ಜೀವನದ ದಿಕ್ಕೇ ಬದಲಿಸುವ ವಾಸ್ತು ಸಲಹೆಗಳು!

First Published Sep 15, 2022, 3:44 PM IST

ವ್ಯಕ್ತಿಯ ಸಂತೋಷ ಮತ್ತು ಸಮೃದ್ಧಿಯಲ್ಲಿನ ಅಡೆತಡೆಗೆ ಹೆಚ್ಚಾಗಿ ಮನೆಯ ವಾಸ್ತು ಕಾರಣವಾಗಿರುತ್ತೆ, ಅದರ ಬಗ್ಗೆ ಹೆಚ್ಚಾಗಿ ಯಾರಿಗೂ ತಿಳಿದಿಲ್ಲ. ವಾಸ್ತು ಸಂಬಂಧಿತ ತಪ್ಪುಗಳಿಂದಾಗಿ, ವ್ಯಕ್ತಿಯು ಮಾನಸಿಕವಾಗಿ ನರಳುತ್ತಾನೆ ಮತ್ತು ಆರ್ಥಿಕವಾಗಿ ತುಂಬಾ ಸಮಸ್ಯೆಗಳನ್ನು ಎದುರಿಸಬೇಕಾಗಿ ಬರುತ್ತೆ. ವಾಸ್ತವವಾಗಿ, ವಾಸ್ತು ಸಂಬಂಧಿತ ದೋಷಗಳು ಮನೆಯಲ್ಲಿ ನಕಾರಾತ್ಮಕ ಶಕ್ತಿಯನ್ನು (Negative Energy) ಹೆಚ್ಚಿಸುತ್ತವೆ, ಇದರಿಂದ ನೀವು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಆದರೆ ಕೆಲವು ಪರಿಹಾರಗಳನ್ನು ಪ್ರಯತ್ನಿಸಿದರೆ, ಖಂಡಿತವಾಗಿಯೂ ಹೆಚ್ಚಿನ ಪ್ರಮಾಣದಲ್ಲಿ ಸಮಸ್ಯೆಗಳಿಂದ ಪರಿಹಾರವನ್ನು ಪಡೆಯಬಹುದು ಎಂದು ವಾಸ್ತು ವಿಜ್ಞಾನದಲ್ಲಿ ತಿಳಿಸಲಾಗಿದೆ.
 

ಲಕ್ಷ್ಮಿ ದೇವಿಯ ಚಿತ್ರವನ್ನು ಈ ಜಾಗದಲ್ಲಿರಿಸಿ

ಮನೆಯ ಉತ್ತರ ದಿಕ್ಕಿನಲ್ಲಿ, ಕಮಲಾಸನದ ಮೇಲೆ ಕುಳಿತಿರುವ ಮತ್ತು ಚಿನ್ನದ ನಾಣ್ಯಗಳನ್ನು ಬೀಳಿಸುತ್ತಿರುವ ಲಕ್ಷ್ಮಿ ದೇವಿ ಚಿತ್ರವನ್ನು ಹಾಕಿ. ಅಂತಹ ಚಿತ್ರವನ್ನು ಹಾಕುವುದು ಶುಭವೆಂದು ಪರಿಗಣಿಸಲಾಗುತ್ತದೆ, ಇದು ಮನೆಯಲ್ಲಿ ಸಮೃದ್ಧಿಯನ್ನು ತರುತ್ತದೆ. ಅಲ್ಲದೆ, ನೀವು ಗಿಳಿಯ ಚಿತ್ರವನ್ನು ಉತ್ತರ ದಿಕ್ಕಿನಲ್ಲಿ ಹಾಕಿದರೆ, ಅದು ಅಧ್ಯಯನ ಮಾಡುವ ಮಕ್ಕಳಿಗೆ ತುಂಬಾ ಒಳ್ಳೇಯದು. 

ನೀರಿನ ಟ್ಯಾಂಕ್ ಎಲ್ಲಿದ್ದರೆ ಉತ್ತಮ?

ವಾಸ್ತು ವಿಜ್ಞಾನದ ಪ್ರಕಾರ, ನೀರಿನ ತೊಟ್ಟಿಯನ್ನು (water tank) ಪಶ್ಚಿಮ ದಿಕ್ಕಿನಲ್ಲಿ ಮನೆಯ ಛಾವಣಿಯ ಮೇಲೆ ಇಡಬೇಕು. ಈ ದಿಕ್ಕಿನಲ್ಲಿ, ಛಾವಣಿಯ ಇತರ ಭಾಗಗಳಿಗಿಂತ ಎತ್ತರದ ವೇದಿಕೆಯನ್ನು ಮಾಡುವ ಮೂಲಕ ನೀರಿನ ಟ್ಯಾಂಕ್ ಅನ್ನು ಇಡಬೇಕು. ವಾಸ್ತುವಿನ ನಿಯಮಗಳ ಪ್ರಕಾರ, ಇದು ತುಂಬಾ ಮಂಗಳಕರವಾಗಿದೆ.

ಸಂತೋಷ ಮತ್ತು ಶಾಂತಿ ನೆಲೆಸಲು

ಮನೆಯ ಮುಖ್ಯಸ್ಥನು ಪ್ರತಿದಿನ ಶಿವ ಮತ್ತು ಚಂದ್ರದೇವರ ಮಂತ್ರಗಳನ್ನು ಪಠಿಸಿದರೆ, ಇಲ್ಲಿ ಸಂತೋಷ ಮತ್ತು ಶಾಂತಿ ಇರುತ್ತದೆ. ವಾಸ್ತುವಿನ ನಿಯಮಗಳ ಪ್ರಕಾರ, ಮನೆಯ ಹಿರಿಯರು ಶಿವನ ಮಂತ್ರಗಳನ್ನು ನಿಯಮಿತವಾಗಿ ಪಠಿಸಬೇಕು, ಇದು ಮನೆಗೆ ಸಂತೋಷವನ್ನು ತರುತ್ತದೆ.

ಶನಿದೇವನ ಕೃಪೆ ಪಡೆಯಲು ಹೀಗೆ ಮಾಡಿ

ಶನಿದೇವನ ಅನುಗ್ರಹವನ್ನು ಪಡೆಯಲು ಮತ್ತು ಸಾಡೇ ಸಾತ್ ಅಥವಾ ಧ್ಯೇಯ ಸಮಯದಲ್ಲಿನ ಬಿಕ್ಕಟ್ಟು ತೊಡೆದು ಹಾಕಲು, ಶನಿ ಯಂತ್ರವನ್ನು ಮನೆಯ ಪಶ್ಚಿಮ ದಿಕ್ಕಿನಲ್ಲಿ ವ್ಯವಸ್ಥಿತವಾಗಿ ಸ್ಥಾಪಿಸಬೇಕು. ಇದು ನಿಮ್ಮ ಜೀವನದಲ್ಲಿ ನೀವು ಎದುರಿಸುವ ಸಮಸ್ಯೆಗಳನ್ನು ಕೊನೆಗೊಳಿಸುತ್ತದೆ. ಪ್ರತಿದಿನ ಬೆಳಿಗ್ಗೆ, ಮುಖ್ಯ ದ್ವಾರದಲ್ಲಿ ಒಂದು ಲೋಟ ನೀರನ್ನು ಸುರಿಯಬೇಕು, ಇದು ಸಕಾರಾತ್ಮಕ ಶಕ್ತಿಯನ್ನು (positive energy) ರವಾನಿಸುತ್ತದೆ.

ಮನೆಯಲ್ಲಿ ಪ್ರಗತಿ

ನೀವು ಮನೆಯ ನೈಋತ್ಯ ಭಾಗವನ್ನು ಎತ್ತರದಲ್ಲಿಟ್ಟರೆ, ಅದು ಮಂಗಳಕರ. ಮನೆಯಲ್ಲಿ ಪ್ರಗತಿ ಮತ್ತು ಶಾಂತಿ ನೆಲೆಸಲು ಇದು ಸಹಾಯ ಮಾಡುತ್ತೆ. ಮನೆಯ ನೈಋತ್ಯ ಭಾಗದಲ್ಲಿ ದಿಬ್ಬ ಅಥವಾ ಬಂಡೆಯಿದ್ದರೆ, ಅದು ತುಂಬಾ ಪ್ರಯೋಜನಕಾರಿಯಾಗಿದೆ.

ಕುದುರೆ ಲಾಳ

ಮನೆಯ ಮುಖ್ಯ ದ್ವಾರದ ಮೇಲೆ ಕಪ್ಪು ಕುದುರೆಯ ಲಾಳವನ್ನು ಇಡುವುದು ಶುಭವೆಂದು ಪರಿಗಣಿಸಲಾಗಿದೆ. ಲಾಳದ ಮುಖವು ಕೆಳಮುಖವಾಗಿರಬೇಕು. ಇದು ದುಷ್ಟ ಕಣ್ಣಿನಿಂದ ರಕ್ಷಿಸುತ್ತದೆ ಮತ್ತು ಮನೆಯಲ್ಲಿ ವಾಸಿಸುವ ಜನರ ಪ್ರಗತಿಯಾಗುವಂತೆ ನೋಡಿಕೊಳ್ಳುತ್ತದೆ.

ಧನಾತ್ಮಕ ಶಕ್ತಿ ತುಂಬಲು ಸೂರ್ಯ ಯಂತ್ರ

ಮನೆಯ ಪೂರ್ವ ದಿಕ್ಕಿನಲ್ಲಿ ಸೂರ್ಯ ಯಂತ್ರವನ್ನು ಸ್ಥಾಪಿಸಿ. ಪೂರ್ವಾಭಿಮುಖವಾಗಿರುವ ಮನೆಯ ಮುಖ್ಯ ದ್ವಾರದ ಹೊರಗೆ ಮೇಲ್ಭಾಗದಲ್ಲಿ ಸೂರ್ಯನ ಚಿತ್ರ ಅಥವಾ ಪ್ರತಿಮೆ ಇರಿಸಿ. ಇದು ಮನೆಯಲ್ಲಿ ಧನಾತ್ಮಕ ಶಕ್ತಿಯನ್ನು ರವಾನಿಸುತ್ತದೆ ಮತ್ತು ನಕರಾತ್ಮಕ ಶಕ್ತಿಯ (negative energy) ಹರಿವನ್ನು ಕಡಿಮೆ ಮಾಡುತ್ತದೆ. ಇದು ಉದ್ಯೋಗ (Career) ಮತ್ತು ವ್ಯವಹಾರದ ದೃಷ್ಟಿಯಿಂದ ಮಂಗಳಕರವಾಗಿದೆ.

ಈ ಸ್ಥಳದಲ್ಲಿ ಹೆಚ್ಚು ವಸ್ತುಗಳನ್ನು ಇಡಬೇಡಿ

ಯಾವಾಗಲೂ ಮನೆಯ ಕೇಂದ್ರ ಭಾಗವನ್ನು ಖಾಲಿ ಇರಿಸಿ. ನಾವು ಈ ಭಾಗದಲ್ಲಿ ಹೆಚ್ಚಿನ ವಸ್ತುಗಳನ್ನು ಇಟ್ಟಾಗ, ಮನೆಯನ್ನು ಪ್ರವೇಶಿಸುವ ಸಕಾರಾತ್ಮಕ ಶಕ್ತಿಗೆ ಅವು ಅಡ್ಡಿಪಡಿಸುತ್ತದೆ. ನೀವು ಇಲ್ಲಿ ವಸ್ತುಗಳನ್ನು ಇಡಲು ಬಯಸಿದರೆ ಕಡಿಮೆ ವಸ್ತುಗಳನ್ನು ಇಡಿ.

ಸಂಪತ್ತು ಹೆಚ್ಚಲು ಕನ್ನಡಿಯನ್ನು ಈ ದಿಕ್ಕಿನಲ್ಲಿಡಿ

ಇಡೀ ಮನೆಯು ಮುಖ್ಯ ಕನ್ನಡಿಯನ್ನು ಹೊಂದಿರಬೇಕು, ಅದನ್ನು ನೀವು ಪೂರ್ವ ಮತ್ತು ಉತ್ತರದ ಗೋಡೆಗಳ ಮೇಲೆ ಇಡಬೇಕು. ಮನೆಯ ಮುಖ್ಯ ದ್ವಾರದ ಮೇಲೆ ಎಂದಿಗೂ ಕನ್ನಡಿ (Mirror( ಹಾಕಬೇಡಿ. ಉತ್ತರ ದಿಕ್ಕಿನಲ್ಲಿ (North Direction) ಕನ್ನಡಿಯನ್ನು ಇಡುವುದರಿಂದ ಆದಾಯ (Income) ಮತ್ತು ಸಂಪತ್ತು (Prosperity) ಹೆಚ್ಚಾಗುತ್ತದೆ.

ಈ ಸ್ಥಳದಲ್ಲಿ ಸ್ನಾನಗೃಹ ಇರಬಾರದು

ವಾಸ್ತು ವಿಜ್ಞಾನದ ಪ್ರಕಾರ, ಸ್ನಾನಗೃಹ ಮತ್ತು ಅಡುಗೆಮನೆಗಳು ಒಂದಕ್ಕೊಂದು ಅಕ್ಕಪಕ್ಕದಲ್ಲಿರಬಾರದು. ಹೀಗಿದ್ದರೆ, ಮನೆಯ ಜನರು ಹೆಚ್ಚು ಅನಾರೋಗ್ಯಕ್ಕೆ ಒಳಗಾಗುತ್ತಾರೆ. ಹಣದ ಹರಿವು ಸಹ ಹೆಚ್ಚಾಗಿರುತ್ತದೆ, ಅಂದರೆ ಖರ್ಚು ಹೆಚ್ಚಾಗುತ್ತದೆ. ಸ್ನಾನಗೃಹದ ನಕಾರಾತ್ಮಕ ಶಕ್ತಿಯನ್ನು ತೆಗೆದುಹಾಕಲು, ಸಮುದ್ರದ ಉಪ್ಪನ್ನು ಗಾಜಿನ ಬಟ್ಟಲಿನಲ್ಲಿ ತುಂಬಿ ಸ್ನಾನಗೃಹದಲ್ಲಿಡಬೇಕು.

ಈ ಸ್ಥಳದಲ್ಲಿ ಸ್ವಚ್ಛವಾದ ಪಾತ್ರೆಗಳನ್ನು ಇರಿಸಿ

ವಾಸ್ತು ವಿಜ್ಞಾನದ ಪ್ರಕಾರ, ಈಶಾನ್ಯ ಮೂಲೆಯಲ್ಲಿ ಅಡುಗೆಮನೆ (kitchen) ಇದ್ದರೆ, ಆ ಅಡುಗೆ ಮನೆಯ ಒಳಗೆ ಗ್ಯಾಸ್ ಸ್ಟೌವ್ ಅನ್ನು ಆಗ್ನೇಯ ಕೋನದಲ್ಲಿ ಇರಿಸಿ ಮತ್ತು ಅಡುಗೆ ಮನೆಯ ಈಶಾನ್ಯ ಮೂಲೆಯಲ್ಲಿರುವ ಸ್ವಚ್ಛವಾದ ಪಾತ್ರೆಯಲ್ಲಿ ನೀರನ್ನು ತುಂಬಿಸಿ. ಇದನ್ನು ಮಾಡುವುದರಿಂದ, ಹಣದ ಹರಿವು ನಿಮ್ಮ ಮನೆಯಲ್ಲಿ ಉಳಿಯುತ್ತದೆ ಮತ್ತು ಹಣವು ಎಲ್ಲೋ ಸಿಕ್ಕಿ ಹಾಕಿಕೊಂಡರೆ, ಅದನ್ನು ಪಡೆಯುವ ಸಾಧ್ಯತೆಗಳು ಹೆಚ್ಚಾಗುತ್ತವೆ.
 

click me!