ್ಯಕ್ತಿಯ ಮೇಲೆ ಸಾಲಕ್ಕೂ ಕಾರಣವಾಗುತ್ತದೆ. ಈ ದಿಕ್ಕಿನಲ್ಲಿ ಅದನ್ನು ಮಾಡಬೇಡಿ.
undefined
click me!