ಸಿಎಂ ನಿವಾಸಕ್ಕೆ ವಿನಯ್ ಗುರೂಜಿ ಭೇಟಿ, ಬಿಎಸ್‌ವೈ ಮುಂದೆ ಮಹತ್ವದ ಬೇಡಿಕೆ

First Published Jun 20, 2021, 6:04 PM IST

 ಅವಧೂತ ವಿನಯ್ ಗುರೂಜಿ ಅವರು ಇಂದು (ಭಾನುವಾರ) ಮುಖ್ಯಮಂತ್ರಿ ಕಾವೇರಿ ನಿವಾಸಕ್ಕೆ ಭೇಟಿ ನೀಡಿ ಸಿಎಂ ಬಿಎಸ್ ಯಡಿಯೂರಪ್ಪ ಅವರನ್ನ ಭೇಟಿ ಮಾಡಿದರು .ಈ ವೇಳೆ ಯಡಿಯೂರಪ್ಪನವರಿಗೆ ವಿನಯ್ ಗುರೂಜಿ ಅವರು ಮಹತ್ವ ಬೇಡಿಕೆಗಳನ್ನ ಇಟ್ಟಿದ್ದಾರೆ.  ಅಲ್ಲದೇ ಕೆಲ ಸಲಹೆಗಳನ್ನ ಸಹ ಕೊಟ್ಟಿದ್ದಾರೆ.

ಅವಧೂತ ವಿನಯ್ ಗುರೂಜಿ ಅವರು ಇಂದು ಸಿಎಂ ಬಿಎಸ್‌ ಯಡಿಯೂರಪ್ಪನವರನ್ನ ಭೇಟಿ ಮಾಡಿದರು.
undefined
ಕಾವೇರಿ ನಿವಾಸಕ್ಕೆ ಆಗಮಿಸಿದ ವಿನಯ್ ಗುರೂಜಿ ಅವರನ್ನ ಸಿಎಂ ಬಿಎಸ್ ಯಡಿಯೂರಪ್ಪ ಅವರು ಗೌರವ ಪೂರ್ವಕವಾಗಿ ಬರಮಾಡಿಕೊಂಡರು.
undefined
ಈ ಭೇಟಿ ವೇಳೆತಮ್ಮ ಜಿಲ್ಲೆಯ ಕೆಲ ಸಮಸ್ಯೆಗಳನ್ನ ಪರಿಹಾರ ಮಾಡುವಂತೆ ಸಿಎಂ ಬಿಎಸ್‌ವೈ ಅವರಿಗೆ ಮನವಿ ಮಾಡಿದರು.
undefined
ಮಲೆನಾಡು ಸೇರಿದಂತೆ ಹಲವು ಕಡೆ ಅಂತರ್ಜಲದ ಮಟ್ಟ ಕುಸಿದಿದೆ. ನೀಲಗಿರಿ, ಅಕೇಶಿಯ ಪ್ಲಾಂಟೇಶ್ ನಿಂದ ಸಾಕಷ್ಟು ಸಮಸ್ಯೆ ಆಗಿದೆ. ಹೀಗಾಗಿ ಅಕೇಶಿಯಾ ಮತ್ತು ನೀಲಗಿರಿ ಮಗಳನ್ನ ತೆಗೆದು ಹಣ್ಣಿನ ಗಿಡಗಳನ್ನ ಬೆಳಿಸಿದ್ರೆ ಪ್ರಾಣಿ-ಪಕ್ಷಿಗಳಿಗೆ ಅನುಕೂಲ ಆಗುತ್ತೆ ಅಂತ ಮನವಿ ಮಾಡಿದರು.
undefined
ಕೊಪ್ಪದಲ್ಲಿ ಇರೋ ಆಸ್ಪತ್ರೆಯನ್ನ ಮೇಲ್ದರ್ಜೆ ಏರಿಸಬೇಕು. ಕೊಪ್ಪದಿಂದ ಶಿವಮೊಗ್ಗ ಬರೋದಕ್ಕೆ ಒಂದೂವರೆ ಗಂಟೆಯಾಗುತ್ತೆ. ಇದ್ರಿಂದ ಸಾಕಷ್ಟು ಸಮಸ್ಯೆ ಆಗ್ತಿದೆ. ಹೀಗಾಗಿ ಅಲ್ಲಿನ ಆಸ್ಪತ್ರೆಯನ್ನ ಮೇಲ್ದರ್ಜೆಗೆ ಏರಿಸಬೇಕು ಎಂದು ಸಮಸ್ಯೆಗಳ ಮನವಿ ಪತ್ರ ನೀಡಿದರು.
undefined
click me!