ಪ್ರಯಾಣ ಪ್ರಾರಂಭಿಸುವ ಮೊದಲು ಜ್ಯೋತಿಷ್ಯ ಶಾಸ್ತ್ರದ ಈ ವಿಷಯ ನೆನಪಿಡಿ

First Published Nov 22, 2022, 4:11 PM IST

ಜ್ಯೋತಿಷ್ಯ ಶಾಸ್ತ್ರದಲ್ಲಿ, ಸಮಸ್ಯೆಗಳ ವಿಧಗಳನ್ನು ಹೇಳಲಾಗಿದೆ. ಇದನ್ನು ಅನುಸರಿಸುವ ಮೂಲಕ ವ್ಯಕ್ತಿಯು ವಿಶೇಷ ಪ್ರಯೋಜನಗಳನ್ನು ಪಡೆಯುತ್ತಾನೆ. ಅದೇ ಸಮಯದಲ್ಲಿ, ಪ್ರಯಾಣದ ಸಂದರ್ಭದಲ್ಲಿ ಕೆಲವು ನೆನಪಿಟ್ಟುಕೊಳ್ಳಬೇಕಾದ ವಿಷಯಗಳ ಬಗ್ಗೆಯೂ ಸಹ ಹೇಳಲಾಗಿದೆ. ಇದು ವ್ಯಕ್ತಿಯು ಕಾಳಜಿ ವಹಿಸಲು ಬಹಳ ಮುಖ್ಯ. .

ಜ್ಯೋತಿಷ್ಯ ಶಾಸ್ತ್ರದಲ್ಲಿ ಯಶಸ್ವಿ ಜೀವನಕ್ಕೆ ಅನೇಕ ಪರಿಹಾರಗಳಿವೆ. ದೈನಂದಿನ ಜೀವನವನ್ನು ಸರಳ ಮತ್ತು ಸಂತೋಷಕರವಾಗಿಸುವುದು ಹೇಗೆ ಎಂಬುದನ್ನು ಇದು ವಿವರವಾಗಿ ವಿವರಿಸುತ್ತದೆ. ಪ್ರಯಾಣದ ಸಂದರ್ಭದಲ್ಲಿ ಅನೇಕ ಪರಿಹಾರಗಳನ್ನು ಜ್ಯೋತಿಷ್ಯ ಶಾಸ್ತ್ರದಲ್ಲಿ, (astro tips) ಸಹ ಹೇಳಲಾಗಿದೆ. ಏಕೆಂದರೆ ಪ್ರತಿಯೊಬ್ಬರೂ ಆಹ್ಲಾದಕರ ಮತ್ತು ಯಶಸ್ವಿ ಪ್ರಯಾಣವನ್ನು ಬಯಸುತ್ತಾರೆ. ಈ ಪ್ರಯಾಣವು ಕೆಲಸಕ್ಕಾಗಿ ಅಥವಾ ಕೆಲವು ಮಂಗಳ ಕೆಲಸಕ್ಕೆ ಸಂಬಂಧಿಸಿರಬಹುದು. ಆದರೆ ಒಂದು ಸಣ್ಣ ತಪ್ಪು ಸಹ ಎಲ್ಲಾ ಕಠಿಣ ಪರಿಶ್ರಮವನ್ನೂ ಹಾಳುಮಾಡಬಹುದು. ಆದುದರಿಂದ ಪ್ರಯಾಣವನ್ನು ಪ್ರಾರಂಭಿಸುವ ಮೊದಲು ವ್ಯಕ್ತಿಯು ದಿಕ್ಕಿನ (Direction) ಬಗ್ಗೆ ಏಕೆ ಹೆಚ್ಚು ಗಮನ ಹರಿಸಬೇಕು ಅನ್ನೋದನ್ನು ನೋಡೋಣ.

ಒಬ್ಬ ವ್ಯಕ್ತಿಯು ಪ್ರಯಾಣವನ್ನು ಪ್ರಾರಂಭಿಸುವ ಮೊದಲು ದಿಕ್ಕಿನ ಬಗ್ಗೆ ಕಾಳಜಿ ವಹಿಸಬೇಕು.ಪಂಚಾಂಗದಲ್ಲಿ ಒಂದೊಂದು ದಿಕ್ಕಿಗೂ ಒಂದೊಂದು ದಿನ ದೋಷವಿರುತ್ತೆ ಎಂಬುದನ್ನು ತಿಳಿಸಲಾಗಿರುತ್ತದೆ.. ಆದುದರಿಮ್ದ ಆ ದಿನ, ಒಬ್ಬರು ಆ ದಿಕ್ಕಿನಲ್ಲಿ ಪ್ರಯಾಣಿಸಬಾರದು ಅಥವಾ ಅದನ್ನು ತಪ್ಪಿಸಬೇಕು ಎಂದು ಜ್ಯೋತಿಷಾಚಾರ್ಯರು ವಿವರಿಸುತ್ತಾರೆ. ಏಕೆಂದರೆ ದಿಕ್ಕಿನ ಕಡೆಗೆ ಪ್ರಯಾಣಿಸುವುದರಿಂದ ಕೆಲಸವು ಯಶಸ್ವಿಯಾಗುವುದಿಲ್ಲ ಅಥವಾ ಅಪಘಾತ ಆಗುವ ಸಾಧ್ಯತೆ ಇದೆ.

ಯಾವ ದಿನದಂದು ಈ ದಿಕ್ಕುಗಳಲ್ಲಿ ಪ್ರಯಾಣಿಸಬೇಡಿ

ಒಬ್ಬ ವ್ಯಕ್ತಿಯು ಮಂಗಳವಾರ ಅಥವಾ ಬುಧವಾರ (Tuesday and Wednesday) ಉತ್ತರ ದಿಕ್ಕಿನಲ್ಲಿ ಪ್ರಯಾಣಿಸಬಾರದು ಎಂದು ಜ್ಯೋತಿಷ್ಯ ಶಾಸ್ತ್ರದಲ್ಲಿ ತಿಳಿಸಲಾಗಿದೆ. ಯಾವುದೇ ಪ್ರಮುಖ ಕೆಲಸವಿದ್ದರೆ, ನೀವು ಮಂಗಳವಾರ ಬೆಲ್ಲ ತಿನ್ನಬೇಕು ಮತ್ತು ಬುಧವಾರ ಎಳ್ಳು ಮತ್ತು ಕೊತ್ತಂಬರಿ ತಿನ್ನುವ ಮೂಲಕ ಮನೆಯಿಂದ ಹೊರಹೋಗಬೇಕು. ಅಲ್ಲದೆ, ಈ ದಿಕ್ಕಿನ ಕಡೆ ನಡೆಯುವ ಮೊದಲು ಐದು ಹೆಜ್ಜೆಗಳನ್ನು ಹಿಂಬದಿಗೆ ಹೆಜ್ಜೆಹಾಕಿ.

ದಕ್ಷಿಣ ದಿಕ್ಕು

ದಕ್ಷಿಣ ದಿಕ್ಕಿನ ಗ್ರಹ ಗುರು, ಆದ್ದರಿಂದ ಗುರುವಾರ (Thursday) ಈ ದಿಕ್ಕಿನಲ್ಲಿ ಪ್ರಯಾಣಿಸುವುದನ್ನು ನಿಷೇಧಿಸಲಾಗಿದೆ. ನೀವು ಅಗತ್ಯ ಕೆಲಸಗಳಿಗೆ ಹೊರಡಬೇಕಾದರೆ, ಮೊಸರು ಅಥವಾ ಜೀರಿಗೆಯನ್ನು ಸೇವಿಸುವ ಮೂಲಕ ಮನೆಯಿಂದ ಹೊರಹೋಗಿ, ಮೊದಲಿಗೆ ಐದು ಹೆಜ್ಜೆ ಹಿಂದಕ್ಕೆ ತೆಗೆದುಕೊಳ್ಳಿ.

ಈ ವಾರ ಪೂರ್ವ ದಿಕ್ಕಿನಲ್ಲಿ ಪ್ರಯಾಣ ನಿಷೇಧ

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಒಬ್ಬ ವ್ಯಕ್ತಿಯು ಸೋಮವಾರ ಮತ್ತು ಶನಿವಾರ ಪೂರ್ವ ದಿಕ್ಕಿನಲ್ಲಿ ಪ್ರಯಾಣಿಸಬಾರದು. ನೀವು ಹೊರಡಬೇಕಾದರೆ, ಸೋಮವಾರ ಕನ್ನಡಿಯನ್ನು ನೋಡಿ ಮತ್ತು ಶನಿವಾರ ಶುಂಠಿ ಅಥವಾ ಎಳ್ಳನ್ನು ಸೇವಿಸುವ ಮೂಲಕ ಮನೆಯಿಂದ ಹೊರಹೋಗಿ. ಮೊದಲು ಐದು ಹೆಜ್ಜೆಗಳನ್ನು ಹಿಂದಕ್ಕೆ ನಡೆಯಿರಿ.

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಭಾನುವಾರ ಮತ್ತು ಶುಕ್ರವಾರ ಪಶ್ಚಿಮ ದಿಕ್ಕಿನಲ್ಲಿ ಪ್ರಯಾಣಿಸುವುದನ್ನು ತಪ್ಪಿಸಬೇಕು. ಇದು ಸಾಧ್ಯವಾಗದಿದ್ದರೆ, ಮನೆಯಿಂದ ಹೊರ ಹೋಗುವ ಮೊದಲು, ಭಾನುವಾರ ಗೋಧಿ ನುಚ್ಚು ಅಥವಾ ಪಾನ್ ತಿನ್ನುವ ಮೂಲಕ ಮತ್ತು ಶುಕ್ರವಾರ ಬಾರ್ಲಿ ಅಥವಾ ಸಾಸಿವೆ ಸೇವಿಸುವ ಮೂಲಕ ಮನೆಯಿಂದ ಹೊರಹೋಗಿ. ಐದು ಹೆಜ್ಜೆ ಹಿಂದಕ್ಕೆ ಹೋಗಲು (5 step backward) ಮರೆಯಬೇಡಿ.

ಈ ದಿಕ್ಕುಗಳ ಬಗ್ಗೆ ತಿಳಿಯಿರಿ

ವ್ಯಕ್ತಿಯು ಸೋಮವಾರ ಮತ್ತು ಗುರುವಾರ ಆಗ್ನೇಯ ದಿಕ್ಕಿನಲ್ಲಿ ಪ್ರಯಾಣಿಸೋದನ್ನು ತಪ್ಪಿಸಬೇಕು. ಅಲ್ಲದೇ, ಭಾನುವಾರ ಮತ್ತು ಶುಕ್ರವಾರ, ಅವರು ನೈಋತ್ಯ ದಿಕ್ಕಿನಲ್ಲಿ ಪ್ರಯಾಣಿಸಬಾರದು. ಮಂಗಳವಾರ ವಾಯವ್ಯ ದಿಕ್ಕಿನಲ್ಲಿ ಪ್ರಯಾಣಿಸಬಾರದು ಎಂದು ಜ್ಯೋತಿಷ್ಯ ಶಾಸ್ತ್ರದಲ್ಲಿ ತಿಳಿಸಲಾಗಿದೆ. ಇದರೊಂದಿಗೆ, ಬುಧವಾರ ಮತ್ತು ಶನಿವಾರ ಈಶಾನ್ಯ ದಿಕ್ಕಿನಲ್ಲಿ ಪ್ರಯಾಣಿಸುವುದನ್ನು ತಪ್ಪಿಸಬೇಕು. ಮೇಲೆ ತಿಳಿಸಿದ ಕ್ರಮಗಳು ಈ ಸಮಯದಲ್ಲಿಯೂ ಮಾನ್ಯವಾಗಿರುತ್ತವೆ.

click me!