ಹೀಗ್ ಕರ್ಪೂರ ಬಳಸಿ ನೋಡಿ, ಲೈಫೇ ಬದಲಾಗಬಹುದು ಟ್ರೈ ಮಾಡಿ!

First Published Jan 3, 2023, 5:29 PM IST

ಹಿಂದೂ ಧರ್ಮದಲ್ಲಿ, ಪೂಜೆ ಬಹಳ ಮುಖ್ಯ ಮತ್ತು ಈ ಕಾರಣದಿಂದಾಗಿ, ದೇವರು ಮತ್ತು ದೇವತೆಗಳನ್ನು ಕ್ರಮ ಪ್ರಕಾರ ಪೂಜಿಸಲಾಗುತ್ತೆ. ಪೂಜೆ ಮಾಡುವಾಗ, ಒಬ್ಬರು ದೀಪ, ಧೂಪದ್ರವ್ಯ, ಊದುಬತ್ತಿ, ಹಾರ ಇತ್ಯಾದಿಗಳನ್ನು ಉಪಯೋಗಿಸುತ್ತಾರೆ. ಈ ಪೂಜಾ ಸಾಮಗ್ರಿಗಳಲ್ಲಿ ಕರ್ಪೂರ ಸಹ ಒಳಗೊಂಡಿದೆ. 

ಕರ್ಪೂರವನ್ನು(Camphor) ಮಂಗಳಕರ ಮತ್ತು ಪವಿತ್ರವೆಂದು ಪರಿಗಣಿಸಲಾಗುತ್ತೆ. ಕರ್ಪೂರದ ಸುವಾಸನೆಯು ಅದನ್ನು ಇಡುವ ಸ್ಥಳವನ್ನು ಪವಿತ್ರಗೊಳಿಸುತ್ತೆ ಎಂದು ಹೇಳಲಾಗುತ್ತೆ. ಕರ್ಪೂರ ಸುಡೋದರಿಂದ, ಮನೆಯ ಕಲುಷಿತ ಗಾಳಿಯು ಹಾರಿ ಹೋಗುತ್ತೆ ಮತ್ತು ಪರಿಸರ ಪರಿಶುದ್ಧವಾಗುತ್ತೆ. ಕರ್ಪೂರವು ಶುಕ್ರ ಗ್ರಹವನ್ನು ಪ್ರತಿನಿಧಿಸುತ್ತೆ. ಜ್ಯೋತಿಷ್ಯ ಶಾಸ್ತ್ರದಲ್ಲಿ, ಕರ್ಪೂರಕ್ಕೆ ಸಂಬಂಧಿಸಿದ ಅನೇಕ ಪವಾಡ ಪರಿಹಾರಗಳನ್ನು ಹೇಳಲಾಗಿದೆ, ಇದನ್ನು ಮಾಡೋದರಿಂದ ಸಂತೋಷ ಮತ್ತು ಶಾಂತಿ ನೆಲೆಸುತ್ತೆ ಮತ್ತು ಹಠಾತ್ ಸಂಪತ್ತು ಸಹ ಪಡೆಯಬಹುದು. ಇಲ್ಲಿ ಕರ್ಪೂರ ನಮ್ಮ ಜೀವನ ಸುಧಾರಿಸಲು ಮಾಡುವ ಕೆಲಸದ ಕ್ರಮಗಳ ಬಗ್ಗೆ ಹೇಳಲಿದ್ದೇವೆ. ಆ ಕ್ರಮಗಳನ್ನು ನೋಡೋಣ-

ವೈವಾಹಿಕ ಜೀವನದಲ್ಲಿ(Married life) ಸಂತೋಷಕ್ಕಾಗಿ

ಗಂಡ ಮತ್ತು ಹೆಂಡತಿಯ ನಡುವೆ ಯಾವಾಗಲೂ ಜಗಳವಿದ್ದರೆ, ಕರ್ಪೂರದ ಈ ಪರಿಹಾರವು ಪರಿಣಾಮಕಾರಿ. ಇದಕ್ಕಾಗಿ, ಹೆಂಡತಿ ಕರ್ಪೂರವನ್ನು ರಾತ್ರಿಯಲ್ಲಿ ಗಂಡನ ದಿಂಬಿನ ಕೆಳಗೆ ಇಡಬೇಕು. ಇದರ ನಂತರ, ಬೆಳಿಗ್ಗೆ ಬೇಗನೆ ಎದ್ದು ಯಾವುದೇ ಅಡೆತಡೆಯಿಲ್ಲದೆ ಅದನ್ನು ಸುಟ್ಟುಹಾಕಿ. ಇದನ್ನು ಮಾಡೋದರಿಂದ, ವೈವಾಹಿಕ ಜೀವನದಲ್ಲಿ ಯಾವಾಗಲೂ ಪ್ರೀತಿ (Love) ಮತ್ತು ಶಾಂತಿ (Piece) ಇರುತ್ತೆ.
 

ಮನೆಯಲ್ಲಿ ಶಾಂತಿ ಮತ್ತು ಸಂತೋಷಕ್ಕಾಗಿ.

ಮನೆಯಲ್ಲಿ ಸಂತೋಷ(Happy), ಶಾಂತಿ ಮತ್ತು ಸಕಾರಾತ್ಮಕ ಶಕ್ತಿಗಾಗಿ (Positive Energy), ಪ್ರತಿದಿನ ಬೆಳಿಗ್ಗೆ ಮತ್ತು ಸಂಜೆ ತುಪ್ಪದಲ್ಲಿ ಕರ್ಪೂರವನ್ನು ನೆನೆಸಿ ಮತ್ತು ಅದನ್ನು ಸುಟ್ಟು ಅದರ ಪರಿಮಳವನ್ನು ಮನೆಯಾದ್ಯಂತ ಹರಡಿ. ಇದನ್ನು ಮಾಡೋದರಿಂದ, ನಕಾರಾತ್ಮಕ ಶಕ್ತಿ ಮನೆಯಿಂದ ಹೋಗುತ್ತೆ ಮತ್ತು ಮನೆಯ ಸದಸ್ಯರ ನಡುವೆ ಪರಸ್ಪರ ಪ್ರೀತಿ ಉಳಿಯುತ್ತೆ. ಇದರೊಂದಿಗೆ, ಮನೆಯಲ್ಲಿ ಯಾವಾಗಲೂ ಸಂತೋಷ ಮತ್ತು ಶಾಂತಿ ಇರಲಿ ಮತ್ತು ಸಕಾರಾತ್ಮಕ ಶಕ್ತಿ ಉಳಿಯುತ್ತೆ .

ದೃಷ್ಟಿ ತೆಗೆಯಲು (Bad eye)

ಕುಟುಂಬದಲ್ಲಿರುವ ವ್ಯಕ್ತಿಗೆ  ದೃಷ್ಟಿ ಬಿದ್ದಿದೆ ಎಂದನ್ನಿಸಿದ್ರೆ, ನೀವು ನೇರವಾಗಿ ನಿಲ್ಲಬೇಕು. ನಂತರ, ಕರ್ಪೂರದ ತುಂಡನ್ನು ತೆಗೆದುಕೊಳ್ಳಿ ಮತ್ತು ತಲೆಯಿಂದ ಕಾಲಿನವರೆಗೆ ಕ್ಲಾಕ್ ವೈಸ್ ಮೂರು ಬಾರಿ ತಿರುಗಿಸಿ. ನಂತರ, ಕರ್ಪೂರವನ್ನು ನೆಲದ ಮೇಲೆ ಸುಟ್ಟುಹಾಕಿ. ಇದನ್ನು ಮಾಡುವಾಗ, ಕರ್ಪೂರವನ್ನು ಕಾಗದದ ಮೇಲೆ ಇರಿಸುವ ಮೂಲಕ ನೆಲ ಸುಡದಂತೆ ವಿಶೇಷ ಕಾಳಜಿ ವಹಿಸಿ, ಅದನ್ನು ನೆಲದ ಮೇಲೆ ಇರಿಸಿ ಮತ್ತು ಅದಕ್ಕೆ ನೇರವಾಗಿ ಬೆಂಕಿ ಹಚ್ಚಬೇಕು. ಇದನ್ನು ಮಾಡೋದರಿಂದ, ದುಷ್ಟ ಕಣ್ಣು ಆ ವ್ಯಕ್ತಿಯ ಮೇಲಿಂದ ಹೋಗುತ್ತೆ ಮತ್ತು ಅವನು ಮೊದಲಿನಂತೆ ಒಳ್ಳೆಯವನಾಗುತ್ತಾನೆ.

ಹಣವನ್ನು(Money) ಪಡೆಯಲು

ತಂತ್ರ ಶಾಸ್ತ್ರದ ಪ್ರಕಾರ, ಗುಲಾಬಿ ಹೂವಿನಲ್ಲಿ ಕರ್ಪೂರದ ತುಂಡನ್ನು ಇರಿಸಿ. ನಂತರ ಸಂಜೆ, ಹೂವಿನಲ್ಲಿ ಕರ್ಪೂರವನ್ನು ಸುಟ್ಟು, ದುರ್ಗಾ ದೇವಿಗೆ ಹೂವನ್ನು ಅರ್ಪಿಸಿ. ಇದರಿಂದಾಗಿ ನೀವು ಇದ್ದಕ್ಕಿದ್ದಂತೆ ಹಣವನ್ನು ಪಡೆಯುತ್ತೀರಿ ಮತ್ತು ನಿಮ್ಮ ಕೈ ಸೇರಬೇಕಾದ ಹಣ ಸಹ ಸಿಗುತ್ತೆ. ನೀವು ಈ ಕೆಲಸವನ್ನು ಯಾವಾಗ ಬೇಕಾದರೂ ಪ್ರಾರಂಭಿಸಬಹುದು ಮತ್ತು ಕನಿಷ್ಠ 43 ದಿನಗಳವರೆಗೆ ಇದನ್ನು ಮಾಡಬೇಕು. ನವರಾತ್ರಿಯ ಸಮಯದಲ್ಲಿ ನೀವು ಈ ಕೆಲಸ ಮಾಡಿದರೆ, ನೀವು ಹೆಚ್ಚು ಸಕಾರಾತ್ಮಕ ಪರಿಣಾಮಗಳನ್ನು ನೋಡುತ್ತೀರಿ.

ಆರೋಗ್ಯವನ್ನು(Health) ಸುಧಾರಿಸಲು

ನಿಮ್ಮ ಆರೋಗ್ಯವು ದೀರ್ಘಕಾಲದಿಂದ ಸರಿಯಿಲ್ಲದಿದ್ದರೆ,  ಬೆಳಿಗ್ಗೆಯಿಂದ ಸಂಜೆಯವರೆಗೆ ನಿಯಮಿತವಾಗಿ ಕರ್ಪೂರವನ್ನು ಬಟ್ಟೆಯಲ್ಲಿ ಕಟ್ಟಬೇಕು ಮತ್ತು ನಿಮಗೆ ಅವಕಾಶ ಸಿಕ್ಕಾಗಲೆಲ್ಲಾ ಅದನ್ನು ಸ್ಮೆಲ್ ಮಾಡಬೇಕು. ಇದನ್ನು ಮಾಡುವುದರಿಂದ ನಿಮ್ಮ ಆರೋಗ್ಯದ ಮೇಲೆ ಉತ್ತಮ ಪರಿಣಾಮ ಬೀರುತ್ತೆ. ರಾತ್ರಿ ಮಲಗುವಾಗ ನಿಮ್ಮ ದಿಂಬಿನ ಕೆಳಗೆ ಕರ್ಪೂರವನ್ನು ಇಡಬಹುದು. ಇದನ್ನು ಮಾಡೋದರಿಂದ ಸಹ ಪ್ರಯೋಜನ ಪಡೆಯುತ್ತೀರಿ.
 

ಕೆಲಸದ (Work) ಸಮಸ್ಯೆಗಳನ್ನು ನಿವಾರಿಸಲು

ನೀವು ಕೆಲಸ ಅಥವಾ ಕೆಲಸದ ಸ್ಥಳದಲ್ಲಿ ಯಾವುದೇ ರೀತಿಯ ಸಮಸ್ಯೆಯನ್ನು ಎದುರಿಸುತ್ತಿದ್ದರೆ, ಆಗ ಕರ್ಪೂರವನ್ನು ಕರವಸ್ತ್ರದಲ್ಲಿ ಕಟ್ಟಿ ಮತ್ತು ಅದನ್ನು ನಿಮ್ಮ ಕೆಲಸದ ಮೇಜಿನ ಬಳಿ ಇರಿಸಿ. ಇದನ್ನು ಮಾಡುವ ಮೂಲಕ, ಕರ್ಪೂರ ತನ್ನ ಸಕಾರಾತ್ಮಕ ಶಕ್ತಿಯಿಂದ ಸುತ್ತಮುತ್ತಲಿನ ಪರಿಸರವನ್ನು ಸಕಾರಾತ್ಮಕಗೊಳಿಸುತ್ತೆ.

click me!