ನೋಟು ಎಣಿಸುವಾಗ ಎಂಜಲು ತಾಗಿಸಿದ್ರೆ ಲಕ್ಷ್ಮೀ ದೇವಿಗೆ ಬರುತ್ತಂತೆ ಕೋಪ

First Published Dec 13, 2022, 3:17 PM IST

ಹಣವನ್ನು ಲಕ್ಷ್ಮಿ ದೇವಿ ಎಂದು ಪರಿಗಣಿಸಲಾಗುತ್ತದೆ ಮತ್ತು ಪೂಜಿಸಲಾಗುತ್ತದೆ. ನಾವು ತಿಳಿಯದೆಯೇ ಈ ಹಣವನ್ನು ಅವಮಾನಿಸುತ್ತೇವೆ, ಇದರಿಂದಾಗಿ ಶ್ರೀಮಂತರು ಸಹ ಬಡವರಾಗುತ್ತಾರೆ. ತಿಳಿಯದೆಯೇ ನಾವು ಮಾಡುವ ತಪ್ಪುಗಳು ಯಾವುವು? ಅವುಗಳನ್ನು ಹೇಗೆ ಸರಿಪಡಿಸಬಹುದು ಅನ್ನೋದನ್ನು ನೋಡೋಣ. 

ಲಕ್ಷ್ಮಿಯನ್ನು ಎಂದಿಗೂ ಅಗೌರವಿಸಬಾರದು. ಇದು ತಾಯಿ ಲಕ್ಷ್ಮಿಯನ್ನು (Goddess Lakshmi) ಕೋಪಗೊಳ್ಳುವಂತೆ ಮಾಡುತ್ತದೆ. ಆದರೆ ಕೆಲವೊಮ್ಮೆ ನಾವು ತಿಳಿಯದೆಯೇ ತಪ್ಪು ಮಾಡುತ್ತೇವೆ. ಸಾಮಾನ್ಯವಾಗಿ ಜನರು ನೋಟುಗಳನ್ನು ಎಣಿಸಲು ಎಂಜಲು ಬಳಸುತ್ತಾರೆ. ಧರ್ಮಗ್ರಂಥಗಳ ಪ್ರಕಾರ, ಕರೆನ್ಸಿ ಅಥವಾ ನೋಟುಗಳನ್ನು ಎಣಿಸುವಾಗ ಎಂದಿಗೂ ಎಂಜಲು ತಾಗಿಸಬಾರದು . ಈ ಅಭ್ಯಾಸ ವ್ಯಕ್ತಿಯ ಬಡತನಕ್ಕೆ ದೊಡ್ಡ ಕಾರಣವಾಗುತ್ತದೆ. ಇದನ್ನು ಸಂಪತ್ತಿನ ದೇವತೆ ಲಕ್ಷ್ಮಿ ದೇವಿಗೆ ಮಾಡಿದ ಅವಮಾನವೆಂದು ಪರಿಗಣಿಸಲಾಗುತ್ತದೆ. ಹಾಗಿದ್ರೆ ನೀವು ಏನು ಮಾಡಬಹುದು?.

ನೋಟನ್ನು ಎಣಿಸುವಾಗ‌ ಬೆರಳಿಗೆ ಎಂಜಲು ತಾಗಿಸುವ ಮೂಲಕ ಲಕ್ಷ್ಮೀ ದೇವಿಗರ ಅವಮಾನ ಮಾಡಬೇಡಿ. ಬದಲಿಗೆ ನೀವು ನಿಮ್ಮ ಬೆರಳನ್ನು ನೀರಿನಿಂದ ಒದ್ದೆ ಮಾಡುವ ಮೂಲಕ ಅಥವಾ ಪೌಡರ್ (Powder) ಬಳಸುವ ಮೂಲಕ ನೋಟುಗಳನ್ನು ಎಣಿಸಬಹುದು. ಇದರಿಂದ ಕೆಲಸ ಸುಲಭವಾಗಿ ಆಗುತ್ತೆ.

ಹಣವನ್ನು(Money) ಸ್ವಚ್ಛವಾದ ಸ್ಥಳದಲ್ಲಿ ಇರಿಸಿ

ಹಣವನ್ನು ಯಾವಾಗಲೂ ಸ್ವಚ್ಛವಾದ ಸ್ಥಳದಲ್ಲಿ ಇಡಬೇಕು. ನಮ್ಮ ಗ್ರಂಥಗಳಲ್ಲಿ ತಾಯಿ ಲಕ್ಷ್ಮಿಯ ಕೃಪೆಯು ಅವಳನ್ನು ಗೌರವಿಸುವವರ ಮೇಲೆ ಇರುತ್ತದೆ. ಅಂದರೆ, ಅವಳನ್ನು ಸ್ವಚ್ಛವಾದ ಸ್ಥಳದಲ್ಲಿ ಇರಿಸಿದವರ ಮೇಲೆ ಇರುತ್ತದೆ ಎಂದು ಹೇಳಲಾಗಿದೆ. ಪರ್ಸ್ ನಲ್ಲಿ ಹಣವನ್ನು ಇಡುವಾಗ, ಅದರಲ್ಲಿ ಬೇರೆ ಯಾವುದೇ ಕಾಗದ ಇರಬಾರದು ಎಂಬುದನ್ನು ನೆನಪಿನಲ್ಲಿಡಿ.

ಪರ್ಸಿನಲ್ಲಿ (Purse) ಅಥವಾ ನಿಮ್ಮ ಹಣ ಎಲ್ಲಿಯೇ ಇಟ್ಟರೂ ಯಾವುದೇ ರೀತಿಯ ಆಹಾರ, ಎಂಜಲು ಅಲ್ಲಿ ಇರಬಾರದು ಅನ್ನೋದನ್ನು ನೆನಪಿಡಿ. ಇತ್ತೀಚಿನ ದಿನಗಳಲ್ಲಿ, ಜನರು ಆಗಾಗ್ಗೆ ನೋಟುಗಳೊಂದಿಗೆ ಗುಟ್ಕಾವನ್ನು ಪರ್ಸ್‌ಗಳಲ್ಲಿ ಇಡುತ್ತಾರೆ, ಇದು ತಪ್ಪು. ಇದು ಲಕ್ಷ್ಮಿ ದೇವಿಯನ್ನು ಅವಮಾನಿಸಿದಂತೆ ಆಗುತ್ತೆ.

ಇತರರನ್ನು ನೋಯಿಸುವ ಮೂಲಕ ಹಣ ಸೇರಿಸಬೇಡಿ

ನೀವು ಶ್ರೀಮಂತರಾಗಬೇಕೆಂಬ(Rich) ಆಸೆಯಿಂದ ಇತರರಿಗೆ ತೊಂದರೆ ಕೊಡಬೇಡಿ, ಅಂದರೆ, ಇತರರಿಗೆ ನೋವು ಅಥವಾ ದುಃಖ ಉಂಟು ಮಾಡುವ ಸಂಪಾದನೆಗಳಿಂದ ದೂರವಿರಿ. ಈ ರೀತಿ ಗಳಿಸಿದ ಹಣ ಉಳಿಯುವುದಿಲ್ಲ. ಇದು ನೀರಿನಂತೆ ಕೈಯಿಂದ ಖರ್ಚಾಗುತ್ತಲೇ ಇರುತ್ತದೆ.

ಹಣವು ನೆಲದ ಮೇಲೆ ಬೀಳಬಾರದು

ಭಾರತದಲ್ಲಿ, ವಿವಾಹವು(Marriage) ಒಂದು ಹಬ್ಬಕ್ಕಿಂತ ಕಡಿಮೆಯಿಲ್ಲ. ಈ ಸಂದರ್ಭದಲ್ಲಿ, ಜನರು ತಮ್ಮ ಶ್ರೀಮಂತಿಕೆ ಪ್ರದರ್ಶಿಸಲು ಹಣವನ್ನು ಮೇಲೆ ಎಸೆಯುತ್ತಾರೆ. ಈ ರೀತಿ ಹಣವನ್ನು ಎಂದಿಗೂ ನೆಲಕ್ಕೆ ಬೀಳಲು ಬಿಡಬಾರದು. ನೀವು ಯಾರ ಮೇಲಾದರೂ ಹಣ ಎಸೆಯುತ್ತಿದ್ದರೆ, ಅದನ್ನು ಆ ವ್ಯಕ್ತಿಯ ತಲೆಯ ಸುತ್ತಲೂ ತಿರುಗಿಸಿ ಮತ್ತು ಅಗತ್ಯವಿರುವ ಯಾರಿಗಾದರೂ ನೀಡಿ. ಹಣ ನೆಲದ‌ ಮೇಲೆ ಬೀಳುವುದು ಎಂದರೆ ಅದು ಲಕ್ಷ್ಮಿ ದೇವಿಗೆ ಮಾಡಿದ ಅವಮಾನ. ದಾರಿಯಲ್ಲಿ ನಾಣ್ಯ ಕಂಡುಬಂದರೆ, ಅದನ್ನು ನಮಸ್ಕರಿಸುವ ಮೂಲಕವೂ ಎತ್ತ ಬೇಕು.

ಹಣವನ್ನು ಎಸೆಯಬೇಡಿ

ಹಣವನ್ನು ಎಂದಿಗೂ ಎಸೆಯಬಾರದು, ಇದು ಲಕ್ಷ್ಮಿ ಜಿ ಅವರನ್ನು ಕೋಪಗೊಳ್ಳುವಂತೆ ಮಾಡುತ್ತದೆ. ಇದರಿಂದ ಮನೆಯಲ್ಲಿ ಬಡತನ (Poverty) ಉಂಟಾಗುತ್ತದೆ. ಒಬ್ಬ ವ್ಯಕ್ತಿಯು ಹಣ ಹೇಗೆ ಇಟ್ಟುಕೊಳ್ಳುತ್ತಾನೋ, ಹಾಗೆಯೇ ಅದನ್ನು ಗೌರವದಿಂದ ಇತರರಿಗೆ ಹಸ್ತಾಂತರಿಸಬೇಕು.
 

ಉಳಿಸಲು ಕಲಿಯಿರಿ

ಅನಾವಶ್ಯಕವಾಗಿ ಖರ್ಚು ಮಾಡುವವರು ಮತ್ತು ಉಳಿತಾಯಕ್ಕೆ (Savings) ಮಾಡದವರ, ಮನೆಯಲ್ಲಿ ಯಾವಾಗಲೂ ಆರ್ಥಿಕ ಬಿಕ್ಕಟ್ಟು ಇರುತ್ತದೆ. ಹಣವನ್ನು ಗಳಿಸುವ ಜೊತೆಗೆ, ಹಣವನ್ನು ಸಂಪಾದಿಸುವುದು ಸಹ ಅಗತ್ಯ. ಆಗ ಮಾತ್ರ ಲಕ್ಷ್ಮಿ ಮನೆಯಲ್ಲಿ ನೆಲೆಸುತ್ತಾಳೆ.
 

click me!