Vaastu Tips : ನಿಮ್ಮ ಮನೆಯಲ್ಲಿ ಮನಿ ಪ್ಲಾಂಟ್ ನೆಡುವಾಗ ಈ 5 ತಪ್ಪುಗಳನ್ನು ತಪ್ಪಿಸಿ

First Published Nov 20, 2021, 4:11 PM IST

ವಾಸ್ತು ಪ್ರಕಾರ, ನಿಮ್ಮ ಮನೆಯಲ್ಲಿ ಸಮೃದ್ಧಿಯನ್ನು ಕಾಪಾಡಿಕೊಳ್ಳಲು ಗಾರ್ಡನ್ ಸಹಾಯ ಮಾಡುತ್ತದೆ. ಆರ್ಥಿಕ ಸಮಸ್ಯೆಯಿಂದ (financial problem) ಮುಕ್ತಿ ಪಡೆಯಲು ಹಲವರು ತೋಟ ಮಾಡುತ್ತಾರೆ. ಅದರಲ್ಲಿ ಮುಖ್ಯವಾದ ಗಿಡ ಎಂದರೆ ಮನಿ ಪ್ಲಾಂಟ್, ಈ ಗಿಡ ನೆಡುವಾಗ ಕೆಲವು ವಿಷಯಗಳನ್ನು ಪರಿಗಣಿಸಬೇಕು ಇಲ್ಲದಿದ್ದರೆ ಅದು ಆರ್ಥಿಕ ನಷ್ಟಕ್ಕೆ ಕಾರಣವಾಗಬಹುದು. ಈ ಅಂಶಗಳು ಯಾವುವು ಎಂದು ತಿಳಿಯೋಣ. 

ಮನಿ ಪ್ಲಾಂಟ್  (money plant)
ಜನರು ಹೆಚ್ಚಾಗಿ ಮನೆಯಲ್ಲಿ ಅಥವಾ ಕಚೇರಿಯಲ್ಲಿ ಮನಿ ಪ್ಲಾಂಟ್ ನೆಡುತ್ತಾರೆ. ಸಸ್ಯಗಳು ನಿಮ್ಮ ಮನೆಯನ್ನು ಸುಂದರಗೊಳಿಸುತ್ತದೆ ಮಾತ್ರವಲ್ಲದೆ ನೆಡಲು ಸುಲಭ. ಈ ಗಿಡಕ್ಕೆ ಹೆಚ್ಚಿನ ಆರೈಕೆಯ ಅಗತ್ಯವಿಲ್ಲ. ನೀವು ಅದನ್ನು ಯಾವುದೇ ಬಾಟಲಿ ಅಥವಾ ಹೂವಿನ ಮಡಕೆಯಲ್ಲಿ ಇಡಬಹುದು. ವಾಸ್ತು ಪ್ರಕಾರ,  ಮನೆಯಲ್ಲಿ ಸಮೃದ್ಧಿಯನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. 

ಆರ್ಥಿಕ ಸಮಸ್ಯೆಯಿಂದ (financial problem) ಮುಕ್ತಿ ಪಡೆಯಲು ಹಲವರು ತೋಟ ಮಾಡುತ್ತಾರೆ. ಮನಿ ಪ್ಲಾಂಟ್ ಇಟ್ಟು ಕೊಳ್ಳುವುದು ಸಮೃದ್ಧಿ ಮತ್ತು ಸುಖ ಶಾಂತಿಯನ್ನು ಹೆಚ್ಚಿಸಲು ಸಹಾಯಕ ಎಂದು ನಂಬಲಾಗಿದೆ. ಮನಿ ಪ್ಲಾಂಟ್ ನೆಡುವಾಗ ಯಾವ ವಿಷಯಗಳನ್ನು ಪರಿಗಣನೆಗೆ ತೆಗೆದುಕೊಳ್ಳಬೇಕು ಎಂದು ನೋಡೋಣ.

ಮನಿ ಪ್ಲಾಂಟ್ ಯಾವಾಗಲೂ ಸರಿಯಾದ ದಿಕ್ಕಿನಲ್ಲಿ ನೆಡಬೇಕು. ಅದನ್ನು ಎಂದಿಗೂ ಈಶಾನ್ಯ ದಿಕ್ಕಿನಲ್ಲಿ ನೆಡಬೇಡಿ. ಈ ದಿಕ್ಕಿನಲ್ಲಿ ಮನಿ ಪ್ಲಾಂಟ್ ನೆಡುವುದು ಆರ್ಥಿಕ ನಷ್ಟಕ್ಕೆ ಕಾರಣವಾಗುತ್ತದೆ. ಇದಲ್ಲದೆ ಮನೆಯಲ್ಲಿ ನಕಾರಾತ್ಮಕತೆ (negativity)  ಹೆಚ್ಚುತ್ತದೆ. ಹಣದ ಸಸ್ಯಗಳನ್ನು ಯಾವಾಗಲೂ ಆಗ್ನೇಯ ದಿಕ್ಕಿನಲ್ಲಿ ಇಡಬೇಕು. ಈ ದಿಕ್ಕಿನಲ್ಲಿಯೇ ಇರುವ ಮತ್ತು ಯೋಗಕ್ಷೇಮ ಮತ್ತು ಸಮೃದ್ಧಿಯನ್ನು ಪ್ರತಿನಿಧಿಸುವ ದೇವರು ಗಣೇಶ. ಈ ದಿಕ್ಕಿನಲ್ಲಿ ಗಿಡನೆಡುವುದು ಎಂದರೆ ದೇವರ ಆಶೀರ್ವಾದ ಇರುತ್ತದೆ ಎಂದು ಅರ್ಥ. 

ಮನಿ ಪ್ಲಾಂಟ್ ವೇಗವಾಗಿ ಬೆಳೆಯುತ್ತದೆ. ಆದ್ದರಿಂದ, ಸಸ್ಯದ ಬಳ್ಳಿಗಳು ನೆಲವನ್ನು ಸ್ಪರ್ಶಿಸಬಾರದು ಎಂದು ಕಾಳಜಿ ವಹಿಸಿ. ಅದರ ಬಳ್ಳಿಗಳಿಗೆ ಹಗ್ಗದ ಮೂಲಕ ಸಹಾಯ ಮಾಡಬೇಕು, ಇದರಿಂದ ಅದು ಮೇಲಕ್ಕೆ ಏರುತ್ತದೆ. ವಾಸ್ತುಪ್ರಕಾರ (vaastu shastra) ಬೆಳೆಯುವ ಬಳ್ಳಿಗಳು ಬೆಳವಣಿಗೆ ಮತ್ತು ಸಮೃದ್ಧಿಯ ಸಂಕೇತ. ಮನಿ ಪ್ಲಾಂಟ್ ಲಕ್ಷ್ಮಿ ದೇವಿಯ ಒಂದು ರೂಪವೆಂದು ನಂಬಲಾಗಿದೆ ಮತ್ತು ಇದು ನೆಲವನ್ನು ಸ್ಪರ್ಶಿಸಲು ಬಿಡಬಾರದು.

ವಾಸ್ತು ಪ್ರಕಾರ ಒಣಗಿದ (dry plant)ಮನಿ ಪ್ಲಾಂಟ್ ದುರದೃಷ್ಟದ ಸಂಕೇತ. ಇದು ನಿಮ್ಮ ಮನೆಯ ಆರ್ಥಿಕ ಸ್ಥಿತಿ ಮೇಲೆ ಪರಿಣಾಮ ಬೀರುತ್ತದೆ. ಇದನ್ನು ತಪ್ಪಿಸಲು ನಿಯಮಿತವಾಗಿ ಮನಿ ಪ್ಲಾಂಟ್ ಗೆ  ನೀರುಣಿಸುತ್ತಲೇ ಇರಿ. ಎಲೆಗಳು ಒಣಗಲು ಪ್ರಾರಂಭಿಸಿದರೆ, ಕತ್ತರಿಸಿ ತೆಗೆಯಿರಿ.

ಯಾವಾಗಲೂ ಮನಿ ಪ್ಲಾಂಟ್ ಮನೆಯೊಳಗೆ ಇರಿಸಿ. ಈ ಸಸ್ಯಕ್ಕೆ ಹೆಚ್ಚಿನ ಸೂರ್ಯನ ಬೆಳಕಿನ (sun light) ಅಗತ್ಯವಿಲ್ಲ ಆದ್ದರಿಂದ ಇದನ್ನು ಒಳಾಂಗಣದಲ್ಲಿ ನೆಡಬೇಕು. ವಾಸ್ತು ಪ್ರಕಾರ ಮನೆಯ ಹೊರಗೆ ಹಣದ ಗಿಡ ನೆಡುವುದು ಶುಭವಲ್ಲ. ಇದು ಹೊರಗಿನ ಹವಾಮಾನದಲ್ಲಿ ಸುಲಭವಾಗಿ ಒಣಗುತ್ತದೆ ಮತ್ತು ಬೆಳೆಯುವುದಿಲ್ಲ. ಸಸ್ಯದ ಕುಂಠಿತ ಬೆಳವಣಿಗೆಯು ಅಶುಭವಾಗಿದೆ. ಇದು ಆರ್ಥಿಕ ಕೊರತೆಗೆ ಕಾರಣವಾಗುತ್ತದೆ.

ವಾಸ್ತು ಪ್ರಕಾರ ಮನಿ ಪ್ಲಾಂಟ್ ಎಂದಿಗೂ ಬೇರೆಯವರಿಗೆ ನೀಡಬಾರದು. ಇದು ಶುಕ್ರ ಗ್ರಹವನ್ನು ಕೋಪಗೊಳಿಸುತ್ತದೆ. ಶುಕ್ರ ಸಮೃದ್ಧಿ ಮತ್ತು ಯೋಗಕ್ಷೇಮದ ಸಂಕೇತ. ಬೇರೆಯವರಿಗೆ ಕೊಡೋದ್ರಿಂದ ನಿಮ್ಮ ಮೇಲಿನ ಅನುಗ್ರಹ  ಕಡಿಮೆಯಾಗುತ್ತಂತೆ. 

click me!